ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ( ಬಿಎಂಟಿಸಿ)ಯಲ್ಲಿ ನಡೆದಿತೆನ್ನಲಾದ ಮತ್ತೊಂದು ಭಾರೀ ಭ್ರಷ್ಟಾ ಚಾರ ಪ್ರಕರಣದಲ್ಲಿ ಆರ್ಥಿಕ ವಿಭಾಗದ ಮುಖ್ಯಾಧಿಕಾರಿಯವರ “ತಲೆದಂಡ”ವಾಗಿದೆ ಎನ್ನುವ ಸ್ಪೋಟಕ ಸುದ್ದಿ ಹೊರಬಿದ್ದಿದೆ. ಅಷ್ಟೇ ಅಲ್ಲ ಅದೇ ವಿಭಾಗದ ಇನ್ನಷ್ಟು ಅಧಿಕಾರಿ ಸಿಬ್ಬಂದಿ ವಿರುದ್ದವೂ ಕಠಿಣ ಕ್ರಮಕ್ಕೆ ಆದೇಶವಾಗಿದೆ ಯಂತೆ. ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎನ್.ವಿ ಪ್ರಸಾದ್‌ ಅವರ ಆದೇಶದ ಮೇರೆಗೆ ಈ ಮಹತ್ವದ ಆದೇಶ ಹೊರಬಿ ದ್ದಿದೆ ಎನ್ನುವ ಸ್ಪೋಟಕ ಮಾಹಿತಿ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಗೆ  ಲಭಿಸಿದೆ.

ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಪ್ರಸಾದ್
ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಪ್ರಸಾದ್

ಲಾಕ್‌ ಡೌನ್‌ ವೇಳೆ ವಾಣಿಜ್ಯ ಮಳಿಗೆಗಳಿಗೆ ಬಾಡಿಗೆ ವಿನಾಯ್ತಿ ನೀಡುವ ವಿಚಾರದಲ್ಲಿ 16 ಕೋಟಿ ಹಗರಣ ನಡೆದಿದ್ದು ಎಲ್ಲರಿ ಗೂ ಗೊತ್ತಿರೋದೆ.ಆ ಪ್ರಕರಣ ಸಂಬಂಧ ವಾಣಿಜ್ಯ ವಿಭಾಗದ 7 ಅಧಿಕಾರಿ-ಸಿಬ್ಬಂದಿ ವಿರುದ್ಧ ಎಫ್‌ ಐ ಆರ್‌ ದಾಖಲಾಗಿತ್ತು. ಇದು ಬಿಎಂಟಿಸಿ ಇತಿಹಾಸದಲ್ಲೇ ಭಾರೀ ದೊಡ್ಡ ಸುದ್ದಿಯನ್ನು ಮಾಡಿತ್ತಲ್ಲದೇ ಎಂಡಿ ಸತ್ಯವತಿ ಹಾಗೂ ರಮ್ಯ ಬಗ್ಗೆ ಹೊಗಳಿ ಕೆ ಮಾತು ಕೇಳಿಬರೊಕ್ಕೆ ಕಾರಣವಾಗಿತ್ತು.ಆ ಪ್ರಕರಣದ ಬಗ್ಗೆ ಸುಧೀರ್ಘ ವಿಚಾರಣೆ ಪ್ರಗತಿಯಲ್ಲಿದೆ.

ಈ ಪ್ರಕರಣ ಇನ್ನೂ ಹಸಿ ಹಸಿ ಇರುವಾಗಲೇ ಅದೇ ಲಾಕ್‌ ಡೌನ್‌ ಟೈಮ್ನಲ್ಲಿ ನಡೆದಿದ್ದ ಮತ್ತೊಂದು ಹಗರಣವನ್ನು ಸತ್ಯವತಿ ಅವರು ಹೊರತೆಗೆದಿದ್ದರಂತೆ.ಆ ಹಗರಣದಲ್ಲಿ ವಾಣಿಜ್ಯ ವಿಭಾಗದವರ ಬದಲು ಹಣಕಾಸು ವಿಭಾಗದ ಅಧಿಕಾರಿ-ಸಿಬ್ಬಂದಿ ಶಾಮೀಲಾಗಿರುವುದನ್ನು ಅವರು ಪತ್ತೆ ಮಾಡಿದ್ದರಂತೆ.ಅದು ಕೂಡ ಸುಮಾರು 6-8 ಕೋಟಿಯಷ್ಟು ಬೃಹತ್‌ ಹಗರಣ ಎನ್ನಲಾಗಿದ್ದು ಈ  ಪ್ರಕರಣದಲ್ಲಿಯೂ ಮೇಲಾಧಿಕಾರಿಗಳ ಗಮನಕ್ಕೆ ತಾರದೆ ಆರ್ಥಿಕ ವಿಭಾಗದ ಅಧಿಕಾರಿಗಳು ಬಾಡಿಗೆ ವಿನಾಯ್ತಿ ನೀಡಿರುವುದನ್ನು ಸತ್ಯವತಿ ಅವರು ಪತ್ತೆ ಮಾಡಿದ್ದರಂತೆ.

ಬಿಎಂಟಿಸಿ ಲೆಕ್ಕಪತ್ರ ವಿಭಾಗದ ಮುಖ್ಯ ಲೆಕ್ಕಾಧಿಕಾರಿ ಅಬ್ದುಲ್‌ ಖುದ್ದೂಸ್
ಬಿಎಂಟಿಸಿ ಲೆಕ್ಕಪತ್ರ ವಿಭಾಗದ ಮುಖ್ಯ ಲೆಕ್ಕಾಧಿಕಾರಿ ಅಬ್ದುಲ್‌ ಖುದ್ದೂಸ್
ಲೆಕ್ಕಪತ್ರ ವಿಭಾಗದ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದ ಹಿಂದಿನ ಎಂಡಿ ಸತ್ಯವತಿ
ಲೆಕ್ಕಪತ್ರ ವಿಭಾಗದ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದ ಹಿಂದಿನ ಎಂಡಿ ಸತ್ಯವತಿ

“ಎಂಪ್ಯಾನಲ್‌” ಅಂದ್ರೆ ಬಿಎಂಟಿಸಿ ವ್ಯಾಪ್ತಿಯಲ್ಲಿ  ವಾಣಿಜ್ಯ ಚಟುವಟಿಕೆ ನಡೆಸುತ್ತಿರುವ ವಹಿವಾಟುದಾರರಿಗೆ ಲಾಕ್‌ ಡೌನ್‌ ಟೈಮ್ನಲ್ಲಿ ಅವರು ಸಂಸ್ಥೆಗೆ ಪಾವತಿಸಬೇಕಿದ್ದ ಶುಲ್ಕವನ್ನು ಆರ್ಥಿಕ ನಷ್ಟದ ಕಾರಣಕ್ಕೆ ಮತ್ತೆ ವಹಿವಾಟುದಾರರಿಗೆ ಹಿಂಪಾವ ತಿಸುವ “ಕ್ರೆಡಿಟ್‌ ನೋಟ್”‌ ಅಡಿಯಲ್ಲಿ ಲೆಕ್ಕಪತ್ರ ವಿಭಾಗದ ಅಧಿಕಾರಿ ಸಿಬ್ಬಂದಿ ಅಕ್ರಮ ಎಸಗಿದ್ದಾರೆ.ತನ್ನ ಗಮನಕ್ಕೆ ತಾರದೆ ಕ್ರೆಡಿಟ್‌ ನೋಟ್‌ ನೀಡಿ 6-8 ಕೋಟಿ ವಂಚನೆ ಮಾಡಿದ್ದಾರೆ ಎಂದು ಸತ್ಯವತಿ ಅವರು ಪ್ರಧಾನ ಕಾರ್ಯದರ್ಶಿ ಅವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದರು.

ಲಾಕ್ ‍‍‍ಡೌನ್‌ ನ್ನೇ ನೆಪ ಮಾಡಿಕೊಂಡು ವಾಣಿಜ್ಯ ವಿಭಾಗದ ಅಧಿಕಾರಿಗಳು ನಡೆಸಿದ ಮಾದರಿಯಲ್ಲೇ ಆರ್ಥಿಕ ವಿಭಾಗದ ಅಧಿ ಕಾರಿ-ಸಿಬ್ಬಂದಿ ಮತ್ತೊಂದು ಹಗರಣ ಎಸಗಿರುವುದನ್ನು ಪತ್ತೆ ಮಾಡಿ ಅದರ ಬಗ್ಗೆ ಸಂಪೂರ್ಣವಾದ ವಿವರವನ್ನು ಎಳೆಎಳೆ ಯಾಗಿ  ಸಾರಿಗೆ ಇಲಾಖೆ ಪ್ರಧಾನಕಾರ್ಯದರ್ಶಿ ಅವರಿಗೆ  ಪತ್ರದ ಮೂಲಕ ತಿಳಿಸಿದ್ದ ಹಿಂದಿನ ವ್ಯವಸ್ಥಾಪಕ ನಿರ್ದೇಶಕರಾದ ಸತ್ಯವತಿ ಮೇಡಮ್‌ ಮುಖ್ಯಾಧಿಕಾರಿ ಸೇರಿದಂತೆ ಹಗರಣದಲ್ಲಿ ಭಾಗಿಯಾಗಿದ್ದರೆನ್ನಲಾದ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದರು.

ಸತ್ಯವತಿ ಅವರು ಲೆಕ್ಕಪತ್ರ ವಿಭಾಗದವರಿಂದ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ತಮಗೆ ಪತ್ರ ಬರೆದು ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದನ್ನು ಸಾರಿಗೆ ಇಲಾಖೆ ಪ್ರಧಾನಕಾರ್ಯದರ್ಶಿ ಪ್ರಸಾದ್‌ ಅವರೇ  ಮಾದ್ಯಮ ಗಳ ಮುಂದೆ ಒಪ್ಪಿಕೊಂಡಿದ್ದರು.ಅಷ್ಟೇ ಅಲ್ಲ ಸಚಿವರಿಗೆ ಆ ಪತ್ರವನ್ನು ರವಾನಿಸಿ ಮುಂದಿನ ಕ್ರಮದ ಬಗ್ಗೆ ತಿಳಿಸುವುದಾಗಿ ಯೂ ಹೇಳಿದ್ರು.ಮಾದ್ಯಮಗಳಿಗೆ ಮಾಹಿತಿ ನೀಡಿದ ಮೂರ್ನಾಲ್ಕು ದಿನಗಳಲ್ಲೇ  ಲೆಕ್ಕಪತ್ರ ವಿಭಾಗದ ಹೆಡೆಮುರಿ ಕಟ್ಟುವ ಕೆಲಸ ಮಾಡಿ ನಿಬ್ಬೆರಗಾಗುವಂತೆ ಮಾಡಿದ್ದಾರೆ.

6-8 ಕೋಟಿಯಷ್ಟು ಹಗರಣವನ್ನು ಬಯಲಿಗೆಳೆದ ಸತ್ಯವತಿ ಅವರ ದಕ್ಷತೆ ಬೆನ್ನಲ್ಲಿ ಮಾದ್ಯಮಗಳು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರನ್ನು ಈ ಬಗ್ಗೆ ವಿಚಾರಿಸಿ ಮಾಹಿತಿ ಕೇಳಿದ್ದವು.ಕೆಲ ನಿಮಿಷಗಳ ಮುಂದೆ ಮಾಹಿತಿ ಅನ್ವಯ ಎಂಡಿ ಸತ್ಯ ವತಿ ಅವರ ವರದಿ ಮೇರೆಗೆ ಎಲ್ಲಾ ಅಂಶಗಳನ್ನುಕೂಲಂಕುಷವಾಗಿ ಪರಿಗಣಿಸಿದ ಬಳಿಕ ಪ್ರಸಾದ್‌ ಅವರು ಬಿಎಂಟಿಸಿ ಆಡಳಿತ ಕ್ಕೆ ಲೆಕ್ಕಪತ್ರ ವಿಭಾಗದ ಮುಖ್ಯಾಧಿಕಾರಿಗಳು ಸೇರಿದಂತೆ ಹಗರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ಇತರೆ ಅಧಿಕಾರಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ  ಸೂಚಿಸಿದ್ದಾರೆ ಎನ್ನಲಾಗಿದೆ.

ಲಾಕ್‌ ಡೌನ್ ಸಮಯವನ್ನು ಬಿಎಂಟಿಸಿಯ ಕೆಲವು ಅಪ್ರಮಾಣಿಕ ಅಧಿಕಾರಿ ಸಿಬ್ಬಂದಿ ಹೇಗೆಲ್ಲಾ ಮಿಸ್ಯೂಸ್‌ ಮಾಡಿಕೊಂಡ ರೆನ್ನುವುದು ಕೊನೆಗೂ ಬಯಲಾಗಿದೆ.ಆದ್ರೆ ನಮಗೆ ಎನ್ನಿಸುವ ವಿಚಾರ ಎಂದ್ರೆ ಅಕ್ರಮ ನಡೆಸಿರುವವರ ಅಂದಾದರ್ಬಾರ್‌ ಇಷ್ಟಕ್ಕೆ ನಿಂತಂತೆ ಕಾಣುತ್ತಿಲ್ಲ..ಇದರ ಆಳವನ್ನು ಇನ್ನಷ್ಟು ಅಗೆದರೆ ಮೀನುಗಳು ಜತೆ ತಿಮಿಂಗಲಗಳೂ ಹೊರಬರುವ ಸಾ‍ಧ್ಯ ತೆಗಳಿವೆ.ನೂತನ ಎಂಡಿ ರಾಮಚಂದ್ರನ್‌ ಅವರು ಈ ಕೆಲಸಕ್ಕೆ ಕೈ ಹಾಕುವಂತಾಗಲಿ.

Spread the love

Leave a Reply

Your email address will not be published. Required fields are marked *