“ಸುವರ್ಣ ಕುಟುಂಬದ “ತಾಯಿ”ಜೀವ ಲಲಿತಮ್ಮ ದುರ್ಮರಣ-ಕಂಬನಿ

ಮೊದಲಿಗೆ ಆ ತಾಯಿ ಸಾವಿಗೆ ಭಾವಪೂರ್ಣ  ಅಶೃತರ್ಪಣ.ಆ ತಾಯಿ ಸಾವಿಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಕಂಬನಿ ಮಿಡಿಯುತ್ತದೆ.ಆ ಮಹಾತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ..ಆಕೆಯ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟುಂಬದವರಿಗೆ ಹಾಗೂ ಆತ್ಮೀಯರಿಗೆ ನೀಡಲಿ..ಅಂದ್ಹಾಗೆ ಇದು ಅನ್ಯಾಯದ ಸಾವೇ ನಿಜ.ಕೆಲಸ ಮುಗಿಸಿಕೊಂಡು ಹೋಗುವಾಗ ಓಕಳಿಪುರಂ ಬಳಿ ಯಮರೂಪದಲ್ಲಿ ಬಂದ ಲಾರಿ ಆ ತಾಯಿಯನ್ನು ಆಪೋಷನ ತೆಗೆದುಕೊಂಡಿದೆ.ಸ್ಥಳದಲ್ಲೇ ಆ ತಾಯಿ ಉಸಿರು ಚೆಲ್ಲಿದ್ದಾರೆ. ಆ ತಾಯಿಯ ಸಾವು ಸುವರ್ಣ ನ್ಯೂಸ್ ಬಳಗವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.ಆ ತಾಯಿಯ ಜತೆ ಇಡೀ … Read more

ಕೊಟ್ಟ ಮಾತು ಉಳಿಸಿಕೊಂಡ “ಡಿ ಬಾಸ್” ಅಭಿಮಾನಿಗಳು

ಅನೇಕ ಕಾರಣಗಳಿಂದ ದರ್ಶನ್ ಅವರನ್ನು ದೂರವಿಟ್ಟಿದ್ದ ಮಾದ್ಯಮಗಳಿಂದಲೂ ಡೆವಿಲ್ ಗೆ “ಅಬ್ಬರ” ದ ಪ್ರಚಾರ ಅನೇಕ ಕಾರಣಗಳಿಂದ ದೂರವಿಟ್ಟಿದ್ದ ಮಾದ್ಯಮಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಟಿವಿ ಪರದೆಗಳಲ್ಲಿ ತೋರಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿಬಿಡ್ತಾ.. ಇಂತದ್ದೊಂದು ಬೆಳವಣಿಗೆಗೆ ಕಾರಣವಾಗಿದ್ದು ಡೆವಿಲ್ ಚಿತ್ರ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ ಅವರ ನಟನೆಯ ಡೆವಿಲ್ ಇಂದು ಚಿತ್ರಮಂದಿರಗಳಲ್ಲಿ ಸುನಾಮಿಯಾಗ ಅಪ್ಪಳಿಸಿದೆ.ಇದರ ಅಬ್ಬರವನ್ನು ಮಾದ್ಯಮಗಳು ಕೂಡ ಅನಿವಾರ್ಯವಾಗಿ ತೋರಿಸಬೇಕಾದ ಸನ್ನಿವೇಶ ನಿರ್ಮಾಣವಾಗಿತ್ತು. ದರ್ಶನ್ ನಟನೆಯ ಡೆವಿಲ್ ಗೆ ಕರ್ನಾಟಕಾದ್ಯಂತ … Read more

TRP ರೇಸ್ ನಲ್ಲಿ ಮುಗ್ಗರಿಸಿದ “ನ್ಯೂಸ್ 18 ಕನ್ನಡ”-ನಂಬರ್ 1 ಸ್ಥಾನಕ್ಕೆ ಮತ್ತೆ “ಟಿವಿ 9 ಕನ್ನಡ”

ನ್ಯೂಸ್ 18 ಕನ್ನಡ ಸುದ್ದಿ ಮನೆಯಲ್ಲಿ “ನೀರವ ಮೌನ-ನಿರಾಶೆ”- ಆತಂಕ: ಸಿಬ್ಬಂದಿಗೆ ತಪ್ಪಿದ ಪಾರ್ಟಿ ಸಂಭ್ರಮ..ಯಾಕೆ ಗೊತ್ತಾ,..? ಬೆಂಗಳೂರು: ನ್ಯೂಸ್ 18 ಕನ್ನಡ(NEWS 18 KANNADA) ದ ಮನೆಯಲ್ಲಿದ್ದ ಸಂಭ್ರಮ ಮರೆಯಾಗಿದೆ.ಆದರೆ ಟಿವಿ9 (TV KANNADA ) ಮನೆಯಲ್ಲಿ ಅದೇ ಸ್ಥಿತಪ್ರಜ್ಞತೆ..( ಏಕೆಂದರೆ ಟಿವಿ9 ಬಳಗ ಕಳೆದ ವಾರದ ಟಿಆರ್ ಪಿ ರೇಸ್ ನಲ್ಲಿ ಹಿಂದೆ ಬಿದ್ದಾಗ ಸ್ವಲ್ಪ ವಿಚಲಿತವಾಗಿತ್ತಾದ್ರೂ ಆತ್ಮವಿಶ್ವಾಸ ಕಳೆದುಕೊಂಡಿರಲಿಲ್ಲ. .ಯಾಕಂದ್ರೆ ಇದೆಲ್ಲಾ ಟಿಆರ್ ಪಿ ಗೇಮ್ ಎನ್ನುವುದು ಮ್ಯಾನೇಜ್ಮೆಂಟ್ ಗೆ ಗೊತ್ತಿತ್ತಂತೆ..!) ಮತ್ತೆ … Read more

“ಗಗನಯಾನಿ”ಯಾಗೋದು ಕಷ್ಟ,ಆದರೆ ಅಸಾಧ್ಯವಲ್ಲ

ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜತೆಗೆ ಜೀವನದಲ್ಲಿ ಶಿಸ್ತು ರೂಢಿಸಿಕೊಂಡಲ್ಲಿ, ನೀವು ನನ್ನ ರೀತಿ ಗಗನಯಾನಿ ಆಗಬಹುದು. ಜವಾಹರಲಾಲ್ ನೆಹರು ತಾರಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಕ್ಸಿಯಂ ಸ್ಪೇಸ್-4 ಮಿಷನ್ ರುವಾರಿ ಶುಭಾಂಶು ಶುಕ್ಲಾ ಹೇಳಿದ ಮಾತಿದು. ವಿದ್ಯಾರ್ಥಿಗಳ ಜತೆ ನಡೆಸಿದ ಸಂವಾದದಲ್ಲಿ ಅವರು ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು. `ನೀವು ಸಹ ನನ್ನಂತೆಯೇ ಗಗನಯಾನಿ ಆಗಬಹುದು. ಆದರೆ, ಇದೊಂದೇ ಆಗಬೇಕೆಂದು ಕನಸು ಕಾಣಬೇಡಿ. ಏಕೆಂದರೆ, ಈ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ನಾನು ಹೀರೋ ರೀತಿ ನಿಮಗೆ ಕಾಣಬಹುದು. … Read more

“ನ್ಯೂಸ್‌” ಓದುವಾಗಲೇ “ಸುದ್ದಿಮನೆ”ಯಿಂದ ಆ “ಆಂಕರ್‌” ಹೊರನಡೆದಿದ್ದೇಕೆ ..!?

ಇದು ಸುದ್ದಿಮನೆಯೊಂದರಲ್ಲಿ ಇತ್ತೀಚೆಗೆ ನಡೆದಿರಬಹುದಾದ ವಿಚಿತ್ರ ಹಾಗೂ ಅಪರೂಪದ ಘಟನೆ.. ನ್ಯೂಸ್ ಬುಲೆಟಿನ್ ಮಾಡುವಾಗಲೇ ಆಂಕರ್ ವೊಬ್ಬ ಹೊರನಡೆದಿದ್ದಾನೆ.ಆತ ಕೆಲಸ ಮಾಡುತ್ತಿರುವ ಚಾನೆಲ್ ಹೆಚ್ಚೇನೂ ಪ್ರಚಲಿತದಲ್ಲಿಲ್ಲದ ಕಾರಣಕ್ಕೇನೋ ಅದು ದೊಡ್ಡಮಟ್ಟದ ಸುದ್ದಿಯಾಗಿಲ್ಲ.. ಆತನೇ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಬಂದು ನಡೆದಿದ್ದೇನು ಎನ್ನುವುದನ್ನು ವಿವರಿಸಿದ್ದಾನೆ. ಹಾಗೆಯೇ ತನ್ನ ನಿಲುವು- ನಿರ್ದಾರವನ್ನು ಗಟ್ಟಿದ್ವನಿಯಲ್ಲಿ ಸಮರ್ಥಿಸಿಕೊಂಡಿದ್ದಾನೆ. ಸುದ್ದಿಮನೆಗಳಲ್ಲಿ ನಡೆವ ಒಳ್ಳೆಯ ಮತ್ತು ಕೆಟ್ಟ ಬೆಳವಣಿಗೆ ಎರಡರ ಮೇಲೂ ಬೆಳಕು ಚೆಲ್ಲುವಂತ ಜವಾಬ್ದಾರಿಯುತ ಕೆಲಸ ಮಾಡುತ್ತಾ ಬಂದಿರುವ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ … Read more

“ಸಂಕಷ್ಟ”ದಲ್ಲಿದ್ದ “ನ್ಯೂಸ್ ಫಸ್ಟ್” ಗೆ  ಸಿಕ್ಕೇಬಿಟ್ರಂತೆ “ಹೂಡಿಕೆ”ದಾರರು…! ಇನ್ನಾದ್ರು ನೀಗುತ್ತದಾ “ಮಾದ್ಯಮಮಿತ್ರ”ರ ಬವಣೆ..!

ಬೆಂಗಳೂರು: ಮತ್ತೊಮ್ಮೆ ನ್ಯೂಸ್ ಫಸ್ಟ್ ಬಗ್ಗೆ ಬರೆಯಬೇಕಾಗ್ತಿದೆ…ಅಲ್ಲಿ ಕೆಲಸ ಮಾಡ್ತಿರುವ ಮಾದ್ಯಮ ಸ್ನೇಹಿತರ ದೃಷ್ಟಿಯಲ್ಲಿ ಇದು ಒಂದ್ರೀತಿ ಪಾಸಿಟಿವ್ ಆದಂಥ ಸುದ್ದಿನೇ.(.ಅದನ್ನು ಬೇರೆ ರೀತಿ ಅರ್ಥೈಸುವಂತವರಿಗೆ ನಾವೇನು ಮಾಡ್ಲಿಕ್ಕಾಗೊಲ್ಲ ಬಿಡಿ). ಸಂಬಳ ಸಿಗದೆ ಕಷ್ಟದಲ್ಲಿರುವ ಸ್ನೇಹಿತರ ಪಾಲಿಗೆ ಇದೊಂದು ರೀತಿ ಚೇತೋಹಾರಿಯಾದ ವಿಚಾರ.ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದರೂ ಸಂಕಷ್ಟದಲ್ಲಿದೆ ಎಂದೇ ಬಿಂಬಿಸಲಾಗ್ತಿದ್ದ ಮ್ಯಾನೇಜ್ಮೆಂಟ್ ನ ಬವಣೆಯೂ ಈ ಮೂಲಕ ದೂರವಾಗಿದೆ ಎನ್ನುವುದು ಕೂಡ ಸಮಾಧಾನದ  ವಿಚಾರ..ಇದನ್ನೆಲ್ಲಾ ಹೇಳೊಕ್ಕೆ ಕಾರಣವೂ ಇದೆ..ಚಾನೆಲ್ ನ ಕೆಲವು ವಿಶ್ವಸನೀಯ ಮೂಲಗಳಿಂದ ಕನ್ನಡ ಫ್ಲ್ಯಾಶ್ ನ್ಯೂಸ್ … Read more

ಬಿಎಂಟಿಸಿ ಸಿಬ್ಬಂದಿ ಯೂನಿಫಾರ್ಮ್ ಗೆ ಪುಡಿಗಾಸು..!

ಊಟಕ್ಕಿಲ್ಲದ ಉಪ್ಪಿನಕಾಯಿ,… ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ..ಆನೆ ಬಾಯಿಗೆ ಹಪ್ಪಳ..ಎನ್ನುವ ಗಾಧೆಗಳನ್ನು ನೆನಪಿಸುವಂತಿದೆ ಬಿಎಂಟಿಸಿ ಆಡಳಿತದ ಧೋರಣೆ.ಕಾರ್ಮಿಕ ಸಿಬ್ಬಂಧಿಯ ಕಲ್ಯಾಣಕ್ಕಾಗಿ ಜಾರಿಗೊಳಿಸುತ್ತಿರುವ ಕಾರ್ಯಕ್ರಮ ಹಾಗೂ ಯೋಜನೆಗಳು ಅವರ ಪ್ರಯೋಜನಕ್ಕೆ ಬಾರದಂತಾಗ್ತಿದೆ..ಇದಕ್ಕೆ ಸಾಕ್ಷಿಯಾಗುತ್ತಾ ಬಂದಿರುವುದು ಸಮವಸ್ತ್ರದ ಯೋಜನೆ.ದುರಂತ ಎಂದ್ರೆ ಈ ಬಾರಿಯೂ ಆ ಅಮಾನವೀಯ ಪರಂಪರೆ ಮುಂದುವರೆದಿದೆ. ಜಗತ್ತಿಗೆ ಜಗತ್ತೇ ಬದಲಾಗುತ್ತಿದೆ.ನಮ್ಮ ಜೀವನಶೈಲಿಗಳು ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ರೂಪಾಂತರಗೊಳ್ಳುತ್ತಿವೆ.ಹಾಗೆಯೇ ನಾವು ಬಳಸುತ್ತಿದ್ದ ಎಲ್ಲಾ ವಸ್ತುಗಳ ದರವೂ ದುಬಾರಿಯಾಗುತ್ತಿದೆ.ಆದರೆ ಎಲ್ಲಾ ಬದಲಾದರೂ ಬಿಎಂಟಿಸಿಯ ಆಡಳಿತದ ಮನಸ್ಥಿತಿ ಮಾತ್ರ ಬದಲಾದಂತೆ ಕಾಣುತ್ತಿಲ್ಲ … Read more

ಶಿವಮೊಗ್ಗ ಜಿಲ್ಲಾ ಚೆಸ್ ಚಾಂಪಿಯನ್ ಶಿಪ್  ಗೆದ್ದ ಪತ್ರಕರ್ತ ನಾಗೇಶನಾಯ್ಕ ಪುತ್ರಿ ದೀಪಿಕಾ..

ಶಿವಮೊಗ್ಗ: ನಮ್ಮ ಪತ್ರಕರ್ತರ ಮಕ್ಕಳಲ್ಲೂ ಸಾಧಕರಿಗೇನು ಕೊರತೆಯಿಲ್ಲ.ಆದರೆ ಕಾರ್ಯ ಒತ್ತಡದ ಕಾರಣಕ್ಕೆ ತಮ್ಮ ಮಕ್ಕಳ ಪ್ರತಿಯೊಂದು ಬೆಳವಣಿಗೆ ಮೇಲೆ ಕಣ್ಣು ಹಾಯಿಸೋದು ಸ್ವಲ್ಪ ಕಷ್ಟವೇ..ವಿಪರೀತ ಕೆಲಸಗಳಲ್ಲೇ ಮುಳುಗಿ ಹೋಗಿರುವ ಪತ್ರಕರ್ತರಿಗೆ ತಮ್ಮ ಮಕ್ಕಳು ಬೆಳೆಯೋದು ಗೊತ್ತಾಗುವುದಿಲ್ಲ..ಅವರು ಏನ್ ಸಾಧನೆ ಮಾಡಿದ್ದಾರೆ ಎನ್ನುವುದರ ಮಾಹಿತಿನೇ ಇರದಂಗಾಗಿರುತ್ತದೆ. ಮಕ್ಕಳು ಸಾಧನೆ ಮಾಡಿದ ಸುದ್ದಿ ಕೇಳಿದಾಗ ಹೌದಾ..ಎನ್ನುವ ಸಂತೋಷ-ಅಚ್ಚರಿಯ ಉದ್ಘಾರ ಮಾತ್ರ ಅವರಿಂದ ಹೊರಡುತ್ತದೆ.(ನಮ್ಮ ಹೆಮ್ಮೆಯ ಶಿವಮೊಗ್ಗದ ಪತ್ರಕರ್ತ ಮಿತ್ರರ ಮಕ್ಕಳು ಮಾಡಿರುವ ಸಾಧನೆ ಬೆಳೆಕಿಗೆ ಬಂದಿ್ಲ್ಲ ಅಷ್ಟೆ) ಇದನ್ನೆಲ್ಲಾ ಏಕೆ … Read more

“eV ಬಸ್‌” ಡ್ರೈವರ್‌ ಗಳಿಗೆ “ಗೇಟ್‌ ಪಾಸ್”..! “ಕಿಲ್ಲರ್‌” ಕಳಂಕ ತೊಡೆದುಕೊಳ್ಳಲು “ಪ್ಲ್ಯಾನ್‌”.!

ಸಚಿವ್ರೇ..!ನಿಮ್ಮೆ ಕಾಳಜಿ ಇದ್ರೆ ಮೊದಲು ಹಾಗೆ ಮಾಡಿ… ಬೆಂಗಳೂರು: ಅಪಘಾತಗಳ ಕಾರಣಕ್ಕೆ BMTC (bengaluru metopolitan transport corporatio)ಗೆ ಮೊದಲೆಲ್ಲಾ “ಕಿಲ್ಲರ್‌” ಎನ್ನುವ ಕಳಂಕ ಮೆಟ್ಟಿಕೊಳ್ತಿತ್ತು..ಅದನ್ನು ಸರಿಪಡಿಸುವ ಸಾಕಷ್ಟು ಕೆಲಸಗಳನ್ನು ನಿಗಮದ ಮಾಡಿದ ಕಾರಣಕ್ಕೇನೋ ಗೊತ್ತಿಲ್ಲ, ಅಪಘಾತಗಳ ಸಂಖ್ಯೆ ಕಡ್ಮೆಯಾಯ್ತು..ಸಾಯೋರ ಪ್ರಮಾಣ ವೂ ಕ್ಷೀಣಿಸ್ತು.ಆದರೆ ಕೆಲ ವರ್ಷಗಳ ಈಚೆಗೆ ನಡೀತಿರೋ ಅಪಘಾತಗಳು-ಅದಕ್ಕೆ ಕಾರಣವಾಗ್ತಿರುವ ಸಂಗತಿಗಳನ್ನು ಗಮನಿಸಿದ್ರೆ ಆತಂಕವಾಗುತ್ತೆ..ಕಿಲ್ಲರ್‌ ಎನ್ನುವ ಹಣೆಪಟ್ಟಿ ಮತ್ತೆ ಅಂಟಿಸಿಕೊಳ್ಳೊಕ್ಕೆ ನಿಗಮನೇ ಪ್ರಯತ್ನಿಸ್ತಿದೆಯಾ ಎನ್ನುವ ಶಂಕೆ ಕಾಡ್ತಿದೆ.ಇದಕ್ಕೆ ಕಾರಣ ಇವಿ ಬಸ್‌ ಗಳಿಂದಾಗುತ್ತಿರುವ ಅಪಘಾತ … Read more

“ಅಕ್ರಮ”ದ ವಿರುದ್ಧ ಸಿಡಿದೆದ್ದ “ದಕ್ಷ-ಖಡಕ್” ಅಧಿಕಾರಿ “ಲೇಡಿ ಸಿಂಗಂ” ಆಶಾ ಪರ್ವಿನ್ ಎತ್ತಂಗಡಿ..?!

ವಿಕ್ಟೋರಿಯಾ ಆಸ್ಪತ್ರೆ “ನೆಫ್ರೋ ಯುರಾಲಜಿ” ಡೈರೆಕ್ಟರ್ ಡಾ.ಶಿವಲಿಂಗಯ್ಯ ಕರ್ಮಕಾಂಡ ಬಯಲಿಗೆಳೆದಿದ್ದಕ್ಕೆ ವರ್ಗಾವಣೆ ಬಹುಮಾನ..! ಬೆಂಗಳೂರು: ರಾಜ್ಯದ ಅಡಳಿತ ನಿಜಕ್ಕೂ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳ ಬರ ಎದುರಿಸುತ್ತಿದೆ ..ಅದರಲ್ಲೂ ಆಯಕಟ್ಟಿನ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ “ಐಎಎಸ್-ಕೆಎಎಸ್” ನಂತ ಅಧಿಕಾರಿಗಳಲ್ಲಿ ಬಹುತೇಕ ರು ಭ್ರಷ್ಟರಾಗಿರುವ ಸಂಕಷ್ಟದ ಸನ್ನಿವೇಶದಲ್ಲಿ ಬೆರಳೆಣಿಕೆಯ ಅಧಿಕಾರಿಗಳು ನಮ್ಮ ನಡುವಿದ್ದಾರೆ ನ್ನು ವುದು ಸಮಾಧಾನದ ಸಂಗತಿ.ಆದರೆ ದುರಂತದ ಸಂಗತಿ ಏನಪ್ಪಾ ಅಂದ್ರೆ ಇಂಥಾ ಬೆರಳೆಣಿಕೆಯ ಅಧಿಕಾ ರಿಗಳಿಗೂ ಕೂಡ ಕೆಲಸ ಮಾಡಲಿಕ್ಕಾಗದಂಥ ಉಸಿರುಗಟ್ಟಿಸುವ ವಾತಾವರಣವನ್ನು ನಿರ್ಮಿಸ … Read more