advertise here

Search

EXCLUSIVE… 8 ತಿಂಗಳಲ್ಲಿ BMTC ಡ್ರೈವರ್ಸ್-ಕಂಡಕ್ಟರ್ಸ್‌   ವಿರುದ್ಧ 11412  ದೂರು..!

ಪ್ರಯಾಣಿಕರ ಜತೆಗೆ  ಅಸಭ್ಯ-ದುರ್ವರ್ತನೆ.-ವೇಗ-ಅಜಾಗರೂಕತೆ ಚಾಲನೆ- ಹಣ ಪಡೆದು ಟಿಕೆಟ್‌ ನೀಡದೆ ವಂಚನೆ ಬಗ್ಗೆಯೇ  ವ್ಯಾಪಕ ದೂರುಗಳು..    ಇದು ಸ್ವತಃ ಸಚಿವ ರಾಮಲಿಂಗಾರೆಡ್ಡಿ ಅವರೇ ಶಾಕ್‌ ಆಗುವಂಥ ಅಘಾತಕಾರಿ ಸುದ್ದಿ.ಇಲಾಖೆ ಸುಧಾರಣೆ ಮಾಡೊಕ್ಕಿಂತ ಮುನ್ನ ನಿಜವಾಗಿ ಸುಧಾರಣೆ ಆಗಬೇಕಿರುವುದು ಏನು ಎನ್ನುವುದು ಈ ಸ್ಟೋರಿ ಓದಿದ ಮೇಲೆ ಗೊತ್ತಾಗಬಹುದೇನೋ..? ತಾನು ನಿರ್ವಹಿಸುತ್ತಿರುವ ಖಾತೆಗೆ ಇಂತದ್ದೊಂದು ಕಳಂಕ ತಟ್ಟಿದೆಯೆಲ್ಲಾ ಎಂದು ಅವರಿಗೇ ಬೇಸರವಾಗಬಹುದು..ನನಗೆ ಇಂಥಾ ಖಾತೆ ನಿಜಕ್ಕೂ ಬೇಕಾ ಎಂದು ಅವರು ಒಂದ್‌ ಕ್ಷಣ ಆಲೋಚಿಸಿದ್ರೂ ತಪ್ಪೇನಿಲ್ಲ..ಏಕೆಂದರೆ ಅಂತಹದೊಂದು … Read more

“ಮಾಧ್ಯಮ”ಗಳ ತಾಕತ್ತಿಗೆ ಸಾಣೆ ಹಿಡಿದ “ಸುಜಾತಾಭಟ್‌ ಪ್ರಹಸನ”

ಕನ್ನಡ ಪತ್ರಿಕೋದ್ಯಮದಲ್ಲಿ ಸತ್ತೇ ಹೋಗಿದ್ದ ತನಿಖಾ ಪತ್ರಿಕೋದ್ಯಮದ ಜೀವಂತಿಕೆಗೆ ಸಾಕ್ಷಿಯಾದ ಮೀಡಿಯಾ ಟ್ರಯಲ್‌ –ಆಸಕ್ತ ಪತ್ರಕರ್ತರ ಅಧ್ಯಯನಕ್ಕೆ ಉತ್ತಮ ನಿದರ್ಶನವಾಗಬಲ್ಲ ಮೀಡಿಯಾ ಕೇಸ್‌ ಸ್ಟಡಿ.. ಇದು ಮಾಧ್ಯಮ ತಾಕತ್ತು..ಹಾಗೆಯೇ ಗೆಲುವು ಕೂಡ.. ಮಾಧ್ಯಮಗಳು ಮನಸು ಮಾಡಿದ್ರೆ ತಮ್ಮ ಹೊಣೆಗಾರಿಕೆಯನ್ನು ದಿಟ್ಟವಾಗಿ ಪ್ರದರ್ಶಿಸಿದ್ರೆ,ಸತ್ಯ  ಎಷ್ಟೇ ಆಳದಲ್ಲಿ ನಿಗೂಢವಾಗಿ ಹೂತೋಗಿರಲಿ,ಅದನ್ನು ಪಾತಾಳಗರಡಿ ಹಾಕಿ ಹೆಕ್ಕಿ ತೆಗೆಯಬಲ್ಲವು…ಜಗತ್ತಿಗೆ ಮಾಧ್ಯಮಗಳ ತಾಕತ್ತು ಅನೇಕ ಸನ್ನಿವೇಶಗಳಲ್ಲಿ ಸಾಬೀತಾಗಿದೆ. ಮತ್ತೊಂದು ಸನ್ನಿವೇಶದಲ್ಲಿ .ಪ್ರಪಂಚಕ್ಕೆ ಸತ್ಯದರ್ಶನವಾಗಿದೆ. ಇದಕ್ಕೆ ಧರ್ಮಸ್ಥಳನ ಸುಜಾತಾ ಭಟ್ ಅವರ ಕಾಲ್ಪನಿಕ ಮಗಳ ಕಟ್ಟುಕಥೆಯೇ  … Read more

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಬೆಂಗಳೂರು: ಸುವರ್ಣ ನ್ಯೂಸ್ ಚಾನೆಲ್ ನ ಸುದ್ದಿ ಸಂಪಾದಕ/ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ದ ಎಫ್ ಐ ಆರ್ ಮಾಡಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಸುವರ್ಣ ಸುದ್ದಿವಾಹಿನಿಯ ದಕ್ಷಿಣ ಕನ್ನಡ ಜಿಲ್ಲೆಯ ವರದಿಗಾರ ಹಾಗೂ ಕ್ಯಾಮೆರಾಮನ್ ಮೇಲೆ ಸೌಜನ್ಯಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮ್ಮರೋಡಿ, ಗಿರೀಶ್ ಮಟ್ಟಣ್ಣನವರ್ ಹಾಗೂ ತಂಡ ಹಲ್ಲೆ ಮಾಡಿದೆ ಎಂದು ಸುವರ್ಣ ನ್ಯೂಸ್ ನಲ್ಲಿ ತಪ್ಪು ವರದಿ ನೀಡಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ  ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ  ಗಣೇಶ್ ಶೆಟ್ಟಿ ಎನ್ನುವವರು ದೂರು … Read more

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

ಮಟ್ಕಾ ಮಾಫಿಯಾಕ್ಕೆ ಸಾಗರ ಎಮ್ಮೆಲ್ಲೆ ಬೇಳೂರು ಕೃಪಕಟಾಕ್ಷವಿದೆಯಾ..? ಅವರ ಬೆಂಬಲಿಗರೇ ದಂಧೆಯ ಕಿಂಗ್ ಪಿನ್ನಾ..? ಅಥವಾ ಎಮ್ಮೆಲ್ಲೆ ಹೆಸ್ರು ಮಿಸ್ಯೂಸ್ ಮಾಡಿಕೊಳ್ಳಲಾಗುತ್ತಿದೆಯೇ..?! ದಂಧೆಕೋರರ ಹೆಡೆಮುರಿ ಕಟ್ಟಬೇಕಾದ ಪೊಲೀಸರೇ ಕೈ ಕೆಸರು ಮಾಡಿಕೊಂಡಿದ್ದಾರಾ..? ಅಪರಾಧಮುಕ್ತ ಜಿಲ್ಲೆ ಮಾಡ್ಬೇಕೆಂದಿರುವ ಎಸ್ಪಿ ಮಿಥುನ್ ಕುಮಾರ್ ಅವರಿಗೆ ಅವರ ಇಲಾಖೆ ಅಧಿಕಾರಿಗಳೇ ವಿಲನ್ನಾ..?!    ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರೇ ಏನ್ ಮಾಡ್ತಿದಿರಾ..? ನಿಮ್ಮ ಇಲಾಖೆಯ ಅಧಿಕಾರಿಗಳ ಕೃಪಕಟಾಕ್ಷ-ಶ್ರೀರಕ್ಷೆಯಲ್ಲೇ ಮಟ್ಕಾ ದಂಧೆ ನಡೆಯುತ್ತಿದೆ…!ಅದಕ್ಕಾಗಿ ಸಾಲ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ..!? … Read more

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಬಹುತೇಕ ಮಾದ್ಯಮಗಳು ಎಡವಿದ್ದೆಲ್ಲಿ?! ಪೂರ್ವಾಗ್ರಹಕ್ಕೆ ಒಳಗಾಗಿದ್ದೆಲ್ಲಿ!? ಕೋರ್ಟ್‌ ಗಳಾಗಿದ್ದೆಲ್ಲಿ.?!

ವೈಯುಕ್ತಿಕ ಅಭಿಪ್ರಾಯಗಳನ್ನೇ ವೀಕ್ಷಕರ ಮೇಲೆ ಬಲವಂತವಾಗಿ ಹೇರುವ ದುಸ್ಸಾಹಸ..!-ಸತ್ಯದ ಅನ್ವೇಷಕರಾಗದೆ ಕೋರ್ಟ್-ಜಡ್ಜ್‌ ಗಳಾಂತಾದ ನಿರೂಪಕರು..? ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ಪಾತ್ರದಲ್ಲಿನ ಅಸಹಜ ಸಾವುಗಳು,ತಲೆ ಬುರುಡೆ ಪ್ರಕರಣದ ಬಗ್ಗೆ ಎಸ್ ಐಟಿ ತನಿಖೆಯನ್ನೇನೋ ನಡೆಸುತ್ತಿವೆ.ಆದರೆ ಈ ವಿಷಯದಲ್ಲಿ ಮಾದ್ಯಮಗಳ ಧೋರಣೆ-ನಿಲುವು ಮಾತ್ರ ರಾಜ್ಯದ ಜನರಲ್ಲಿ ಗೊಂದಲವನ್ನಷ್ಟೆ ಅಲ್ಲ, ಹೇಸಿಗೆ ತರಿಸುವ ಜತೆಗೆ ವಾಕರಿಕೆಯನ್ನು ಮೂಡಿಸುತ್ತಿವೆ.ಪ್ರ ಕರಣದಲ್ಲಿ ಹೀಗೆಯೇ ಆಗಿದೆ ಎನ್ನೋದನ್ನು ತುಂಬಾ ರೋಚಕವಾಗಿ ಬಿಂಬಿಸುವ ಆತುರದಲ್ಲಿ ಪತ್ರಿಕೋದ್ಯಮದ ನೈತಿಕತೆ ಹಾಗು ಸೈದ್ಧಾಂತಿಕತೆಯನ್ನೇ ಗಾಳಿಗೆ ತೂರುತ್ತಿದ್ದಾರೆ.ಸತ್ಯದ ಅನ್ವೇಷಕರಾಗದೆ ತಮ್ಮದೇ ಅಭಿಪ್ರಾಯವನ್ನು … Read more

eXCLUSIVE….ಕೆಎಸ್ ಆರ್ ಟಿಸಿ MD ಸಹಿ ನಕಲು..!-ಲಕ್ಷಾಂತರ ಸುಲಿಗೆ..! ತನಿಖೆಯಾದರೆ ಮತ್ತಷ್ಟು ಅಕ್ರಮ ಬಹಿರಂಗ..

ಬೆಂಗಳೂರು:ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ವಲ್ಪ ಎಚ್ಚರತಪ್ಪಿದ್ರೂ ಬಹುಷಃ ಅವರನ್ನೇ ಯಾಮಾರಿಸಬಹುದು ಎನ್ನಿಸುತ್ತೆ ಅವರು ಪ್ರತಿನಿಧಿಸುವ ಸಾರಿಗೆ ಇಲಾಖೆಯ ಕೆಲ ಖದೀಮ-ಕಳ್ಳರು.ಈ ಮಾತನ್ನು ಹೇಳೊಕ್ಕೆ ಕಾರಣವೂ ಇದೆ.. ಬಿಎಂಟಿಸಿ ಎಂಡಿ ಆಗಿದ್ದ ಸತ್ಯವತಿ ಅವರ ವಿಷಯದಲ್ಲಿ ಯಾವ ಯಡವಟ್ಟು ನಡೆದಿತ್ತೋ ಅದೇ ಯಟವಟ್ಟು ಮೊನ್ನೆ ಮೊನ್ನೆಯವರೆಗೂ ಕೆಎಸ್ ಆರ್ ಟಿಸಿಯಲ್ಲಿ ಎಂಡಿ ಆಗಿ ಹಾಲಿ ಚುನಾವಣಾ ಆಯೋಗದಲ್ಲಿ ಆಯುಕ್ತರಾಗಿರುವ ಅನ್ಬುಕುಮಾರ್ ಅವರ ವಿಚಾರದಲ್ಲಿಯು ನಡೆದೋಗಿದೆ ಎನ್ನುವ ಮಾತುಗಳು ಕೇಳಿಬರಲಾರಂಭಿಸಿವೆ.ಇದರ ಇನ್ ಡೀಟೈಲ್ ಸ್ಟೊರಿಯನ್ನು ದಾಖಲೆ ಸಮೇತ ಹೊತ್ತು ತಂದಿದೆ … Read more

“ಬಿಕ್ಲ ಶಿವು” ಮರ್ಡರ್‌-MLA ಭೈರತಿ ಬಸವರಾಜ್‌ ರಾಜಕೀಯ ಭವಿಷ್ಯ ಅತಂತ್ರ.!?

ದಿನಾಂಕ: 15-07-2025 ಸ್ಥಳ:ಕೆ.ಆರ್‌ ಪುರಂ ಸಮಯ: ರಾತ್ರಿ 08:10 ರಾಜಧಾನಿ ಬೆಂಗಳೂರಿನ ಕೆ.ಆರ್‌ ಪುರಂ ಕ್ಷೇತ್ರದ  ವ್ಯಾಪ್ತಿಯಲ್ಲಿ ಶಿವಪ್ರಕಾಶ್‌ ಅಲಿಯಾಸ್‌ ಬಿಕ್ಲ ಶಿವು  ಎನ್ನುವ ರೌಡಿ ಶೀಟರ್‌ ಹೆಣ ಬಿದ್ದಿತ್ತು. ಸಹಜವಾಗಿ ರೌಡಿಗಳ ಹೆಣ ಬಿದ್ರೆ ಗೊತ್ತಲ್ಲ, ಹಳೇ  ರೈವಲ್ರಿ ಯಿಂದಲೇ ಅಂತದ್ದೊಂದು ಪ್ರತೀಕಾರದ ಕೊಲೆ ಆಗಿರಬಹುದೆಂದು ಮಾತನಾಡಿ ಸುಮ್ಮನಾಗ್ತೇವೆ. ಆರಂಭದಲ್ಲಿ ನಿನ್ನೆ ರಾತ್ರಿಯ ಕೇಸ್‌ ಕೂಡ ಹಾಗೆಯೇ ಎನ್ನಿಸಿತ್ತು.ಆದರೆ ಆನಂತರದಲ್ಲಿ ಹೆಣವಾದವನ ತಾಯಿ ಕೊಟ್ಟ ಕಂಪ್ಲೆಂಟ್‌ ಇದೆಯೆಲ್ಲಾ ಅದು ಇಡೀ ಪ್ರಕರಣಕ್ಕೊಂದು ಬಿಗ್‌ ಟ್ವಿಸ್ಟ್.‌ ಇಂಪಾರ್ಟೆನ್ಸ್‌ … Read more

ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: 35 IPS ವರ್ಗಾವಣೆ: ಅನುಚೇತ್ ಟ್ರಾನ್ಸ್ ಫರ್

ಬೆಂಗಳೂರು: ದಿಢೀರ್ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ. ಬೆಂಗಳೂರಿನಲ್ಲಿದ್ದ ಹಳೆಯ ಮುಖಗಳ ಜಾಗಕ್ಕೆ ಬಹುತೇಕ ಬೆಂಗಳೂರಿನ ಹೊರ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದ ಐಪಿಎಸ್ ಗಳನ್ನು ನಿಯೋಜನೆ ಮಾಡಿದೆ. ಈ ವರ್ಗಾವಣೆಗೆ ಮುಖ್ಯ ಕಾರಣವೇ  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಎನ್ನಲಾಗ್ತಿದೆ. ಬೆಂಗಳೂರಿನ ವಿವಿಧೆಡೆ ಆಯಕಟ್ಟಿನ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದವರನ್ನು ಬೇರೆಡೆ ವರ್ಗಾವಣೆ ಮಾಡಲಾಗಿದ್ದು ವರ್ಗಾವಣೆಗೊಂಡವರ ವಿವರಗಳು ಇಂತಿದೆ. ಬೆಂಗಳೂರು ಸಂಚಾರ ಪೊಲೀಸ್ ವಿಭಾಗದಲ್ಲಿ ಡಿಐಜಿ ಆಗಿದ್ದ ಎಂ.ಎನ್. … Read more

GOOD NIGHT…ಡೆತ್‌ ನೋಟ್‌ ಬರೆದು ಆತ್ಮಹತ್ಯೆಗೆ ಶರಣಾದ “ಸುದ್ದಿ ಮನೆ”ಯ “ಬ್ರೇಕಿಂಗ್‌ ನ್ಯೂಸ್‌” ಮಾಂತ್ರಿಕ ಶಿವಪ್ರಸಾದ್‌..

ಬೆಂಗಳೂರು:ರಾಜ್ಯದ ನಂಬರ್‌ ಒನ್‌ ನ್ಯೂಸ್‌ ಚಾನೆಲ್‌ ಟಿವಿ 9 ಸೇರಿದಂತೆ ಹಲವು ಮಾದ್ಯಮಗಳಲ್ಲಿ ಕೆಲಸ ಮಾಡಿದ್ದ ಅತ್ಯಂತ ಸೌಮ್ಯ ಹಾಗೂ ಸಂಭಾವಿತ ಪತ್ರಕರ್ತ ಮಿತ್ರ ಶಿವಪ್ರಸಾದ್‌ ಅನುಮಾನಸ್ಪದ ರೀತಿಯಲ್ಲಿ ದೂರದ ಕೋಲಾರದಲ್ಲಿರುವ ತಮ್ಮ ಅತ್ತೆಯ ಮನೆಯಲ್ಲಿ ನಿಗೂಢವಾಗಿ ನೇಣಿಗೆ ಶರಣಾಗಿದ್ದಾರೆ. 47 ವರ್ಷದ ಶಿವಪ್ರಸಾದ್‌ ಸಾವಿಗೆ ಕಾರಣವೇನೆನ್ನುವುದು ತಿಳಿದುಬಂದಿಲ್ಲ.ಕೆಲಸದ ನಿಮಿತ್ತ ಕೋಲಾರಕ್ಕೆ ತೆರಳಿದ್ದ ಶಿವಪ್ರಸಾದ್‌,ಅಪರೂಪಕ್ಕೆ ಅತ್ತೆ ಮನೆಗೆ ತೆರಳಿದ್ದರು.ತೆರಳುವಾಗ ಸ್ವೀಟ್ಸ್‌, ಹಣ್ಣುಗಳನ್ನು ತೆಗೆದುಕೊಂಡು ಹೋಗಿ ನಿನ್ನೆ ರಾತ್ರಿವರೆಗೂ ಎಲ್ಲರೊಂದಿಗೆ ಚೆನ್ನಾಗಿಯೇ ಮಾತನಾಡಿದ್ದಾರೆ.ಮನೆಯ ಹೊರಗೊಂದು ಸಣ್ಣ ವಾಕ್‌ ಮಾಡಿ,ಎಲ್ಲರಿಗೂ … Read more

ತುಮಕೂರಿನಲ್ಲಿ ಬಡಿದಾಡಿಕೊಂಡ ನ್ಯೂಸ್ ಚಾನೆಲ್ ರಿಪೋರ್ಟರ್ಸ್: FIR -ಅರೆಸ್ಟ್

ತುಮಕೂರು:ಸಾರ್ವಜನಿಕವಾಗಿ ಹೊಡೆದಾಡುವವರ ದೃಶ್ಯಗಳನ್ನು ಚಿತ್ರೀಕರಿಸಿ ಸುದ್ದಿ ಮಾಡುವ ವರದಿಗಾರರೇ  ಇವತ್ತು ಪರಸ್ಪರ ಹೊಡೆದಾಡಿಕೊಂಡು ಸುದ್ದಿಯಾಗಿದ್ದಾರೆ.ಈ ಒಂದು ಘಟನೆಗೆ ಸಾಕ್ಷಿಯಾಗಿರೋದುನ ಕಲ್ಪತರ ನಾಡು ತುಮಕೂರು.ಮಾದ್ಯಮ ಕ್ಷೇತ್ರದಲ್ಲಿ ಮುನ್ನಲೆಯಲ್ಲಿರುವ ಎರಡು ನ್ಯೂಸ್ ಚಾನೆಲ್ ಗಳ ವರದಿಗಾರರೇ ಸಾರ್ವಜನಿಕವಾಗಿ ಹೊಡೆದಾಡಿಕೊಂಡಿದ್ದಲ್ಲದೇ ಪರಸ್ಪರನ ಬೈಯ್ದಾಡಿಕೊಂಡಿದ್ದಾರೆನ್ನಲಾಗಿದೆ.ಪಬ್ಲಿಕ್ ಟಿವಿ ತುಮಕೂರು ವರದಿಗಾರ ಮಂಜುನಾಥ್ ವಿರುದ್ದ ಹಲ್ಲೆಗೊಳಗಾದರೆನ್ನಲಾದ ಝೀ ನ್ಯೂಸ್ ಜಿಲ್ಲಾ ವರದಿಗಾರ ಮಂಜುನಾಥ್ ಜಾತಿನಿಂದನೆ ಪ್ರಕರಣ ದಾಖಲಿಸಿದ್ದಾರೆ.ಅವರ ದೂರಿನ ಮೇಲೆ  ಎಫ್ ಐಆರ್ ದಾಖಲಿಸಲಾಗಿದ್ದು ಪೊಲೀಸ್ ಇಲಾಖೆಯ ಉನ್ನತ ಮೂಲಗಳ ಪ್ರಕಾರ ಪಬ್ಲಿಕ್ ಟಿವಿ ವರದಿಗಾರ … Read more

Punith