BMTC “6960 ಕೇಸ್‌ ವಜಾ” ಘೋಷಣೆ: ಸಂತಸ..ನೆಮ್ಮದಿ…ನಿಟ್ಟುಸಿರು.. ಜತೆಗೆ ಆಕ್ಷೇಪ…ಅಪಸ್ವರ…ಬೇಸರ….ಅಸಮಾಧಾನ….

ಬೆಂಗಳೂರು: 6960 ಕೇಸ್ ಗಳನ್ನು ವಜಾಗೊಳಿಸಿರುವುದಾಗಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಸತ್ಯವತಿ ಅವರು ಹೇಳಿಕೆ ಕೊಟ್ಟಿರುವುದು ದೊಡ್ಡ ಸಂಚಲನ ಮೂಡಿಸಿದೆ.ಸಂಸ್ಥೆಗೆ  25 ವರ್ಷ ತುಂಬಿರುವ ಹಿನ್ನಲೆಯಲ್ಲಿ ಇಂತದ್ದೊಂದು ಘೋಷಣೆ ಮಾಡುತ್ತಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ. ಅನೇಕ ಪ್ರಕರಣಗಳಲ್ಲಿ ದಂಡನೆಗೆ ಒಳಗಾಗಿದ್ದ ಸಾರಿಗೆ ಸಿಬ್ಬಂದಿಗೆ ಈ ಘೋಷಣೆ ಸಂತಸವನ್ನುಂಟುಮಾಡಿದೆ. ಇದನ್ನು ಐತಿಹಾಸಿಕ ಘೋಷಣೆ ಎಂದೆಲ್ಲಾ ಬಿಂಬಿಸಲಾಗುತ್ತಿದೆ.ಬಿಎಂಟಿಸಿ ಇತಿಹಾಸದಲ್ಲಿ ಇಂತಹ ಬೆಳವಣಿಗೆಯನ್ನು ಐತಿಹಾಸಿಕ ಎಂದು ಒಪ್ಪಿಕೊಳ್ಳುವುದರಲ್ಲಿ ತಪ್ಪೇನಿಲ್ಲ.ಆದರೆ ಸತ್ಯವತಿ ಅವರು ಈ ಶಿಕ್ಷೆ ರದ್ದತಿಗೆ ಮಾನದಂಡ ರೂಪಿಸಿರುವುದರಿಂದ ನಿರ್ದಿಷ್ಟ ಪ್ರಕರಣಗಳಲ್ಲಿ ಶಿಕ್ಷೆ … Read more

“ಚಾಲಕ”ರಿಗೆ ನೆಮ್ಮದಿ ಕೊಡದಿದ್ರೂ ಅಧಿಕಾರಿಗಳೇ “ನಿದ್ದೆ-ವಿಶ್ರಾಂತಿ” ಕೊಡಿ..?!

4 ದಿನ ಅವಿಶ್ರಾಂತವಾಗಿ ದುಡಿದ ಚಾಲಕನಿಗೆ ಮತ್ತೆ ಡ್ಯೂಟಿ ಮಾಡುವಂತೆ  ಮೇಲಾಧಿಕಾರಿ ಗಳಿಂದ ಬೆದರಿಕೆ:ಸಾಮಾಜಿಕ ಜಾಲತಾಣದಲ್ಲಿ ಅಧಿಕಾರಿಗಳ ದರ್ಪದ ವೀಡಿಯೋ ವೈರಲ್‌  ಬೆಂಗಳೂರು/ಚಾಮರಾಜನಗರ: –ಇದು… ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಲ್ಲಿ ಕನ್ನಡ ಫ್ಲ್ಯಾಶ್‌ ನ್ಯೂಸ್‌ ನ ವಿನಯಪೂರ್ವಕ ಕಳಕಳಿ… ಸಚಿವರೇ ಇಲಾಖೆಯನ್ನು ಉದ್ದಾರ ಮಾಡೋಕ್ಕಿಂತ ಮುನ್ನ ತಾವು, ತಮ್ಮ ಇಲಾಖೆಯ ಕೆಲವು ಅಧಿಕಾರಿಗಳಿಗೆ ಮೊದಲು ಮನುಷ್ಯತ್ವದ ಪಾಠ ಕಲಿಸಿಕೊಡಿ.. -ಎಂಡಿ ಎನ್ನಿಸಿಕೊಂಡ ಐಎಎಸ್ ಗಳೇ ಎಸಿ ರೂಮಿನಲ್ಲಿ ಕೂತು ದರ್ಬಾರ್‌ ನಡೆಸುವುದನ್ನು ಬಿಟ್ಟು ಕೆಳ ಹಂತದ ಸಿಬ್ಬಂದಿ … Read more

BMTC EXCLUSIVE…ಯುವತಿ ದೂರಿಗೆ ರಾತ್ರೋರಾತ್ರಿ“ಕಾಮುಕ” ಕಳಂಕ ಹೊತ್ತುಕೊಂಡ ಕಂಡಕ್ಟರ್ ಕೆಂಪಣ್ಣ..!?

ಸಾಕ್ಷ್ಯಗಳಿಲ್ಲದೆ, ಬೆದರಿಸಿ ಬರೆಯಿಸಿಕೊಂಡ ಮುಚ್ಚಳಿಕೆ  ಆಧಾರದ ಮೇಲೆ ಸಸ್ಪೆಂಡ್ ಮಾಡಿದ್ರಾ ಪ್ರಭಾಕರ ರೆಡ್ಡಿ-ರಮ್ಯ..?!:ಕೆಂಪಣ್ಣ ಪತ್ನಿಯಿಂದ ಪೊಲೀಸ್ ಸ್ಟೇಷನ್- ಸರ್ಕಾರಕ್ಕೆ ದೂರು.. ಮಾಡದ ತಪ್ಪಿಗೆ ಕಾಮುಕನಾಗಿಬಿಟ್ಟೆ ಸಾ‍ರ್.. ಸಾಕ್ಷ್ಯ ಸಿಕ್ಕರೆ ಕುತ್ತಿಗೆ ಕೊಯ್ದುಕೊಂಡು ಸತ್ತೋಗುತ್ತೇನೆ ಸಾರ್..: ಕೆಂಪಣ್ಣ ಕಣ್ಣೀರು ಬೆಂಗಳೂರು:ಅಂದುಕೊಂಡಂತೆ ನಡೆದಿದ್ದೇ ಅದಲ್ಲಿ ಮಾತ್ರ ಇದನ್ನು ನಿಜಕ್ಕೂ ಅಮಾನವೀಯ ಎನ್ನಲೇಬೇಕಾಗು ತ್ತದೆ. ದೂರು ಬಂದಾಕ್ಷಣ ಅಧಿಕಾರಿಗಳೆನಿಸಿಕೊಂಡವರು ಪರಿಶೀಲಿಸಬೇಕು..ತನಿಖೆ ನಡೆಸಬೇಕು. ತಪ್ಪನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ಸಾಕ್ಷ್ಯಗಳನ್ನು ಕ್ರೋಢೀಕರಿಸಬೇಕು. ಒಬ್ಬನನ್ನು ತಪ್ಪಿತಸ್ಥ ಎಂದು ನಿರ್ಧರಿಸುವ ಮುನ್ನ ಹತ್ತಾರು ಬಾರಿ ಆಲೋಚಿಸಬೇಕು. ಕರ್ತವ್ಯದಾಚೆಗೂ … Read more