“ಆರ್ಥಿಕ ಸಂಕಷ್ಟ”ದ ನಡುವೆಯೇ bmtc ಅಧ್ಯಕ್ಷ-ಉಪಾಧ್ಯಕ್ಷರಿಗೆ “ಕಾರ್ ಕ್ರೇಜ್”!

ಬೆಂಗಳೂರು: ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಎನ್ನುವ ಗಾಧೆ ನೆನಪಿಸುತ್ತದೆ ಬಿಎಂಟಿಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹಠಮಾರಿ ಧೋರಣೆ. ಬಿಎಂಟಿಸಿ ಎನ್ನುವ ಸಂಸ್ಥೆ ಮುನ್ನಡೆಸಿಕೊಂಡು ಹೋಗಲು ಖಜಾನೆಯಲ್ಲಿ ಹಣದ ಕೊರತೆ ಬಾಧಿಸುತ್ತಿರುವಾಗಲೇ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಹೊಸ ಹಾಗೂ ದುಬಾರಿ ಕಾರಿನ ಕ್ರೇಜ್ ಶುರುವಾಗಿದೆಯಂತೆ ನೋಡಿ..ತನಗೆ ಐಷಾರಾಮಿ ಹಾಗೂ ದುಬಾರಿ ಬೆಲೆಯ ಕಾರು ಬೇಕೇ, ಬೇಕೆಂದು ಹಠ ಮಾಡಿ ಅಧ್ಯಕ್ಷ ಆರಾಧ್ಯ ಅದನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿ ದ್ದಾರಂತೆ.ಅಧ್ಯಕ್ಷರಿಗೆ ಹೊಸ ಕಾರು ಸಿಗುತ್ತಿದ್ದಂತೆ ಉಪಾಧ್ಯಕ್ಷ ನಿಕೇತ್ ಮೌರ್ಯ ಕೂಡ … Read more

ಬಿಎಂಟಿಸಿ ಸಿಬ್ಬಂದಿ ಯೂನಿಫಾರ್ಮ್ ಗೆ ಪುಡಿಗಾಸು..!

ಊಟಕ್ಕಿಲ್ಲದ ಉಪ್ಪಿನಕಾಯಿ,… ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ..ಆನೆ ಬಾಯಿಗೆ ಹಪ್ಪಳ..ಎನ್ನುವ ಗಾಧೆಗಳನ್ನು ನೆನಪಿಸುವಂತಿದೆ ಬಿಎಂಟಿಸಿ ಆಡಳಿತದ ಧೋರಣೆ.ಕಾರ್ಮಿಕ ಸಿಬ್ಬಂಧಿಯ ಕಲ್ಯಾಣಕ್ಕಾಗಿ ಜಾರಿಗೊಳಿಸುತ್ತಿರುವ ಕಾರ್ಯಕ್ರಮ ಹಾಗೂ ಯೋಜನೆಗಳು ಅವರ ಪ್ರಯೋಜನಕ್ಕೆ ಬಾರದಂತಾಗ್ತಿದೆ..ಇದಕ್ಕೆ ಸಾಕ್ಷಿಯಾಗುತ್ತಾ ಬಂದಿರುವುದು ಸಮವಸ್ತ್ರದ ಯೋಜನೆ.ದುರಂತ ಎಂದ್ರೆ ಈ ಬಾರಿಯೂ ಆ ಅಮಾನವೀಯ ಪರಂಪರೆ ಮುಂದುವರೆದಿದೆ. ಜಗತ್ತಿಗೆ ಜಗತ್ತೇ ಬದಲಾಗುತ್ತಿದೆ.ನಮ್ಮ ಜೀವನಶೈಲಿಗಳು ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ರೂಪಾಂತರಗೊಳ್ಳುತ್ತಿವೆ.ಹಾಗೆಯೇ ನಾವು ಬಳಸುತ್ತಿದ್ದ ಎಲ್ಲಾ ವಸ್ತುಗಳ ದರವೂ ದುಬಾರಿಯಾಗುತ್ತಿದೆ.ಆದರೆ ಎಲ್ಲಾ ಬದಲಾದರೂ ಬಿಎಂಟಿಸಿಯ ಆಡಳಿತದ ಮನಸ್ಥಿತಿ ಮಾತ್ರ ಬದಲಾದಂತೆ ಕಾಣುತ್ತಿಲ್ಲ … Read more

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಶುರುವಾಯ್ತಾ ನಿರಂಜನ್ ದರ್ಬಾರ್..!

ಬೆಂಗಳೂರು: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಅಧ್ಯಕ್ಷರಾಗುತ್ತಿದ್ದಂತೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದವರಂತೆ ತಮ್ಮ ಅತ್ಯಾಪ್ತ ನಿವೃತ್ತಿ ಅಧಿಕಾರಿಗೆ ಆಯಕಟ್ಟಿನ ಹುದ್ದೆ ದಯಪಾಲಿಸಿದ ಅಧ್ಯಕ್ಷ ನರೇಂದ್ರಸ್ವಾಮಿ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವುದು ತಿಳಿದೇ ಇದೆ.ಯಾವ ರೀತಿ ನಿಯಮಗಳನ್ನು ಅಧ್ಯಕ್ಷರು ಗಾಳಿಗೆ ತೂರಿದ್ದಾರೆ ಎನ್ನುವುದನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಎಳೆಎಳೆಯಾಗಿ ಬಿಚ್ಚಿಟ್ಟಿತ್ತು ಕೂಡ. ಮಾಡಿರೋ ತಪ್ಪನ್ನು ಸರಿಪಡಿಸಿಕೊಳ್ಳುತ್ತಾರಾ ಎಂದು ಕಾದರೂ ಯಾವುದು ಬದಲಾದಂಗೆ ಕಾಣುತ್ತಿಲ್ಲ.ಅಧ್ಯಕ್ಷರ ತಾಂತ್ರಿಕ ಸಲಹೆಗಾರ ಡಾ.ನಿರಂಜನ್ ಅವರು ಮಂಡಳಿಯಲ್ಲಿ ಅಂದಾದರ್ಬಾರ್ ಶುರುಮಾಡಿದ್ದಾರೆನ್ನುವ ಮಾಹಿತಿ ಕನ್ನಡ ಫ್ಲ್ಯಾಶ್ ನ್ಯೂಸ್ … Read more

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ತಾಂತ್ರಿಕ ಸಲಹೆಗಾರರ ನೇಮಕವೇ ನಿಯಮಬಾಹಿರನಾ..?!

**ಡಾ.ಪಿ ನಿರಂಜನ್ ಅವರ ನೇಮಿಸಿಕೊಳ್ಳಲಿಕ್ಕೆ ಅಧ್ಯಕ್ಷ ನರೇಂದ್ರಸ್ವಾಮಿ  ನಿಯಮಗಳನ್ನೆಲ್ಲಾ ಗಾಳಿಗೆ ತೂರಿದ್ದೇಕೆ..?! **ಮಂಡಳಿಯಲ್ಲೇ ಅರ್ಹರಿರುವಾಗ ನಿವೃತ್ತರನ್ನೇ ನೇಮಿಸಿಕೊಳ್ಳುವ ಅಗತ್ಯವೇನಿದೆ..?! **ಮಂಡಳಿ ಸಭೆಯೇ ನಡೆದಿಲ್ಲ,ಅದ್ಹೇಗೆ ಡಾ.ಪಿ ನಿರಂಜನ್ ಅವರ ನೇಮಕಕ್ಕೆ ಅಂಕಿತ ಸಿಕ್ತು..!? **ಸರ್ಕಾರದ ಗಮನಕ್ಕೆ ತಾರದೆ ನೇಮಕ ನಡೆದಿದ್ದೇಗೆ..? ಸದಸ್ಯ ಕಾರ್ಯದರ್ಶಿ ಲಿಂಗರಾಜ್ ಸುಳ್ಳು ಹೇಳುತ್ತಿದ್ದಾರಾ..?! ಬೆಂಗಳೂರು:ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ(KARNATAKA POLLUTION CONTROLE BOARD) ಗೆ ನೂತನ ಸಾರಥಿಯಾಗಿರುವ ಮಳವಳ್ಳಿ ಶಾಸಕ ಎಂ.ನರೇಂದ್ರ ಸ್ವಾಮಿ(CHAIRMAN NARENDRASWAMY) ಅವಸರವಸರವಾಗಿ ತೆಗೆದುಕೊಳ್ಳುತ್ತಿರುವ ನಿರ್ದಾರಗಳು ಅವರಿಗೇನೆ ಮುಳುವಾಗುವ ಸಾಧ್ಯತೆಗಳಿವೆ ಎನ್ನಿಸುತ್ತೆ.ಈಗಾಗಲೇ … Read more

EXCLUSIVE…ಅಧಿಕಾರ ವಹಿಸಿಕೊಂಡ ದಿನವೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿಗೆ ಬಿಗ್ ಶಾಕ್..!

*****ಆಯಕಟ್ಟಿನ ಹುದ್ದೆ  ಭರವಸೆ ಈಡೇರಿಸುವ ಭರಾಟೆಯಲ್ಲಿ  ನಿಯಮ ಗಾಳಿಗೆ ತೂರಿತಾ ಸಿದ್ದರಾಮಯ್ಯ ಸರ್ಕಾರ.. *****ಅಧ್ಯಕ್ಷರಾಗಲು ಬೇಕಿರುವುದು ಬಿಇ( ಪರಿಸರ ವಿಜ್ನಾನ)-ನರೇಂದ್ರಸ್ವಾಮಿ ಓದಿರುವುದು ಬಿ.ಇ( ಸಿವಿಲ್) ಅಂತೆ.. ಬೆಂಗಳೂರು: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷಗಾದಿಯ ವಾಸ್ತುವೇ ಸರಿ ಇಲ್ಲ ಎನಿಸುತ್ತದೆ.ಯಾರೇ ಹೊಸದಾಗಿ ಅಧ್ಯಕ್ಷರಾಗಿ ಬಂದರೂ ಅವರ ಸುತ್ತ ವಿವಾದ ಸುತ್ತಿಕೊಳ್ಳುತ್ತಲೇ ಇರುತ್ತದೆ.ಹೊಸ ಅಧ್ಯಕ್ಷರಾಗಿ ಮಂಡ್ಯ ಜಿಲ್ಲೆ ಮಳವಳ್ಳಿ ಶಾಸಕ ಎಂ.ನರೇಂದ್ರಸ್ವಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದ ಬೆನ್ನಲ್ಲೇ ಎದುರಾಗಿರುವ ಗೊಂದದ  ಹಿನ್ನಲೆಯಲ್ಲಿ ಇಂತದ್ದೊಂದು ಪ್ರಶ್ನೆ ಕಾಡುವುದು ಸಹಜ..ಆದರೆ ಇದು … Read more

ರಾಜ್ಯೋತ್ಸವದ ಹೊಸ್ತಿಲಲ್ಲೇ ಕನ್ನಡ ಸಾಹಿತ್ಯ ಪರಿಷತ್ ಗೆ ಮರ್ಮಾಘಾತ..! ಪರಿಷತ್ ನಿಂದ ಹೊರಬಿದ್ದ ಕನ್ನಡದ ಕಟ್ಟಾಳು ಜೆ.ಎಂ ರಾಜಶೇಖರ್..

ಬೆಂಗಳೂರು: ಕನ್ನಡ ನಾಡುನುಡಿಯ ಹಬ್ಬ ರಾಜ್ಯೋತ್ಸವ ಆಚರಣೆಗೆ ಇನ್ನೇನು ಕೆಲವೇ ದಿನ ಬಾಕಿ ಇದೆ.ಅಷ್ಟರಲ್ಲೇ ಕನ್ನಡ ನಾಡುನುಡಿಯ ಪ್ರಾತಿನಿಧಿಕ ಸಂಸ್ಥೆಯಾಗಿ ಕೆಲಸ ಮಾಡಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಸಾಕಷ್ಟು ಅನುಮಾನ ವ್ಯಕ್ತವಾಗುತ್ತಿದೆ.ಅಧ್ಯಕ್ಷ ನಾಡೋಜ ಮಹೇಶ್ ಜೋಷಿ ಅವರ ಧೋರಣೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.ಅವರ ನಿಲುವಿಗೆ ಬೇಸತ್ತು ಸಾಕಷ್ಟು ಕನ್ನಡದ ಕಟ್ಟಾಳುಗಳು ಹೊರಬರಲು ನಿರ್ದರಿಸಿದ್ದು ಇದರ ಮೊದಲ ಪ್ರಯತ್ನ ಎನ್ನುವಂತೆ ಕನ್ನಡದ ಕಟ್ಟಾಳು, ಕನ್ನಡಪರ ಹೊರಾಟಗಾರ, ಸಾಮಾಜಿಕ ಕಾರ್ಯಕರ್ತ,ಆರ್ ಟಿಐ ಗೆ ಕರ್ನಾಟಕದಲ್ಲಿ ನೆಲೆ-ಬೆಲೆ ದೊರಕಿಸಿಕೊಟ್ಟಿರುವ ಜೆ.ಎಂ.ರಾಜಶೇಖರ್ … Read more