“ಸೆಂಚುರಿ ಕ್ಲಬ್ ಇನ್ಮುಂದೆ ಸಾರ್ವಜನಿಕ ಪ್ರಾಧಿಕಾರ” ಹೈ ಕೋರ್ಟ್ ಘೋಷಣೆ

ಬೆಂಗಳೂರು: ಬೆಂಗಳೂರಿನ ಕಬ್ಬನ್ ಪಾರ್ಕ್ ಉದ್ಯಾನದೊಳಗೆ ಇರುವ ಶತಮಾನೋತ್ಸವ ಕ್ಲಬ್ ಅಥವಾ century clu ಅನ್ನು ಸಾರ್ವಜನಿಕ ಪ್ರಾಧಿಕಾರ ಎಂದು ಘೋಷಿಸಿದೆ.ಕ್ಲಬ್ ನೊಳಗೆ ನಡೆಯುತ್ತಿದ್ದ ವ್ಯವಹಾರ-ಆರ್ಥಿಕ ವಹಿವಾಟು ಸೇರಿದಂತೆ ಆಡಳಿತ ಮಂಡಳಿಯೊಳಗೇ ಇತ್ಯರ್ಥವಾಗುತ್ತಿದ್ದ ಸಾಕಷ್ಟು ಗೌಪ್ಯ ಮಾಹಿತಿಗಳು ಇನ್ಮುಂದೆ ಸಾರ್ವಜನಿಕವಾಗಿ ಲಭ್ಯವಾಗಲಿವೆ.ಕ್ಲಬ್ ಆಡಳಿತ ಮಂಡಳಿ ಕೂಡ ಯಾವುದೇ ಮಾಹಿತಿಯನ್ನು ನಿರಾಕರಿಸುವಂತಿಲ್ಲ. ಸೆಂಚುರಿ ಕ್ಲಬ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿ ಜುಲೈ 8 ರಂದು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅಧ್ಯಕ್ಷತೆಯ ಪೀಠವು,ತನ್ನ ಮಹತ್ವದ ತೀರ್ಪಿನಲ್ಲಿ, ಕರ್ನಾಟಕ ಮಾಹಿತಿ ಆಯೋಗದ … Read more

“ವರ್ಗಾವಣೆ” ಲೀಸ್ಟ್ ನಿಂದಲೇ ಹೆಸ್ರು ಡಿಲೀಟ್ ಮಾಡಿಸಿಕೊಂಡ್ ಬಿಟ್ರಾ ddpu ಮನೋಹರ್ ಕೊಳ್ಳಾ..?!

ಮಿನಿಸ್ಟರ್ಸ್ ಪ್ರಿಯಾಂಕ್ ಖರ್ಗೆ-ಮಧು ಬಂಗಾರಪ್ಪ ಹೆಸ್ರಲ್ಲೇ “ಅಬೇಧ್ಯ ಕೋಟೆ” ನಿರ್ಮಿಸಿಕೊಂಡಿದ್ದಾರಾ.. ಮನೋಹರ್ ಕೊಳ್ಳಾ..!? ಬೆಂಗಳೂರು: ಮಾತೆತ್ತಿದ್ರೆ ನನಗೆ ಅವ್ರು ಗೊತ್ತು..ಇವ್ರು ಗೊತ್ತು… ಪ್ರಿಯಾಂಕ ಖರ್ಗೆ ನನ್ನ ಗಾಡ್ ಫಾದರ್..ಮಿನಿಸ್ಟರ್ ಮಧು ಬಂಗಾರಪ್ಪ ನನ್ ಜೇಬಲ್ಲಿದ್ದಾರೆ.,ಎಂದೆಲ್ಲಾ ಬಿಲ್ಡಪ್ ಕೊಟ್ಟಿಕೊಂಡು ಅಡ್ಡಾಡುತ್ತಿರುವ ಆಪಾದನೆ ಪದವಿಪೂರ್ವ ಇಲಾಖೆಯ ಬೆಂಗಳೂರು ದಕ್ಷಿಣ ಜಿಲ್ಲೆಯ ಉಪನಿರ್ದೇಶಕ ಮನೋಹರ್ ಕೊಳ್ಳಾ ಅವರ ಮೇಲಿದೆ.ತಾನು ಹೇಳಿದ ಕೆಲಸವನ್ನು ಮಾಡುವ, ಝೀ ಹುಜೂರ್ ಎಂದ್ಹೇಳುವ ಬಕೆಟ್ ಗಿರಾಕಿಗಳನ್ನಷ್ಟೇ ಅಕ್ಕಪಕ್ಕ ಇಟ್ಟುಕೊಂಡಿರುವ ಬಗ್ಗೆ ಇಲಾಖೆ ತುಂಬಾ ಮಾತಿದೆ.ಇಂಥಾ ಮನೋಹರ್ ಕೊಳ್ಳಾ … Read more

ರಾಷ್ಟ್ರವಾದಿ ಚಿಂತಕ ಚಕ್ರವರ್ತಿ ಸೂಲಿಬೆಲೆಗೆ ಕ್ಯಾನ್ಸರ್..!?

ಸಾಮಾಜಿಕ ಜಾಲತಾಣಗಳಲ್ಲಿ ಸೂಲಿಬೆಲೆ ಆರೋಗ್ಯದ ಬಗ್ಗೆ ಊಹಾಪೋಹ-ಸ್ಪಷ್ಟನೆ ನೀಡದ ಸೂಲಿಬೆಲೆ ಬೆಂಗಳೂರು: ತಾತ್ವಿಕ ಭಿನ್ನಾಭಿಪ್ರಾಯ, ಸೈದ್ದಾಂತಿಕ ವೈರುದ್ಧ್ಯಗಳಾಚೆಗೆ ಕರ್ನಾಟಕ ಕಂಡ ಒಬ್ಬ  ಉತ್ತಮ ವಾಗ್ಮಿ ,ಚಿಂತಕ, ರಾಷ್ಟ್ರವಾದಿ ಹೋರಾಟಗಾರ ಎಂದೇ ಬಿಂಬಿಸಿಕೊಂಡಿರುವ  ಚಕ್ರವರ್ತಿ ಸೂಲಿಬೆಲೆ ಆರೋಗ್ಯಕ್ಕೆ ಸಂಬಂಧಪಟ್ಟಂತೆ ದೊಡ್ಡ ಶಾಕಿಂಗ್ ಎನ್ನುವಂತ ಸುದ್ದಿಯೊಂದು ಹರಿದಾಡುತ್ತಿದೆ. ಚಕ್ರವರ್ತಿ ಸೂಲಿಬೆಲೆ ಆರೋಗ್ಯವನ್ನು ಮಾರಕವಾದ ಮಾರಿ ಆವರಿಸಿಕೊಂಡಿದೆ ಎನ್ನಲಾಗ್ತಿದೆ.ಈ ಮಹಾಮಾರಿಯನ್ನು ಗಂಟಲು ಕ್ಯಾನ್ಸರ್ ಎನ್ನಲಾಗ್ತಿದೆ.ಸಾಮಾಜಿಕ ಕಾರ್ಯಕರ್ತ ಹಾಗೂ ಕನ್ನಡಪರ ಹೋರಾಟಗಾರರಾದ ಭೈರಪ್ಪ ಹರೀಶ್ ಕುಮಾರ್ ಎನ್ನುವವರು ಇದನ್ನು ತಮ್ಮ ಫೇಸ್ ಬುಕ್ … Read more

ಗಾಯಕ ಜೋಗಿಲ ಸಿದ್ದರಾಜುಗೆ ಜಾತಿನಿಂದನೆ ಮಾಡಿದ್ರಾ ಗಾಯತ್ರಿ..!

ಬೆಂಗಳೂರು: ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ನಿರ್ದೇಶಕರಾದ ಗಾಯತ್ರಿ ಅವರ ಮೇಲೆ ಜಾತಿನಿಂದನೆ ಆರೋಪ ಕೇಳಿಬಂದಿದೆ. ಜನಪದ ಗಾಯಕ ಜೋಗಿಲ ಸಿದ್ದರಾಜು ಅವರು ಸಲ್ಲಿಸಿದ ದೂರಿನ ಮೇಲೆ ಬೆಂಗಳೂರಿನ ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜನಪದ ಗಾಯಕರಾಗಿರುವ  ಜೋಗಿಲ ಸಿದ್ಧರಾಜು  ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ವಿವಿಧ ಕಾರ್ಯಕ್ರಮವನ್ನ ನಡೆಸಿಕೊಡುತ್ತಿದ್ದರು. ಕಳೆದ ಮೂರು ವರ್ಷದಿಂದ ಅವರು ನಡೆಸಿಕೊಟ್ಟ ಕಾರ್ಯಕ್ರಮಕ್ಕೆ ಹಣ ಸಂದಾಯವಾಗಬೇಕಿತ್ತು ಈ ಹಿನ್ನಲೆಯಲ್ಲಿ ಇದೇ ಜುಲೈ 11 ರಂದು ಸಂಭಾವನೆಯ ಹಣ … Read more

ಒಂದೇ ಫ್ಯಾನಿಗೆ ಕೊರಳೊಡ್ಡಿದ ತಾಯಿ-ಮಗಳು

ರಾಜಧಾನಿ ಬೆಂಗಳೂರು ಹೃದಯವಿದ್ರಾವಕ ಘಟನೆಗೆ ಸಾಕ್ಷಿಯಾಗಿದೆ.ಪ್ರೇಮ ವೈಫಲ್ಯಕ್ಕೆ ಬೇಸತ್ತು ಮಗಳು ಆತ್ಮಹತ್ಯೆ ಮಾಡಿಕೊಂಡರೆ ಕರುಳ ಕುಡಿಯನ್ನು ಕಳೆದುಕೊಂಡ ನೋವಿಗೆ ನೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ವಿಪರ್ಯಾಸದ ಸಂಗತಿ ಏನೆಂದರೆ ಮಗಳು ಆತ್ಮಹತ್ಯೆ ಮಾಡಿಕೊಂಡ ಹಗ್ಗಕ್ಕೆ ತಾಯಿಯೂ  ಕೊರಳೊಡ್ಡಿದ್ದಾಳೆ. ತಂದೆ ,ಬೆಂಗಳೂರಿನ ಪ್ರತಿಷ್ಟಿತ ಕಂಪೆನಿ ಯೊಂದ ರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್. ಮನೆಯಲ್ಲಿ ಏನೂ ಸಮಸ್ಯೆ ಇರಲಿಲ್ಲ.ಕುಟುಂಬದಲ್ಲಿ ಅನ್ಯೋನ್ಯತೆ ಇತ್ತು.ಎಂದಿನಂತೆ ಕೆಲಸಕ್ಕೆ ತೆರಳಿದ್ದಾರೆ. ಬೆಳಗ್ಗೆ ಡೈನಿಂಗ್ ಟೇಬಲ್ ಗೆ ಬಂದು ಎಲ್ಲರನ್ನು ಕರೆಯುವುದು ಶ್ರೀಜಾರೆಡ್ಡಿ ವಾಡಿಕೆ ಆಗಿತ್ತು.ಆದರೆ ನಿನ್ನೆ ಬೆಳಗ್ಗೆ 8.30 … Read more

“ರಿಪಬ್ಲಿಕ್ ಕನ್ನಡ”ದಲ್ಲಿ ಮತ್ತೆ  ಉದ್ಯೋಗ ಕಡಿತ..! ಮತ್ತಷ್ಟು ಉದ್ಯೋಗಿಗಳಿಗೂ  ಕೆಲಸ ಕಳೆದುಕೊಳ್ಳುವ ಆತಂಕ.!

ಬೆಂಗಳೂರು:ರಿಪಬ್ಲಿಕ್ ಕನ್ನಡ ನ್ಯೂಸ್ ಚಾನೆಲ್ ನಲ್ಲಿ  ಉದ್ಯೋಗಿಗಳ ಕೆಲಸ ಕಸಿದುಕೊಳ್ಳುವ  ಪರಂಪರೆ ಮುಂದುವರೆದಿದೆ ಯಂತೆ….ಶೋಭಾ ಮಳವಳ್ಳಿ, ಚಾನೆಲ್ ಮುಖ್ಯಸ್ಥೆಯಾಗಿ ಬಂದ ಮೇಲೆ ನಡೆದ ಮೊದಲ ಬೆಳವಣಿಗೆಯಿದು…ಹಾಗೆಂದು ಇದಕ್ಕೆ ಅವರನ್ನು ದೂಷಿಸುವುದು ನಮ್ಮಉದ್ದೇಶವಲ್ಲ.ಅದು  ಸರಿಯೂ ಅಲ್ಲ .ಅಂದ್ಹಾಗೆ  ಚಾನೆಲ್ ನಲ್ಲಿ ನಡೆದಿದೆ ಎನ್ನಲಾದ ಉದ್ಯೋಗ ಕಡಿತಕ್ಕೆ, ಮ್ಯಾನೇಜ್ಮೆಂಟ್  ಕೊಟ್ಟಿರುವ ಕಾರಣ ಅನಗತ್ಯ ಸಿಬ್ಬಂದಿಯ ಹೊರೆ.ಹೆಚ್ಚುವರಿ ಸಿಬ್ಬಂದಿಯನ್ನು  ಕಡಿತಗೊಳಿಸಲೇಬೇಕಾದ ಕಾರಣಕ್ಕೆ ಸುಮಾರು 10 ಜನರನ್ನು ತೆಗೆಯಲಾಗಿದೆ ಎನ್ನುವ ಸುದ್ದಿ ಬಂದಿದೆ..ಆದರೆ ಆಡಳಿತದ ದಿಢೀರ್ ನಿರ್ದಾರದಿಂದ ಕೆಲಸ ಕಳೆದುಕೊಂಡ ಸಿಬ್ಬಂದಿ ಶಾಕ್ … Read more

ಬೆಂಗಳೂರು ವೀಡಿಯೋ ಜರ್ನಲಿಸ್ಟ್ ಗಳ ಫೋಟೋಗ್ರಫಿ ಜಾಕೆಟ್ ಅನಾವರಣ..

ಬೆಂಗಳೂರು: ಎಲ್ಲಾ ಹವಾಮಾನಗಳಲ್ಲೂ ಕ್ರಿಯಾಶೀಲವಾಗಿ ಕೆಲಸ ಮಾಡುವ ನಮ್ಮ ವೀಡಿಯೋ ಜರ್ನಲಿಸ್ಟ್ ( ಮುಂಚೆಯೆಲ್ಲಾ ಕ್ಯಾಮೆರಾಮನ್ ಗಳನ್ನು ಈ ರೀತಿ ಗೌರವಯುತವಾಗಿ ಕರೆಯುತ್ತಿರಲಿಲ್ಲ) ಗಳಿಗೆ ರಿಪೋರ್ಟರ್ ಗಳ ಹೋಲಿಕೆಯಲ್ಲಿ ಸೌಲಭ್ಯ-ಸವಲತ್ತು-ಸಹಕಾರ-ನೆರವು ಸಿಗೋದು ತೀರಾ ಕಡಿಮೆ.ಆದರೂ ಈ ಬೇಸರ-ಅಸಮಾಧಾನ-ನೋವನ್ನೆಲ್ಲಾ ಮರೆತು ಸಂಸ್ಥೆ ವಹಿಸಿದ ಕೆಲಸ ಹಾಗೂ ಫೀಲ್ಡ್ ನಲ್ಲಿ ರಿಪೋರ್ಟರ್ ಹೇಳಿದ ಅಸೈನ್ಮೆಂಟನ್ನು ಶೂಟ್ ಮಾಡಿಕೊಡುವ ಕೆಲಸ ಮಾಡುತ್ತಾ ಬಂದಿದ್ದಾರೆ.ರಿಪೋರ್ಟರ್ ಗಳಂತೆ ತಮಗೂ ಎಲ್ಲಾ ರೀತಿಯ ಸ್ಥಾನಮಾನ ಸಿಗಬೇಕೆನ್ನುವ ಮಹದಾಸೆ ಕ್ಯಾಮೆರಾಮನ್ ಗಳಿಗೆ ಇದ್ದರೂ ಅನೇಕ ಕಾರಣಗಳಿಂದ ಅದು … Read more

EXCLUSIVE….. ಯಾವ ಕ್ಷಣದಲ್ಲೂ ಎಲೆನ್‌ (ALLEN) ಟ್ಯೂಷನ್‌ ಸೆಂಟರ್ಸ್‌ ಗಳಿಗೆ ಬೀಗ..?!

ಅಲೆನ್‌ ಕೆರಿಯರ್‌ ಇನ್ಸಿಟ್ಯೂಟ್‌  ನ ಬ್ರಹ್ಮಾಂಡ ಶೈಕ್ಷಣಿಕ ಅಕ್ರಮ ಬಯಲು- ಎಲ್ಲಾ ಸೆಂಟರ್ಸ್‌ ಮುಚ್ಚುವಂತೆ ಶಿಕ್ಷಣ ಇಲಾಖೆಯಿಂದ ಖಡಕ್‌ ಆದೇಶ- ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಸರ್ಕಾರದ ಮಟ್ಟದಲ್ಲಿ ತೀವ್ರ ಲಾಭಿ..!.. ಎಲೆನ್ ಕೆರಿಯರ್ ಇನ್ಸಿಟ್ಯೂಟ್ … ಈ ಹೆಸರು ಕೇಳದಿರೋರೇ ಕಡಿಮೆ  ಬಿಡಿ..ನಿಮ್ಮ ಮಕ್ಕಳನ್ನು ಡಾಕ್ಟರ್ಸ್.ಎಂಜಿನಿಯರ್ಸ್‌ ಮಾಡಿಸುತ್ತೇವೆ ಎಂದು ಪತ್ರಿಕೆಗಳಲ್ಲಿ ಪುಟಗಟ್ಟಲೇ ಜಾಹೀರಾತು ಕೊಟ್ಟು ಪೋಷಕರು-ವಿದ್ಯಾರ್ಥಿಗಳಲ್ಲಿ ಸಾಮೂಹಿಕ ಸನ್ನಿ ಸೃಷ್ಟಿಸಿದ ಸಂಸ್ಥೆ.ಮಕ್ಕಳ ಭವಿಷ್ಯದ ಬಗ್ಗೆ  ಬಣ್ಣ ಬಣ್ಣದ ಕನಸುಗಳನ್ನು ಬಿತ್ತಿ, ಪ್ರತಿ ವಿದ್ಯಾರ್ಥಿಯಿಂದಲೂ ಲಕ್ಷಾಂತರ … Read more

ಭಾರತೀಯ ಬಾಹ್ಯಾಕಾಶದ ಮೇರುವ್ಯಕ್ತಿತ್ವಕ್ಕೆ ಕಾಂಗ್ರೆಸ್ ಸರ್ಕಾರದಿಂದ ಅವಮಾನ-ಅಗೌರವ ..!

ಮನಮೋಹನ್ ಸಿಂಗ್ ದೇಶದ ಪ್ರಧಾನಿಯಾಗಿದ್ದಾಗ ಯಾವ ಮಹಾನ್ ವ್ಯಕ್ತಿತ್ವ-ಮೇರು ಪ್ರತಿಭೆಯನ್ನು ಗುರುತಿಸಿ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ರೋ ಅಂಥವರನ್ನು ಬದುಕಿದ್ದಾಗ ಲಂತೂ ಅಲ್ಲ, ಅಟ್ಲೀಸ್ಟ್ ಸತ್ತ ಮೇಲಾದ್ರೂ ಗೌರವಯುತವಾಗಿ ನಡೆಸಿಕೊಳ್ಳಬೇಕಿತ್ತು. ಕನಿಷ್ಟ ಸೌಜನ್ಯಕ್ಕಾದ್ರೂ ಸರ್ಕಾರದಿಂದ ಸೂಕ್ತ ಗೌರವ-ವಿದಾಯ ಸಲ್ಲಿಸಬಹುದಿತ್ತೇನೋ..? ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಬೇರೆಯದೇ ರಾಜಕೀಯ ವಿಚಾರಗಳಲ್ಲಿ ಮುಳುಗೋಗಿಬಿಟ್ಟಿತ್ತು..ಇದು, ಇಸ್ರೋದ ದೀರ್ಘಕಾಲದ ಅಧ್ಯಕ್ಷರು,ಬಾಹ್ಯಾಕಾಶ ಕ್ಷೇತ್ರದ ಇತಿಹಾಸದಲ್ಲಿ ಭಾರತದ ಹೆಮ್ಮೆಯ ಸಾಕ್ಷಿಪ್ರಜ್ನೆ, ಹಲವು ಪ್ರಥಮಗಳ ರೂವಾರಿ… ಗರಿಷ್ಠ ಸಾಧನೆಗಳ ಪ್ರವರ್ತಕ ಡಾ.ಕಸ್ತೂರಿ ರಂಗನ್ ಅವರ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ … Read more

ಸುದ್ದಿ ಜಗತ್ತಿನಲ್ಲಿ ಸದ್ದು ಮಾಡುತ್ತಿರುವ  “ನ್ಯೂಸ್ ಫಸ್ಟ್” ನಲ್ಲಿ ಆಗುತ್ತಿರುವುದೇನು..?  ಹೀಗೆ ನಡೆಯಿತೆನ್ನುವುದು  “ಸತ್ಯ”ನಾ..?

ನಿಜವಾಗ್ಲೂ  “ನ್ಯೂಸ್ ಫಸ್ಟ್” ಆರ್ಥಿಕ ಹಿಂಜರಿತಕ್ಕೆ ಸಿಲುಕಿದೆಯಾ..?! ಚಾನೆಲ್ ಸಿಬ್ಬಂದಿಯಲ್ಲೇಕೆ ಗೊಂದಲ-ಆತಂಕ..!? ಕನ್ನಡದ ಅತ್ಯಂತ ಜನಪ್ರಿಯ ಸುದ್ದಿ ಚಾನೆಲ್ ಗಳಲ್ಲಿ ಒಂದಾದ ನ್ಯೂಸ್ ಫಸ್ಟ್ (news first)ಕಾರ್ಯಾರಂಭ ಮಾಡಿದ ಕಡಿಮೆ ಅವಧಿಯಲ್ಲೇ ಅಪಾರ ಜನಮನ್ನಣೆ ಪಡೆಯಿತೆನ್ನುವುದು ಎಷ್ಟು ಸತ್ಯವೋ, ನಂಬರ್ 1,2,3 ಚಾನೆಲ್ ಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದು,ಇವತ್ತಿಗೂ ಅದೇ ವೃತ್ತಿಪರ ಪರಂಪರೆಯನ್ನುಳಿಸಿಕೊಂಡು ಹೋಗುತ್ತಿದೆ ಎನ್ನುವುದರಲ್ಲಿ ಉತ್ಪ್ರೇಕ್ಷೆಯಿಲ್ಲ.ಸುದ್ದಿಯ ಗುಣಮಟ್ಟದ ವಿಚಾರದಲ್ಲಿ ಯಾವುದೆ ರಾಜಿಯಿಲ್ಲದೆ ವೃತ್ತಿನಿಷ್ಟೆ ಉಳಿಸಿಕೊಂಡು ಮುನ್ನಡೆಯುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಹಾಗಾಗಿ ಇಂಥಾ ಚಾನೆಲ್ ಗಳ … Read more