succese-inspirational story of a journalist”ಪತಕರ್ತ”ನ ಯಶೋಗಾಥೆ..ಅಂದಿನ ಯಶಸ್ವಿ “ಕ್ರೈಂ ರಿಪೋರ್ಟರ್‌” ,ಇವತ್ತು “ಶಾಲೆ”ಯ “ಮಾಲೀಕ”

ಬದುಕಿನಲ್ಲಿ ಎಲ್ಲಾ ಅವಕಾಶ-ವೇದಿಕೆ ಇದ್ದು ಯಶಸ್ಸು ಪಡೆಯೋದು ಸಾಧನೆಯೇ ಅಲ್ಲ..ಶೂನ್ಯದಿಂದ ಮಹತ್ತರವಾದುದನ್ನು ಗಳಿಸೋದು ಇದೆಯೆಲ್ಲಾ ಅದೇ ನಿಜವಾದ ಸಾಧನೆ-ಯಶಸ್ಸು ಎನ್ನುವುದು ಅನುಭಾವಿಗಳ ಮಾತು..ಎಲ್ಲಾ ಕ್ಷೇತ್ರಗಳಲ್ಲಿರುವಂತೆ ನಮ್ಮ ಪತ್ರಿಕೋದ್ಯಮದಲ್ಲೂ ( ಇನ್ನೊಬ್ಬರಿಗೆ ಬಹುಪರಾಖ್‌ ಹಾಕಿಕೊಂಡು,ಹೊಗಳುಭಟ್ಟರಾಗಿ ಸ್ಥಾನಮಾನ ಪಡೆದುಕೊಳ್ಳುತ್ತಿರುವವರ ಸಂಖ್ಯೆ ಪತ್ರಿಕೋದ್ಯಮದಲ್ಲಿ ಇವತ್ತಿಗೆ ದೊಡ್ಡದಿದೆ ಬಿಡಿ…) ಅಂಥಾ ಸಾಧಕರು ಪರಿಶ್ರಮದ ಕಾರಣಕ್ಕೆ ಗಮನ ಸೆಳೆಯುತ್ತಾರೆ..ಇತರರಿಗೂ ಮಾದರಿಯಾಗುತ್ತಾರೆ..ಅಂಥವರ ಸಾಲಿನಲ್ಲಿ ನಿಲ್ಲುವಂತ ವ್ಯಕ್ತಿ ಪುಟ್ಟರಾಜ್..‌ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ದುಡಿದು ಉಪಜೀವನಕ್ಕೊಂದು ಪರ್ಯಾಯ ಹುಡುಕಿಕೊಂಡು ಎರಡನ್ನೂ ಸಮತೋಲನದಲ್ಲಿ ಸಂಭಾಳಿಸಿಕೊಂಡು ಅಂತಿಮವಾಗಿ ಆ ಪ್ರಯತ್ನದ್ಲಿ ಯಶಸ್ವಿಯಾದ … Read more

“ಆರ್ಥಿಕ ಸಂಕಷ್ಟ”ದ ನಡುವೆಯೇ bmtc ಅಧ್ಯಕ್ಷ-ಉಪಾಧ್ಯಕ್ಷರಿಗೆ “ಕಾರ್ ಕ್ರೇಜ್”!

ಬೆಂಗಳೂರು: ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಎನ್ನುವ ಗಾಧೆ ನೆನಪಿಸುತ್ತದೆ ಬಿಎಂಟಿಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹಠಮಾರಿ ಧೋರಣೆ. ಬಿಎಂಟಿಸಿ ಎನ್ನುವ ಸಂಸ್ಥೆ ಮುನ್ನಡೆಸಿಕೊಂಡು ಹೋಗಲು ಖಜಾನೆಯಲ್ಲಿ ಹಣದ ಕೊರತೆ ಬಾಧಿಸುತ್ತಿರುವಾಗಲೇ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಹೊಸ ಹಾಗೂ ದುಬಾರಿ ಕಾರಿನ ಕ್ರೇಜ್ ಶುರುವಾಗಿದೆಯಂತೆ ನೋಡಿ..ತನಗೆ ಐಷಾರಾಮಿ ಹಾಗೂ ದುಬಾರಿ ಬೆಲೆಯ ಕಾರು ಬೇಕೇ, ಬೇಕೆಂದು ಹಠ ಮಾಡಿ ಅಧ್ಯಕ್ಷ ಆರಾಧ್ಯ ಅದನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿ ದ್ದಾರಂತೆ.ಅಧ್ಯಕ್ಷರಿಗೆ ಹೊಸ ಕಾರು ಸಿಗುತ್ತಿದ್ದಂತೆ ಉಪಾಧ್ಯಕ್ಷ ನಿಕೇತ್ ಮೌರ್ಯ ಕೂಡ … Read more

BDA BIG SCAM: 524 ಕೋಟಿ ಬಿಡಿಎ ಅಕ್ರಮ:ತನಿಖೆಗೆ ಕ್ಯಾಪ್ಟನ್ ಮಣಿವಣ್ಣನ್ ರಿಂದ ಸಮಿತಿ ರಚನೆ, ಅಧಿಕಾರಿಗಳಿಗೆ “ಢವ ಢವ”..

ಬೆಂಗಳೂರು: ಬಿಡಿಎ ನಲ್ಲಿ ಭಾರೀ ಸದ್ದು ಮಾಡಿದ್ದ 524 ಕೋಟಿ ಅಕ್ರಮದ ತನಿಖೆಗೆ ಕೊನೆಗೂ ಸಮಿತಿ ರಚನೆಯಾಗಿದೆ. ಎಂಜಿನಿಯರಿಂಗ್ ಮೆಂಬರ್ ಶಾಂತರಾಜಣ್ಣ,ಅಭಿಯಂತರರರಾದ ಅಶೋಕ್,ಅಶೋಕ್ ಭಾಗಿ ಹಾಗೂ ಪರಶುರಾಮಪ್ಪ ಅವರ ವಿರುದ್ಧ ಕೇಳಿಬಂದಿದ್ದ ಆಪಾದನೆಗೆ ಸಂಬಂಧಿಸಿದಂತೆ ಕಮಿಷನರ್ ಕ್ಯಾಪ್ಟನ್ ಮಣಿವಣ್ಣನ್ ತನಿಖಾ ಸಮಿತಿಯೊಂದನ್ನು ರಚಿಸಿ ಆದೇಶ ಹೊರಡಿಸಿದ್ದಾರೆ. ನಿವೃತ್ತ ನ್ಯಾಯಾಧೀಶರಾದ ನಿಯಾಜ್ ಅಹಮದ್ ಅವರನ್ನೊಳಗೊಂಡ ಸಮಿತಿ 8 ವಾರದೊಳಗೆ ತನಿಖಾ ವರದಿಯನ್ನು ತಮಗೆ ಸಲ್ಲಿಸುವಂತೆ ಉಪಕಾರ್ಯದರ್ಶಿಗಳು ಸೂಚಿಸಿದ್ದಾರೆ.ಸಾಮಾಜಿಕ ಕಾರ್ಯಕರ್ತ ಶರತ್  ಬಾಬು  ಅವರ ಹೋರಾಟಕ್ಕೆ ಈ ಮೂಲಕ ಆರಂಭಿಕ … Read more

“ಸುವರ್ಣ ನ್ಯೂಸ್‌” ನಲ್ಲಿ ಬದಲಾಗ್ತಿದೆಯೇ “ಹೊಣೆಗಾರಿಕೆ”ಯ ಹೆಗಲು..! ಅಜಿತ್‌ ಹನುಮಕ್ಕನವರ್‌ ಸ್ಥಾನಕ್ಕೆ ನೂತನ “ಸಾರಥಿ”…!

ಏಷ್ಯಾ ನೆಟ್‌ ಸುದ್ದಿ ಸಂಸ್ಥೆ(ASIANETNEWS)ಯ ಹೆಮ್ಮೆಯ ಕನ್ನಡದ ವಾಹಿನಿ ಸುವರ್ಣ ನ್ಯೂಸ್‌ (SUVARNA NEWS CHANNEL)ನಲ್ಲಿ ಬದಲಾವಣೆ ಗಾಳಿ ಜೋರಾಗಿ ಬೀಸಲಾರಂಭಿಸಿದೆಯೇ.?  ಬದಲಾವಣೆಯ ಹಿನ್ನಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳೇ ಇಂತದ್ದೊಂದು ಅನುಮಾನ ಮೂಡಿಸುತ್ತವೆ..ಬಹುಷಃ 2026ರ ಹೊಸ ವರ್ಷವನ್ನು ಹೊಸ ಮುಖಗಳ ಮೂಲಕವೇ ಆರಂಭಿಸಲು ಚಾನೆಲ್‌ ನ ಆಡಳಿತ ನಿರ್ದರಿಸಿದಂತಿದೆ ಎನ್ನುವ ಮಾತುಗಳು ಅಲ್ಲಿಂದಲೇ ಕೇಳಿಬರಲಾರಂಭಿಸಿವೆ..ನೂತನ ಸಾರಥಿಯ ಹುಡುಕಾಟ ಬಹುತೇಕ ಮುಗಿದಿದೆ ಎನ್ನಲಾಗುತ್ತಿದ್ದು ಎಲ್ಲಾ ನಿರೀಕ್ಷೆಯಂತಾದ್ರೆ  ಸುದ್ದಿ ಸಂಪಾದಕ ಅಜಿತ್‌ ಹನುಮಕ್ಕನವರ್‌( AJITH HANUMAKKANAVAR) ಸ್ಥಾನದಲ್ಲಿ ಪಲ್ಲಟವಾದ್ರೂ ಆಶ್ಚರ್ಯವಿಲ್ಲವಂತೆ. ಸುವರ್ಣ … Read more

“ಸುವರ್ಣ ಕುಟುಂಬದ “ತಾಯಿ”ಜೀವ ಲಲಿತಮ್ಮ ದುರ್ಮರಣ-ಕಂಬನಿ

ಮೊದಲಿಗೆ ಆ ತಾಯಿ ಸಾವಿಗೆ ಭಾವಪೂರ್ಣ  ಅಶೃತರ್ಪಣ.ಆ ತಾಯಿ ಸಾವಿಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಕಂಬನಿ ಮಿಡಿಯುತ್ತದೆ.ಆ ಮಹಾತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ..ಆಕೆಯ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟುಂಬದವರಿಗೆ ಹಾಗೂ ಆತ್ಮೀಯರಿಗೆ ನೀಡಲಿ..ಅಂದ್ಹಾಗೆ ಇದು ಅನ್ಯಾಯದ ಸಾವೇ ನಿಜ.ಕೆಲಸ ಮುಗಿಸಿಕೊಂಡು ಹೋಗುವಾಗ ಓಕಳಿಪುರಂ ಬಳಿ ಯಮರೂಪದಲ್ಲಿ ಬಂದ ಲಾರಿ ಆ ತಾಯಿಯನ್ನು ಆಪೋಷನ ತೆಗೆದುಕೊಂಡಿದೆ.ಸ್ಥಳದಲ್ಲೇ ಆ ತಾಯಿ ಉಸಿರು ಚೆಲ್ಲಿದ್ದಾರೆ. ಆ ತಾಯಿಯ ಸಾವು ಸುವರ್ಣ ನ್ಯೂಸ್ ಬಳಗವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.ಆ ತಾಯಿಯ ಜತೆ ಇಡೀ … Read more

ಕೊಟ್ಟ ಮಾತು ಉಳಿಸಿಕೊಂಡ “ಡಿ ಬಾಸ್” ಅಭಿಮಾನಿಗಳು

ಅನೇಕ ಕಾರಣಗಳಿಂದ ದರ್ಶನ್ ಅವರನ್ನು ದೂರವಿಟ್ಟಿದ್ದ ಮಾದ್ಯಮಗಳಿಂದಲೂ ಡೆವಿಲ್ ಗೆ “ಅಬ್ಬರ” ದ ಪ್ರಚಾರ ಅನೇಕ ಕಾರಣಗಳಿಂದ ದೂರವಿಟ್ಟಿದ್ದ ಮಾದ್ಯಮಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಟಿವಿ ಪರದೆಗಳಲ್ಲಿ ತೋರಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿಬಿಡ್ತಾ.. ಇಂತದ್ದೊಂದು ಬೆಳವಣಿಗೆಗೆ ಕಾರಣವಾಗಿದ್ದು ಡೆವಿಲ್ ಚಿತ್ರ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ ಅವರ ನಟನೆಯ ಡೆವಿಲ್ ಇಂದು ಚಿತ್ರಮಂದಿರಗಳಲ್ಲಿ ಸುನಾಮಿಯಾಗ ಅಪ್ಪಳಿಸಿದೆ.ಇದರ ಅಬ್ಬರವನ್ನು ಮಾದ್ಯಮಗಳು ಕೂಡ ಅನಿವಾರ್ಯವಾಗಿ ತೋರಿಸಬೇಕಾದ ಸನ್ನಿವೇಶ ನಿರ್ಮಾಣವಾಗಿತ್ತು. ದರ್ಶನ್ ನಟನೆಯ ಡೆವಿಲ್ ಗೆ ಕರ್ನಾಟಕಾದ್ಯಂತ … Read more

“ಮಾರ್ಕೆಟ್ ಶೇರ್” ನಲ್ಲಿ ನ್ಯೂಸ್ 18 ಕನ್ನಡ ಸ್ಥಾನ ನಂ. 1 “ಅಬಾಧಿತ” ವಾಗಿದ್ರೂ “ಟಿಆರ್ ಪಿ”ಯಲ್ಲಿ ಟಿವಿ9 ನಂ.1..!

ಬೆಂಗಳೂರು: ನ್ಯೂಸ್ 18 ಕನ್ನಡವನ್ನು ಟಿವಿ9 ಬೀಟ್ ಮಾಡಿ ನಂಬರ್ 1 ಸ್ಥಾನ ಪಡೆದಿದೆ ಎನ್ನುವ ಸುದ್ದಿ ಬರೆದ ಮೇಲೆ ಸಾಕಷ್ಟು ಕರೆಗಳು ಬರಲಾರಂಭಿಸಿವೆ.ಈ ಪೈಕಿ ಕೆಲವು ನಾವು ಬರೆದಿದ್ದೇ ತಪ್ಪು ಎಂದು ಬಿಂಬಿಸುವ ಪ್ರಯತ್ನ ಮಾಡಿದ್ರೆ ಇನ್ನು ಕೆಲವು ಟಿಆರ್ ಪಿ ಹಾಗು ಮಾರ್ಕೆಟ್ ಶೇ್ರ್ ಎನ್ನುವ ಎರಡು ಪರಿಕಲ್ಪನೆಗಳ ನಡುವೆ ಇರುವ ವ್ಯತ್ಯಾಸವನ್ನು ಮನದಟ್ಟು ಮಾಡಿಕೊಡುವ ಸಲಹೆ-ಮಾರ್ಗದರ್ಶನ ನೀಡುವಂತಿತ್ತು.ಎರಡು ಅಭಿಪ್ರಾಯಗಳನ್ನು ಸ್ವಾಗತಿಸುತ್ತಾ ಲೇಖನದ ಬಗ್ಗೆ ಸ್ಪಷ್ಟನೆ ನೀಡಬಯಸುತ್ತೇವೆ. ಎರಡು ಆಯಾಮಗಳಲ್ಲಿ ಚಾನೆಲ್ ನ ರೀಚ್ … Read more

TRP ರೇಸ್ ನಲ್ಲಿ ಮುಗ್ಗರಿಸಿದ “ನ್ಯೂಸ್ 18 ಕನ್ನಡ”-ನಂಬರ್ 1 ಸ್ಥಾನಕ್ಕೆ ಮತ್ತೆ “ಟಿವಿ 9 ಕನ್ನಡ”

ನ್ಯೂಸ್ 18 ಕನ್ನಡ ಸುದ್ದಿ ಮನೆಯಲ್ಲಿ “ನೀರವ ಮೌನ-ನಿರಾಶೆ”- ಆತಂಕ: ಸಿಬ್ಬಂದಿಗೆ ತಪ್ಪಿದ ಪಾರ್ಟಿ ಸಂಭ್ರಮ..ಯಾಕೆ ಗೊತ್ತಾ,..? ಬೆಂಗಳೂರು: ನ್ಯೂಸ್ 18 ಕನ್ನಡ(NEWS 18 KANNADA) ದ ಮನೆಯಲ್ಲಿದ್ದ ಸಂಭ್ರಮ ಮರೆಯಾಗಿದೆ.ಆದರೆ ಟಿವಿ9 (TV KANNADA ) ಮನೆಯಲ್ಲಿ ಅದೇ ಸ್ಥಿತಪ್ರಜ್ಞತೆ..( ಏಕೆಂದರೆ ಟಿವಿ9 ಬಳಗ ಕಳೆದ ವಾರದ ಟಿಆರ್ ಪಿ ರೇಸ್ ನಲ್ಲಿ ಹಿಂದೆ ಬಿದ್ದಾಗ ಸ್ವಲ್ಪ ವಿಚಲಿತವಾಗಿತ್ತಾದ್ರೂ ಆತ್ಮವಿಶ್ವಾಸ ಕಳೆದುಕೊಂಡಿರಲಿಲ್ಲ. .ಯಾಕಂದ್ರೆ ಇದೆಲ್ಲಾ ಟಿಆರ್ ಪಿ ಗೇಮ್ ಎನ್ನುವುದು ಮ್ಯಾನೇಜ್ಮೆಂಟ್ ಗೆ ಗೊತ್ತಿತ್ತಂತೆ..!) ಮತ್ತೆ … Read more

“ನ್ಯೂಸ್‌ 18” ಕನ್ನಡದ ಹೊಡೆತಕ್ಕೆ “ಪತರು”ಗುಟ್ಟಿದ “ಟಿವಿ-9” ಕನ್ನಡ..

–ಟಿವಿ-9 ಕನ್ನಡಕ್ಕೆ ಮುಖಭಂಗ-ಮರ್ಮಾಘಾತ-ಅಪಮಾನ; ಅಹಂ-ಅತಿಯಾದ ಆತ್ಮವಿಶ್ವಾಸ-ನಿರ್ಲಕ್ಷ್ಯ-ಸ್ವಯಂಕೃತಾಪರಾಧಕ್ಕೆ ಬೆಲೆ ತೆತ್ತಿತಾ..! –ಇದು ಟಿವಿ-9 ಕನ್ನಡದ ಅಧಃಪತನದ ಮುನ್ಸೂಚನೆಯೇ..? ಎಚ್ಚರಿಕೆಯ ಕರೆಗಂಟೆಯೇ..? –ಕೆಲವು “ಬ್ರಹಸ್ಪತಿ”ಗಳ “ಕಪಿಮು‍ಷ್ಠಿ”ಗೆ ಸಿಲುಕಿ ನಲುಗುತ್ತಿದೆಯೇ ಟಿವಿ9 ಕನ್ನಡ ಸಾಮ್ರಾಜ್ಯ..!?   –ಟಿವಿ 9 ಕನ್ನಡದ ಸೃಷ್ಟಿಕರ್ತ ಮಹೇಂದ್ರ ಮಿಶ್ರಾ ಇದ್ದಿದ್ದರೆ ಹೀಗಾಗುತ್ತಿತ್ತೇ..? ಇದು ಒಂದು ಚಾನೆಲ್‌ ಗೆ ಸಂಭ್ರಮವಾದ್ರೆ..ಇನ್ನೊಂದು ಚಾನೆಲ್‌ ಗೆ ಎಚ್ಚರಿಕೆಯ ಕರೆಗಂಟೆ ಎನ್ನಬಹುದೇನೋ..?ತನ್ನ ಮನೆ ಕೋಳಿ ಕೂಗಿ ದರೇನೆ ಬೆಳಗಾಗುವುದು ಎನ್ನುವ ಗಾಧೆ ಮಾತಿನಂತೆ ತಾನ್‌ ಏನ್‌ ಸುದ್ದಿ ಕೊಟ್ರೂ ಜನ ನೋಡ್ತಾರೆ..ನಂಬ್ತಾರೆ..ಎಂಬ … Read more

“ಸುವರ್ಣ”ದಲ್ಲಿ ಬದಲಾವಣೆ “ಕ್ರಾಂತಿ”..!:- ಮ್ಯಾನೇಜ್ಮೆಂಟ್ “ರಂಗಪ್ರವೇಶ”..! ಉಳಿಯೋರು ಯಾರು..?

ಸುವರ್ಣ ನ್ಯೂಸ್(SUVARNA KANNADA NEWS CHANNEL), ಕನ್ನಡದ ಪ್ರತಿಷ್ಟಿತ ನ್ಯೂಸ್ ಚಾನೆಲ್( KANNADA NEWS CHANNELS) ಗಳಲ್ಲೊಂದು.ಆದರೆ ಎಷ್ಟೇ ಶ್ರಮ ಪಟ್ಟರೂ,ಏನೆಲ್ಲಾ ಸಾಹಸ ಮಾಡಿದ್ರೂ,..ಸುದ್ದಿ ಕ್ಷೇತ್ರದಲ್ಲಿ ಘಟಾನುಘಟಿಗಳೆನಿಸಿಕೊಳ್ಳುವ ಪತ್ರಕರ್ತರಿದ್ದರೂ ನಂಬರ್ ಒನ್ ಸ್ಥಾನ ಇಂದಿಗೂ ಅದಕ್ಕೆ  ಗಗನಕುಸುಮ. ಮಾದ್ಯಮ ಲೋಕದ ದಿಗ್ಗಜ ರಾಜೀವ್ ಚಂದ್ರಶೇಖರ್( RAJIV CHANDRASHEKAR) ಮಾಲೀಕತ್ವದ  ಏಷ್ಯಾ ನೆಟ್ (ASIANET NETWORK) ನೆಟ್ವರ್ಕ್ ಚಾನೆಲ್ ಸುಧಾರಣೆ, ಬೆಳವಣಿಗೆಗೆ ಕೋಟಿಗಳನ್ನು ಸುರಿದ್ರೂ ಟಿಆರ್ ಪಿ ( TRP-TELE RATING POINT)ವಿಷಯದಲ್ಲಿ ಟಿವಿ-9(TV9 KANNADA), ಪಬ್ಲಿಕ್ ಟಿವಿ( … Read more