EXCLUSIVE…ARNAB, “KARNATAKA WANTS TO kNOW” ಏನಾಗಲಿದೆ ಕರ್ನಾಟಕದಲ್ಲಿ “ರಿಪಬ್ಲಿಕ್ ಕನ್ನಡ”  ಭವಿಷ್ಯ..!?

ಕರ್ನಾಟಕದಲ್ಲಿ ತಲೆಕೆಳಗಾಯ್ತಾ, ಆರಕ್ಕೇರದ,ಮೂರಕ್ಕೆ ಇಳಿಯದ ಅರ್ನಾಬ್ ಕನಸಿನ “ರಿಪಬ್ಲಿಕ್ ಕನ್ನಡ”(republic kannada) ಚಾನೆಲ್ ನ   ಲೆಕ್ಕಾಚಾರ..! ಬೆಂಗಳೂರು:ಮಾದ್ಯಮ ಕ್ಷೇತ್ರದ ದೈತ್ಯ-ದಿಗ್ಗಜ ಅರ್ನಾಬ್ ಗೋಸ್ವಾಮಿ(arnab goswami) ತುಂಬಾ ಮಹಾತ್ವಾಕಾಂಕ್ಷೆ-ಕನಸು-ನಿರೀಕ್ಷೆಯಲ್ಲಿ ಕಟ್ಟಿದ ರಿಪಬ್ಲಿಕ್ ನ್ಯೂಸ್ ಚಾನೆಲ್(republic news channel) ಅವರ ಲೆಕ್ಕಾಚಾರಗಳಂತೆ ನಡೆಯುತ್ತಿದೆ.ಅದರಿಂದ ಅರ್ನಾಬ್ ಸಂತುಷ್ಟರಾಗಿದ್ದಾರೆ ಕೂಡ.ಆದರೆ ಕರ್ನಾಟಕ(karnataka)ದಲ್ಲೇಕೋ ಮಾತ್ರ ಅವರ ಲೆಕ್ಕಾಚಾರ-ಗಣಿತ-ಗುಣಿತ ಯಾವುದೂ ವರ್ಕೌಟ್ ಆದಂತೆ ಕಾಣ್ತಿಲ್ಲ.ಯಾವ ಭರವಸೆ-ನಿರಿಕ್ಷೆ ಇಟ್ಟುಕೊಂಡು ಕೋಟ್ಯಾಂತರ ಸುರಿದು ರಿಪಬ್ಲಿಕ್ ಸುದ್ದಿ ಸಾಮ್ರಾಜ್ಯ ವಿಸ್ತರಿಸ ಬೇಕೆಂದುಕೊಂಡಿದ್ರೋ ಅದ್ಯಾವುದು ಅಂದುಕೊಂಡಂತೆ ಆಗುತ್ತಿಲ್ಲ ಎನ್ನುವ ಸ್ಪೋಟಕ-ಅಘಾತಕಾರಿ ಸುದ್ದಿ … Read more

EXCLUSIVE…ಜನರ ದುಡ್ಡು…ಕಾಂಗ್ರೆಸ್ ಸರ್ಕಾರದ ಜಾತ್ರೆ…ಗ್ಯಾರಂಟಿ ಅನುಷ್ಟಾನ ಸಮಿತಿಯ ತಿಂಗಳ ಖರ್ಚು 17, 30,800 ರೂ..

ಬೆಂಗಳೂರು:ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು. ರಾಜ್ಯದ ಬೊಕ್ಕಸವನ್ನು ಬರಿದು ಮಾಡಿರುವುದಷ್ಟೇ ಅಲ್ಲ ಆರ್ಥಿಕತೆಯನ್ನು ದಿವಾಳಿ ಮಾಡಿವೆ ಎನ್ನುವ ಆಪಾದನೆ ವಿಪಕ್ಷಗಳಿಂದಷ್ಟೇ ಅಲ್ಲ, ಅದಕ್ಕಾಗಿ ತಮ್ಮ ಜೇಬಿನಿಂದ ಹಣ ಪಾವತಿಸುತ್ತಿರುವ ತೆರಿಗೆದಾರನಿಂದಲೂ ಕೇಳಿಬಂದಿದೆ.ಗ್ಯಾರಂಟಿಗೇ ಜನರ ತೆರಿಗೆ ಹಣದ ರೂಪದಲ್ಲಿ ನೂರಾರು ಕೋಟಿ ಖರ್ಚಾಗುತ್ತಿರುವ ವೇಳೆಯೇ ಮತ್ತೊಂದು ಸ್ಪೋಟಕ ಎನ್ನುವಂತ ಸುದ್ದಿ ಹೊರಬಿದ್ದಿದೆ.ಇದನ್ನು ಕೇಳಿ ತೆರಿಗೆದಾರರು ಮತ್ತಷ್ಟು ಶಾಕ್ ಆದರೂ ಆಶ್ವರ್ಯವಿಲ್ಲ.ಏಕೆಂದರೆ ಇದು ಗ್ಯಾರಂಟಿ ಯೊಜನೆ ಅನುಷ್ಟಾನಕ್ಕೇನೆ ಒಂದು ಕಮಿಟಿ..ಅದಕ್ಕೊಬ್ಬ ಅಧ್ಯಕ್ಷ..ಅದಕ್ಕೆ ಒಂದಷ್ಟು ಉಪಾಧ್ಯಕ್ಷರು,ಅವರ ಕೆಳಗೆ ಇನ್ನೊಂದಷ್ಟು ಜನ,….ಹೀಗೆ ಹನುಮನ … Read more

ಇದು ಇಡೀ ರಾಜ್ಯವೇ ಖುಷಿ ಪಡುವ ವಿಚಾರ…ದಿವ್ಯಾ ವಸಂತ ಈಗ “ಸಾಮ್ರಾಟ್‌” ಚಾನೆಲ್‌ “ಚೀಫ್‌-ಎಡಿಟರ್‌”..

ಬೆಂಗಳೂರು: ಇದು,ಇಡೀ ರಾಜ್ಯವೇ ಖುಷಿ ಪಡುವ ವಿಷಯ ಎಂದ್ಹೇಳಿ ರಾತ್ರೋರಾತ್ರಿ ಸುದ್ದಿಯಾದ ಹೆಣ್ಣುಮಗಳು ದಿವ್ಯಾವಸಂತ.ಆದ್ರೆ ನಂತರ ಮಾಡಿಕೊಂಡ ಯಡವಟ್ಟುಗಳು ಆಕೆಯನ್ನು ಯಾವ ಸ್ಥಿತಿಗೆ ತಂದುನಿಲ್ಲಿಸಿತು ಎನ್ನುವುದನ್ನು ತಿಳಿಸಿ ಹೇಳಬೇಕಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ನೆಗೆಟಿವ್‌ ಆಗಿ ಟ್ರೋಲ್‌ ಆಗಿ ಅದಕ್ಕೆ ಸ್ಪಷ್ಟನೆ ಕೊಡಲು ಕಣ್ಣೀರು ಹಾಕಿದ್ರೂ ಆಕೆಯನ್ನು ಒಪ್ಪಿಕೊಳ್ಳಲು ನಿರಾಕರಿಸುವಂಥ ಸ್ಥಿತಿ ನಿರ್ಮಾಣವಾಗಿದ್ದು ಕೂಡ ಸುಳ್ಳಲ್ಲ.ಸಾಮಾಜಿಕ ಜಾಲತಾಣಗಳಲ್ಲಿ  ಸಿಕ್ಕಾಪಟ್ಟೆ ಆಕ್ಟೀವ್‌ ಆಗಿದ್ದ ಆಕೆ ದಿಡೀರ್‌ ನಾಪತ್ತೆ ಆಗಿಬಿಟ್ಟಿದ್ಲು..ಕಮ್‌ ಬ್ಯಾಕ್‌ ಮಾಡೊಕ್ಕೆ ಒದ್ದಾಡುವಂತಾಗಿತ್ತು.ಇದರ ನಡುವೆಯೇ ಸ್ತ್ರೀ ಎನ್ನುವ ಮಹಿಳಾ … Read more

“ಭ್ರಷ್ಟ” ಡಿಡಿಪಿಐ ನಿಂಗರಾಜಪ್ಪಗೆ ಟ್ರಾನ್ಸ್‌ ಫರ್‌ ಶಿಕ್ಷೆ.. ಡಾ.ಯತೀಂದ್ರ ಅತ್ಯಾಪ್ತ ವಿವೇಕಾನಂದ ಅವರಿಗೆ ಆಯಕಟ್ಟಿನ ಹುದ್ದೆ ಭಾಗ್ಯ.!

ದಶಕಗಳಿಂದಲೂ ಕದಲದೆ ಕೂತಿರುವವರ ವರ್ಗಾವಣೆ ಯಾವಾಗ..!? ಬೆಂಗಳೂರು:ಶಾಲಾ ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆ ಪರ್ವ ಶುರುವಾಗಿದೆ.ಇದರ ಮೊದಲ ಪ್ರಯತ್ನ ಎನ್ನುವಂತೆ ಮೂವರು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.ಈ ಪೈಕಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಡಿಡಿಪಿಐ ವಿವೇಕಾನಂದ ಅವರನ್ನು ಬೆಂಗಳೂರಿಗೆ ವರ್ಗ ಮಾಡಲಾಗಿದೆ. ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರೆನ್ನಲಾದ ಮತ್ತೋರ್ವ ಡಿಡಿಪಿಐ ನಿಂಗರಾಜಪ್ಪ ಅವರನ್ನು ಚಿಕ್ಕಬಳ್ಳಾಪುರಕ್ಕೆ ವರ್ಗ ಮಾಡಲಾಗಿದೆ.ಮೇಲ್ಕಂಡ ವರ್ಗಾವಣೆಯಲ್ಲಿ ಡಾ,ಯತೀಂದ್ರ ಅವರ ಪಾತ್ರವೇ ಹೆಚ್ಚಾಗಿರುವ ಮಾತು ಕೇಳಿಬರುತ್ತಿದೆ. ಹೊಸ ಶೈಕ್ಷಣಿಕ … Read more

ಇದೆಂಥಾ ನ್ಯಾಯ.? ಸಂಬಂಧಿಗೇ ಸಾಲ.. ?! ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ವಿರುದ್ಧ “ಸ್ವಜನ ಪಕ್ಷಪಾತ” ಆರೋಪ..?!

ಇದೆಂಥಾ ನ್ಯಾಯ.? ಸಂಬಂಧಿಗೇ ಸಾಲ.. ?! ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ವಿರುದ್ಧ ಸ್ವಜನ ಪಕ್ಷಪಾತ ಆರೋಪ..?! ಸೀರೆ ವ್ಯಾಪಾರಕ್ಕೆ ಸಾಲ ನೀಡುವಂತೆ ನಿಗಮದ ಉಪನಿರ್ದೇಶಕರಿಂದ ಬ್ಯಾಂಕ್ ಮ್ಯಾನೇಜರ್ ಗೆ ಪತ್ರ…    ಬೆಂಗಳೂರು: ಇದು ಸತ್ಯವೇ ಆಗಿದ್ದಲ್ಲಿ,..ಅಲ್ಲದೇ ಹೀಗೋಂದು ಅವಕಾಶ ಕಾನೂನಿನ ಚೌಕಟ್ಟಿನಲ್ಲಿ ಇಲ್ಲದಿದ್ದರೆ ನಿಜಕ್ಕೂ ಇದಕ್ಕಿಂತ ಮುಜುಗರಕಾರಿ ಹಾಗೂ ಅಪಮಾನಕಾರಿ ಸಂಗತಿ ಮತ್ತೊಂದಿರಲಾರದು.?  ಏಕೆಂದರೆ ಎಲ್ಲೆಡೆ ಹರಿದಾಡುತ್ತಿರುವ ಆ ಒಂದು ದಾಖಲೆಯಲ್ಲಿರುವ ಅಂಶವೇ ಅಷ್ಟೊಂದು ಸ್ಪೋಟಕವಾಗಿದೆ. ರಾಜ್ಯ ಮಹಿಳಾ ಅಭಿವೃದ್ದಿ ನಿಗಮಕ್ಕೆ ಅಧ್ಯಕ್ಷರಾಗಿರುವಂಥವರ ವಿರುದ್ಧ … Read more

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ(SKDRDP)ಸಂಘದ ವಿರುದ್ದ FIR

ಕಿರುಕುಳ-ನಿಂದನೆ-ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಅಧ್ಯಕ್ಷರು ಸೇರಿದಂತೆ ಐವರ ವಿರುದ್ದ ಎಫ್ ಐಆರ್ ಬೆಂಗಳೂರು: ಆರ್ಥಿಕ ನೆರವಿನ ನೆವದಲ್ಲಿ ಮೀಟರ್ ಬಡ್ಡಿ ಮಾಫಿಯಾ ನಡೆಸಲಾಗುತ್ತಿದೆ ಎಂಬ ಆಪಾದನೆ ಹೊತ್ತಿದ್ದ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ(SKDRDP) ಅಧ್ಯಕ್ಷರ ವಿರುದ್ದ ಎಫ್ ಐಆರ್ ದಾಖಲಾ ಗಿದೆ. ಸಾಲ ಪಡೆದ ಮಹಿಳೆ ಸಾಲದ ಕಂತು ಪಾವತಿಸಲು ಕೊಂಚ ವಿಳಂಬವಾಗಿದ್ದಕ್ಕೆ ಸಂಘದ ಪದಾಧಿಕಾರಿಗಳು ಸಂತ್ರಸ್ಥೆ ಮನೆಗೆ ತೆರಳಿ ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೆ  ಸಂತ್ರಸ್ಥೆಯ ಮಗಳ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆಪಾದನೆ ಹಿನ್ನಲೆಯಲ್ಲಿ ಸಂಘದ … Read more

ವೀರೇಂದ್ರ ಹೆಗ್ಗಡೆ ವಿರುದ್ದ ಮಾನಹಾನಿ ವರದಿ ಮಾಡದಂತೆ ಮಾದ್ಯಮಗಳಿಗೆ ಕೋರ್ಟ್ ನಿರ್ಬಂಧ

ಮಾದ್ಯಮಗಳ ವಿರುದ್ದದ ಹೋರಾಟದಲ್ಲಿ ವೀರೇಂದ್ರ ಹೆಗ್ಗಡೆಗೆ ಮುನ್ನಡೆ..ಕೋರ್ಟ್ ಗೆ ಮೊರೆ ಹೋಗಲು ಮಾದ್ಯಮಗಳ ನಿರ್ದಾರ. ಬೆಂಗಳೂರು/ಧರ್ಮಸ್ಥಳ: ಬೆಳ್ತಂಗಡಿ ಬಾಲೆ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಧರ್ಮಸ್ಥಳವನ್ನು ಟಾರ್ಗೆಟ್ ಮಾಡಿಕೊಂಡು ಸುದ್ದಿ ಪ್ರಸಾರ ಮಾಡುತ್ತಿವೆ..ಇದರಿಂದ ತನ್ನ ಮಾನಹಾನಿ ಆಗುತ್ತಿದೆ..ಘನತೆಗೆ ಧಕ್ಕೆ ಬರುತ್ತಿದೆ ಎಂದು ಕೋರ್ಟ್ ಮೊರೆ ಹೋಗಿದ್ದ ಶ್ರೀ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಕಾನೂನಾತ್ಮಕ ಮುನ್ನಡೆ ಆಗಿದೆ. ವೀರೆಂದ್ರ ಹೆಗ್ಗಡೆ ಅವರ ಪ್ರಾರ್ಥನೆ-ಅಹವಾಲನ್ನು ಆಲಿಸಿದ ಕೋರ್ಟ್ ಧರ್ಮಸ್ಥಳವನ್ನಾಗಲಿ, ಧರ್ಮಾಧಿಕಾರಿಗಳ ಬಗೆಗಾಗಲಿ ಅವಹೇಳನಕಾರಿಯಾದ ಅಥವಾ ಆಕ್ಷೇಪಾರ್ಹವಾದ ಯಾವುದೇ … Read more

“ವೈದೇಹಿ ಆಸ್ಪತ್ರೆ” ಆಸ್ತಿ ತೆರಿಗೆ ಕಡತ ಗೌಪ್ಯ ಪ್ರಕರಣ: ಕಂದಾಯಾಧಿಕಾರಿ ಬಸವಾಚಾರಿಗಿಂತ ಮುನ್ನ ಕಡತ ಮುಚ್ಚಿಟ್ಟಿದ್ರಂತೆ AC ಬಸವರಾಜ ಮಗಿ..!?

2024ರ ಅಂತ್ಯದಲ್ಲಿ ಕಂದಾಯಾಧಿಕಾರಿಯಾಗಿ ಬಸವಾಚಾರಿ ಚಾರ್ಜ್ …ಅದಕ್ಕೂ  ಮುನ್ನ ಆ ಹುದ್ದೆಯಲ್ಲಿದ್ದವರು ಬಸವರಾಜ ಮಗಿ ಅಂತೆ..ತನಿಖೆಯಲ್ಲಿ ದೃಢ.. ಬೆಂಗಳೂರು:50 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡತವನ್ನು ಬಚ್ಚಿಟ್ಟು ಕರ್ತವ್ಯಲೋಪ ಎಸಗಿದ ವೈಟ್ ಫೀಲ್ಡ್ ಕಂದಾಯಾಧಿಕಾರಿ ಬಸವಾಚಾರಿ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಮನಿಷ್ ಮೌದ್ಗಿಲ್ ಅವರು ಪತ್ತೆ ಮಾಡಿದ ಈ ಪ್ರಕರಣದಲ್ಲಿ ಕಡತವನ್ನು ಬಚ್ಚಿಟ್ಟಿದ್ದು ಬಸವಾಚಾರಿ ಮಾತ್ರವಲ್ಲ ಅವರ ಸ್ಥಾನದಲ್ಲಿ ಹಿಂದೆ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಅಧಿಕಾರಿಯು ಭಾಗಿಯಾಗಿರುವುದು ಗೊತ್ತಾಗಿದೆ.ಈ ಹಿನ್ನಲೆಯಲ್ಲಿ ಬಸವಾಚಾರಿ … Read more

EXCLUSIVE: IAS ಮನಿಷ್ ಮೌದ್ಗಿಲ್ ಬಲೆಗೆ ಬಿದ್ದ BBMP ಬೃಹತ್ ತಿಮಿಂಗಲ rOಬಸವಾಚಾರಿ..

50 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ವೈದೇಹಿ ಆಸ್ಪತ್ರೆ ಕಡತವನ್ನೇ 1 ವರ್ಷದಿಂದ ಬಚ್ಚಿಟ್ಟುಕೊಂಡಿದ್ದ ಖತರ್ನಾಕ್ ಕಂದಾಯಾಧಿಕಾರಿ ಬಸವಾಚಾರಿ..!! ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬೊಕ್ಕಸ ತುಂಬೊಕ್ಕೆ ಕಂದಾಯ ವಿಭಾಗದ ವಿಶೇಷ ಆಯುಕ್ತ ಮನಿಷ್ ಮೌದ್ಗಿಲ್ ಅಹಿರ್ನಿಷಿ ಪ್ರಯತ್ನ ಮಾಡ್ತಿದಾರೆ.ಇದರಿಂದ ಪಾಲಿಕೆ ಬೊಕ್ಕಸಕ್ಕೆ ಸಾವಿರಾರು ಕೋಟಿ ಸಂದಾಯವಾಯಿತು. ಮನಿಷ್ ಮೌದ್ಗಿಲ್ ಅವರ ಕಾರ್ಯಕ್ಷಮತೆಯಿಂದ ಪಾಲಿಕೆ ಇತಿಹಾಸದಲ್ಲೇ ಸಂಗ್ರಹವಾಗದಷ್ಟು ಆಸ್ತಿ ತೆರಿಗೆ   ಬೊಕ್ಕಸ ಸೇರಿತು.ದಶಕಗಳಿಂದಲೂ ಎಮ್ಮೆ ಚರ್ಮ ದಂತಾಗಿದ್ದ ಕಂದಾಯ ವಿಭಾಗದ ಅಧಿಕಾರಿಗಳು ಮೈ ಕೊಡವಿ ನಿಲ್ಲುವಂತೆ … Read more

BBMP ನೌಕರರ ಸಂಘಕ್ಕೆ ಮಹತ್ವದ ಗೆಲುವು:ಅಧ್ಯಕ್ಷ ಅಮೃತರಾಜ್ ಗೆ 10 ಲಕ್ಷ ಮಾನನಷ್ಟ ನೀಡುವಂತೆ ನೌಕರ ಮಾಯಣ್ಣಗೆ ಆದೇಶ..

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರು ಮತ್ತು ಅಧಿಕಾರಿಗಳ ಕಲ್ಯಾಣ ಸಂಘಕ್ಕೆ ಮಹತ್ವದ ಗೆಲುವು ಲಭಿಸಿದೆ.ಕಾನೂನಾತ್ಮಕ ಹೋರಾಟಕ್ಕೆ ಜಯ ದೊರೆತಿದೆ.ಸಂಘದ ಅಧ್ಯಕ್ಷ ಅಮೃತರಾಜ್ ಹಾಗೂ ಅವರ ಸಂಘ ಮತ್ತು ಅಮೃತರಾಜ್ ಕುಟುಂಬದ ಬಗ್ಗೆ ಮಾನಹಾನಿಕರ ಹೇಳಿಕೆಗಳನ್ನು ನೀಡುತ್ತಿದ್ದರೆನ್ನಲಾದ ಬಿಬಿಎಂಪಿ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಮಾಯಣ್ಣ ಮತ್ತು ಅವರ ಬೆಂಬಲಿಗರು ಮಾನನಷ್ಟ ಸ್ವರೂಪದಲ್ಲಿ 10 ಲಕ್ಷ ರೂ ಪಾವತಿಸುವಂತೆ ಕೋರ್ಟ್ ಎಚ್ಚರಿಕೆ ನೀಡಿದೆ.ಜತೆಗೆ ಅಧ್ಯಕ್ಷ ಬಗ್ಗೆಯಾಗಲಿ, ಅವರ ಕುಟುಂಬದವರ ಬಗ್ಗೆಯಾಗಲಿ ಮತ್ತು ಸಂಘದ ಬಗ್ಗೆಯಾಗಲಿ … Read more