advertise here

Search

ಕೋರ್ಟ್ ಕಲಾಪ ವೇಳೆ ನ್ಯಾಯಮೂರ್ತಿ ಪ್ರಸನ್ನ ವರಾಳೆ ಗದ್ಗದಿತ-ಭಾವುಕ


ನ್ಯಾಯಮೂರ್ತಿ ಪ್ರಸನ್ನ ವರಾಳೆ ಅವರ ಅಂತಃಕರಣಕ್ಕೆ ಕರುನಾಡು ಮೆಚ್ಚುಗೆ

ಬೆಂಗಳೂರು: ಹೈ ಕೋರ್ಟ್ ನಲ್ಲಿ ಇಂಥಾ ಘಟನೆಗಳು ನಡೆಯುವುದು ಅಪರೂಪ ಇರಬೇಕು.ಅಂತದ್ದೇ ಒಂದು ಘಟನೆಗೆ ಹೈ ಕೋರ್ಟ್ ನಲ್ಲಿ ನಡೆದ ಕಲಾಪವೇ ಸಾಕ್ಷಿ.ಮಲಗುಂಡಿಯಲ್ಲಿ ಜನರನ್ನು ಇಳಿಸಿ ಮಲಗುಂಡಿಯನ್ನು ಸ್ವಚ್ಛಗೊಳಿಸುತ್ತಿರುವ ಬಗ್ಗೆ ಮಾದ್ಯಮಗಳಲ್ಲಿ ಪ್ರಕಟವಾದ ವರದಿಗಳ ಹಿನ್ನಲೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಮೇರೆಗೆ ನಡೆಯುತ್ತಿದ್ದ ಕಲಾಪದ ವೇಳೆ ಇಂತದ್ದೊಂದು ಅಪರೂಪದ ಘಟನೆ ನಡೆದಿದೆ. ನ್ಯಾಯಮೂರ್ತಿಗಳಾದ ಪ್ರಸನ್ನ ವರಾಳೆ ಅವರು ಕಲಾಪದ ವೇಳೆ ಗದ್ಗಿತರಾದ ಎಂದು ಮಾದ್ಯಮಗಳು ಮಾಡಿದ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ನ್ಯಾಯಮೂರ್ತಿ ಕೃಷ್ಣದೀಕ್ಷಿತ್ ಅವರನ್ನೊಳಗೊಂಡ ವಿಭಾಗೀಯ ಪೀಠದಲ್ಲಿ ಕಲಾಪ ನಡೆಯುವಾಗ ಅಪರೂಪದ ಪ್ರಸಂಗ ನಡೆದಿದೆ ಎನ್ನುವುದು ಮಾದ್ಯಮಗಳಲ್ಲಿ ವರದಿಯಾಗಿದೆ.ಹಣ ಕೊಟ್ಟರೆ ಯಂತ್ರಗಳಲ್ಲಿ ಮಲವನ್ನು ಸ್ವಚ್ಛಗೊಳಿಸುವ ವ್ಯವಸ್ಥೆಗಳಿವೆ.ಹಾಗಿರುವಾಗ ಕೆಲ ಸಾವಿರ ಉಳಿಸಲಿಕ್ಕಾಗಿ ಜನ ಅಮಾಯಕರನ್ನು ಮಲಗುಂಡಿಗೆ ಇಳಿಸುವುದು ಅಮಾನುಷವಲ್ಲವೇ.? ಇವತ್ತಿನ ಕಾಲಘಟ್ಟದಲ್ಲೂ ಇಂಥದ್ದೊಂದು ಅಮಾನುಷ ವ್ಯವಸ್ಥೆ ಇದೆ ಎಂದರೆ ಆಶ್ವರ್ಯದೊಂದಿಗೆ ಆತಂಕ ಉಂಟಾಗುತ್ತದೆ ಎಂದು ವರಾಳೆ ಅಭಿಪ್ರಾಯಿಸಿದರು.

ALSO READ :  ಮಾರ್ಚ್ 4ಕ್ಕೆ ಮುನ್ನವೇ ಪ್ರತಿಭಟನೆ: ಸಾರಿಗೆ ಕೂಟದ ಚಂದ್ರುಗೆ, ಜಂಟಿ ಕ್ರಿಯಾಸಮಿತಿ ಅನಂತಸುಬ್ಬರಾವ್ ತಿರುಗೇಟು

ಕಲಾಪ ನಡೆಯುತ್ತಿದ್ದ  ವೇಳೆ ಒಂದು ಹಂತದದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಾಗ  ವರಾಳೆ ಗದ್ಗಿತರಾದರು.ಮಲಗುಂಡಿ ಸ್ವಚ್ಛತೆ ಘಟನೆ ಅವರನ್ನು ತುಂಬಾ ಕಾಡಿದೆ.ಇಂಥಾ ಕೃತ್ಯಕ್ಕೆ ಅಮಾಯಕರನ್ನು ಬಳಸಿಕೊಳ್ಳುವವರ ಬಗ್ಗೆ ಆಕ್ರೋಶ ವ್ಯಕ್ತಪಡಿಸದರೆನ್ನುವ ಸಂಗತಿಗಳು ಮಾದ್ಯಮಗಳಲ್ಲಿ ವರದಿಯಾಗಿದೆ.

ಕೋರ್ಟ್ ನಲ್ಲಿ ಕಲಾಪ ನಡೆಯುವಾಗ,ತೀರ್ಪು ಕೊಡುವಾಗ ಅನೇಕ ನ್ಯಾಯಮೂರ್ತಿಗಳು ಅತ್ತಿರುವುದುಂಟು,ಭಾವೋದ್ವೇಗಕ್ಕೆ ಒಳಗಾಗಿರುವುದುಂಟು.ಅಸಹನೆಯಿಂದ ಆಕ್ರೋಶ ವ್ಯಕ್ತಪಡಿಸಿರುವಂಥ ಘಟನೆಗಳು ನಡೆದಿವೆ.ಇದರ ನಡುವೆ ನ್ಯಾಯಮೂರ್ತಿ ವರಾಳೆ ಅವರು ಗದ್ಗದಿತರಾದೆನ್ನುವ ಸಂಗತಿ ಸಿಕ್ಕಾಪಟ್ಟೆ ವೈರಲ್ ಆಗಿದೆ.ಅವರ ಅಂತಃಕರಣಕ್ಕೆ ಎಲ್ಲರೂ ಅಭಿಮಾನ ವ್ಯಕ್ತಪಡಿಸಿದ್ದಾರೆ.


Political News

ಅಕ್ರಮ ಖಾತಾ ವರ್ಗಾವಣೆ ಆರೋಪಕ್ಕೆ ತುತ್ತಾದ AC ದುರ್ಗಶ್ರೀ,ತಹಸೀಲ್ದಾರ್ ವಿಭಾ ರಾಠೋಡ್ ವಿರುದ್ಧ ಮತ್ತೆರೆಡು ದೂರು…ಸಾಕ್ಷ್ಯವಿದ್ರೂ ಕ್ರಮ ಕೈಗೊಳ್ಳದೆ ಸಚಿವ ಕೃಷ್ಣ ಭೈರೇಗೌಡ ಮೌನ..?!

DCM ಆಪ್ತ ಬಿ.ಎಸ್ .ಪ್ರಹ್ಲಾದ್ ಕಚೇರಿ ಮೇಲೆ ಇ.ಡಿ ರೇಡ್ ಗೆ ಬೆಚ್ಚಿಬಿದ್ದ ಭ್ರಷ್ಟರು: ನಿಟ್ಟುಸಿರು ಬಿಟ್ಟ ಸಂತ್ರಸ್ಥ ಅಧಿಕಾರಿ ಸಿಬ್ಬಂದಿ..

ಪೋಡಿ ಇಲ್ಲ,ಪ್ರತ್ಯೇಕ ಸರ್ವೆ ಸ್ಕೆಚ್ ಆಗಿಲ್ಲ-ಸರ್ವೆ ನಂಬರ್ ಕೊಟ್ಟಿಲ್ಲ, GPA ಮೇಲೆ ಖಾಸಗಿ ಬಿಲ್ಡರ್ಸ್ ಗೆ ಎಸಿ, ತಹಸೀಲ್ದಾರ್ ರಿಂದ ಖಾತಾ ವರ್ಗಾವಣೆ.!

ಬಣ್ಣಗಳಲ್ಲಿ ಲೀನವಾದ Btv ಮೇಕಪ್‌ಮ್ಯಾನ್‌ ಚೇತನ್

Exclusive: ಅಕ್ರಮ-ಅವ್ಯವಸ್ಥೆಯ ಗೂಡಾಯ್ತಾ ಪಿಯು ಇಲಾಖೆ? ಏನ್ ಮಾಡುತ್ತಿದ್ದೀರಾ ಶಿಕ್ಷಣ ಸಚಿವರೇ!?

BMTC ಸಿಬ್ಬಂದಿಯಿಂದಲೇ ಬಸ್ ಕ್ಲೀನಿಂಗ್.. ಸ್ವಚ್ಛತೆಗೆಂದೇ ಕೊಟ್ಟ ಟೆಂಡರ್ ಹಣ ಎಲ್ಲೋಯ್ತು!?

Sahyadri science College alumni meet: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳ ಮಹಾಸಮಾಗಮಕ್ಕೆ ಮುಹೂರ್ತ ಫಿಕ್ಸ್

Puneeth rajkumar award: ನ್ಯೂಸ್ ಚಾನೆಲ್‌ಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 12 ಕ್ಯಾಮೆರಾಮನ್ ಮಿತ್ರರಿಗೆ ಪುನೀತ್ ರಾಜ್‌ಕುಮಾರ್ ಪ್ರಶಸ್ತಿ

Scroll to Top