advertise here

Search

ನವೆಂಬರ್ 09 ಕ್ಕೆ ಪತ್ರಕರ್ತರ ಸಂಘದ ಎಲೆಕ್ಷನ್: ಅಖಾಡದಲ್ಲಿ “ತಂತ್ರ-ಕುತಂತ್ರ-ರಣತಂತ್ರ”


ಬೆಂಗಳೂರು: ಪತ್ರಕರ್ತರ ಕ್ಷೇಮಾಭಿವೃದ್ಧಿ ಮತ್ತು ಕಾಳಜಿ,ಒಳಿತಿಗೆ ಏನ್ ಕೆಲಸ ಮಾಡದಿದ್ರೂ ಪರ್ವಾಗಿಲ್ಲ.ನಿರ್ದಿಷ್ಟ ಅವಧಿ ಚುನಾವಣೆ ಹತ್ತಿರವಾಗ್ತಿದ್ದಂಗೆ ಪತ್ರಕರ್ತರ ಸಂಘದಲ್ಲಿ ಚಟುವಟಿಕೆ ಬಿರುಸುಗೊಳ್ಳುತ್ತವೆ. ಅದೇ ರೀತಿ ನವೆಂಬರ್ 9 ರಂದು( 09-11-2025) ನಡೆಯಲಿರುವ ರಾಜ್ಯವ್ಯಾಪಿ ಚುನಾವಣೆ ಕಣ ಕೂಡ ಯಾವುದೇ ರಾಜಕೀಯ ಚುನಾವಣೆಗಿಂತ ಭಿನ್ನವಾಗಿಲ್ಲ. ಎಲ್ಲಾ ಜಿಲ್ಲೆಗಳಲ್ಲೂ ಘಟಕವಾರು ಚುನಾವಣೆಗೆ ಅಂತಿಮ ಹಂತದ ಸಿದ್ದತೆಗಳು ಪೂರ್ಣಗೊಂಡಿವೆ.ಪತ್ರಕರ್ತರು ಅಧಿಕಾರದ ಚುಕ್ಕಾಣಿ ಹಿಡಿಯೊಕ್ಕೆ ಎಲ್ಲಾ ರೀತಿಯ ತಂತ್ರ-ಕುತಂತ್ರಗಾರಿಕೆ, ರಣತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ.

ರಾಜ್ಯದ ಎಲ್ಲಾ ಘಟಕಗಳದ್ದು ಒಂದು ಕೈಯಾದ್ರೆ ಬೆಂಗಳೂರು ನಗರ ಘಟಕದ ಚುನಾವಣೆಯದ್ದೇ ಇನ್ನೊಂದು ಕೈ ಎನ್ನಬಹುದು. ಏಕೆಂದ್ರೆ ಅಷ್ಟೊಂದು ಬಿರುಸಿನ ಮಟ್ಟದಲ್ಲಿ ಚುನಾವಣೆ ನಡೆಯುತ್ತದೆ.ಈ ಬಾರಿ ಕೂಡ ಅದೇ ಹಣಾಹಣಿ ಸೃಷ್ಟಿಯಾಗಿದೆ.ವಿವಿಧ ಸ್ಥಾನಗಳಿಗೆ ಅಭ್ಯರ್ಥಿಗಳು ಸ್ಪರ್ದೆ ಮಾಡಿದ್ದು ಗೆಲ್ಲಲು ತಂತ್ರಗಾರಿಕೆ ರೂಪಿಸುತ್ತಿದ್ದಾರೆ.

ಚುನಾವಣೆ ಹಿನ್ನಲೆಯಲ್ಲಿ ನಾಮಪತ್ರ  ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ.ವಿವಿಧ ಸ್ಥಾನಗಳಿಗೆ ಆಯ್ಕೆ ಕೋರಿ ಸಲ್ಲಿಸಿದ್ದ ನಾಮಪತ್ರಗಳ ಪರಿಶೀಲನೆ ಕೂಡ ಮುಗಿದಿದ್ದು ಅಖಾಡದಲ್ಲಿ ಉಳಿದಿರುವ ಅಭ್ಯರ್ಥಿಗಳ ಮಾಹಿತಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭಿಸಿದೆ.

ಅಂದ್ಹಾಗೆ   ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯ ಕಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಕೋರಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಹಿರಿಯ ಪತ್ರಕರ್ತ ಸೋಮಶೇಖರ್ ಗಾಂಧಿ, ಮು.ವೆಂಕಟೇಶಯ್ಯ, ಎ.ಬಿ ಶಿವರಾಜ್ ಇದ್ದಾರೆ. ಹಾಗೆಯೇ ಉಪಾಧ್ಯಕ್ಷ ಸ್ಥಾನದ ಅಖಾಡದಲ್ಲಿ ಡಾ.ಕೆ.ಎಸ್ ಸ್ವಾಮಿ,ಎಚ್.ಕೆ ಬಸವರಾಜ್, ಬಿ.ಟಿ.ಶ್ರೀನಿವಾಸ್, ಪರಿಮಳ ಎಚ್.ಎಸ್,ಕೆ.ಎಂ ಜಕ್ರಿಯಾ ಉಳಿದಿದ್ದಾರೆ.

ALSO READ :  ಏನಾಗ್ತಿದೆ ಅರ್ನಾಬ್‌ ಮಹತ್ವಾಕಾಂಕ್ಷೆಯ “ರಿಪಬ್ಲಿಕ್‌ ಕನ್ನಡ”ದಲ್ಲಿ..!?  "ಅನಿಶ್ಚಿತತೆ"ಯ ಕಾರ್ಮೋಡ ಕವಿದಿರುವುದೇಕೆ..!?

ಇನ್ನು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆ ಬಯಿಸಿ ಅಂತಿಮ ಅಖಾಡದಲ್ಲಿ   ಎಸ್.ಡಿ ಚಿಕ್ಕಣ್ಣ,ಟಿ.ಮೋಹನ್ ಉಳಿದಿದ್ದು ಕಾರ್ಯದರ್ಶಿ ಸ್ಥಾನಕ್ಕೆ  ಕೆ.ಹರೀಶ್,ಕೆ.ಎಲ್ ಲೋಕೇಶ್,ಗೋದಾವರಿ ಅವರ ಹೆಸರುಗಳು ಅಂತಿಮಗೊಂಡಿವೆ.ಇನ್ನು ತಾಂತ್ರಿಕ ಕಾರಣಗಳಿಂದ ನಾಮಪತ್ರ ಸಲ್ಲಿಸಿದ ಹೊರತಾಗಿಯೂ ಅನೇಕ ದೋಷಗಳ ಕಾರಣದಿಂದ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಕಾರ್ಯಕಾರಿ ಸಮಿತಿಗೆ ಆಯ್ಕೆ ಬಯಿಸಿ  ನರೇಂದ್ರ ಎಂ.ಪಾರಕೇಟ್ ಅವರು ಸಲ್ಲಿಸಿದ್ದ ನಾಮಪತ್ರ ತಿರಸ್ಕ್ರತವಾಗಿದೆ.  

ಒಟ್ಟಿನಲ್ಲಿ ಬೆಂಗಳೂರು ನಗರ ಜಿಲ್ಲಾ ಘಟಕಕ್ಕೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿ ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ನಡುವೆ ತುರುಸಿನ ಸ್ಪರ್ದೆ ಏರ್ಪಟ್ಟಿರುವುದಂತೂ ಸತ್ಯ.ಆದರೆ ಪ್ರತಿಬಾರಿಯ ಚುನಾವಣೆ ವೇಳೆಯೂ ಆಯ್ಕೆ ಬಯಸಿ ಕಣದಲ್ಲುಳಿವ ಅಭ್ಯರ್ಥಿಗಳು ಪತ್ರಕರ್ತರ ಏಳ್ಗೆ-ಅಭಿವೃದ್ಧಿ-ಪ್ರಗತಿ-ಕ್ಷೇಮಾಭಿವೃದ್ಧಿಗೆ ಹಲವಾರು ಯೋಜನೆ-ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತರುತ್ತೇವೆ.ಅವರಿಗೆ ಎಲ್ಲೇ ಸಮಸ್ಯೆಯಾದ್ರೂ ಅದನ್ನು ಪ್ರಶ್ನಿಸಲು ಇರುತ್ತೇವೆ ಎಂದು ನೂರಾರು ಭರವಸೆ ಕೊಡ್ತಾರೆ.ಆದರೆ ಅವರ ಹಣೆಬರಹ ಆಯ್ಕೆಯಾದ ಮೇಲೆಯೇ ಗೊತ್ತಾಗುತ್ತದೆ.ಈ ಬಾರಿಯೂ ಅದೇ ಪುನರಾವರ್ತನೆಯಾದ್ರೆ ಚುನಾವಣೆ ನಡೆದೇನು ಪ್ರಯೋಜನ..ಆಯ್ಕೆಯಾಗಿ ಬಂದೇನು ಪ್ರಯೋಜನ ಎಂದು ಪತ್ರಕರ್ತರು ಪ್ರಶ್ನಿಸಲಾರಂಭಿಸಿದ್ದಾರೆ.


Political News

“ಸುವರ್ಣ”ದಲ್ಲಿ ಬದಲಾವಣೆ “ಕ್ರಾಂತಿ”..!:- ಮ್ಯಾನೇಜ್ಮೆಂಟ್ “ರಂಗಪ್ರವೇಶ”..! ಉಳಿಯೋರು ಯಾರು..?

“eV ಬಸ್‌” ಡ್ರೈವರ್‌ ಗಳಿಗೆ “ಗೇಟ್‌ ಪಾಸ್”..! “ಕಿಲ್ಲರ್‌” ಕಳಂಕ ತೊಡೆದುಕೊಳ್ಳಲು “ಪ್ಲ್ಯಾನ್‌”.!

“ಅಕ್ರಮ”ದ ವಿರುದ್ಧ ಸಿಡಿದೆದ್ದ “ದಕ್ಷ-ಖಡಕ್” ಅಧಿಕಾರಿ “ಲೇಡಿ ಸಿಂಗಂ” ಆಶಾ ಪರ್ವಿನ್ ಎತ್ತಂಗಡಿ..?!

ಸವಾಲುಗಳ ನಡುವೆ ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕ..

ಹುಡುಕಿಕೊಡಿ.! ಪರಿಶಿಷ್ಟರ “ಅಭ್ಯುದಯ”ಕ್ಕೆ ನಿರ್ಮಿಸಬೇಕಿದ್ದ “ಸಮುದಾಯ ಭವನ”ವೇ ಮಿಸ್…!

“ಸಾರಿಗೆ ಕೂಟ”ದ ಚಂದ್ರು ಅಕ್ಷರಶಃ ಒಂಟಿಯಾದ್ರಾ ..!ಜತೆಗಿದ್ದವರೆಲ್ಲಾ ದೂರ..ದೂರವಾದ್ರಾ..?

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

Scroll to Top