CRICKET NEWS..DHRUV JUREL STORY.. ಟೀಮ್ ಇಂಡಿಯಾದ “ಧ್ರುವ” ನಕ್ಷತ್ರ “ಜುರೇಲ್” ಹಿಂದಿದೆ ಅಮ್ಮನ ತ್ಯಾಗ.. ಅಪ್ಪನ ಶಿಸ್ತು..!

heart touching story… ಒಂದು ಚಿನ್ನದ ನೆಕ್ಲೆಸ್.. ಮಗನ ಭವಿಷ್ಯವನ್ನೇ ಬಂಗಾರವನ್ನಾಗಿಸಿದ ನೈಜ ಕಥೆ..! ಸುಮಾರು 11 ವರುಷಗಳ ಹಿಂದೆ… 13 ವರ್ಷದ ಬಾಲಕ ಒಂದು ಸಾಧಾರಣ ಮೊತ್ತದ ಕ್ರಿಕೆಟ್ ಬ್ಯಾಟ್ ಮತ್ತು ಕಿಟ್‍ಗಾಗಿ ಅಪ್ಪ- ಅಮ್ಮನ ಜೊತೆ ಹಠ ಮಾತ್ರವಲ್ಲ.. ರಂಪಾಟವನ್ನೇ ಮಾಡಿದ್ದ. ನಾನು ಕ್ರಿಕೆಟ್ ಆಡಬೇಕು.. ನನಗೆ ಬ್ಯಾಟ್ ಬೇಕು ಎಂದು ಕಿರುಚಾಡುತ್ತಿದ್ದ ಮಗನ ಮೇಲೆ ತಾಳ್ಮೆ ಕಳೆದುಕೊಂಡ ಅಪ್ಪ ಸರಿಯಾಗಿಯೇ ಪೆಟ್ಟು ಕೊಟ್ಟಿದ್ದ. ಇದರಿಂದ ಇನ್ನಷ್ಟು ಸಿಟ್ಟು ಮಾಡಿಕೊಂಡ ಆ ಬಾಲಕ ಸೀದಾ … Read more

ಸವಾಲುಗಳ ನಡುವೆ ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕ..

ಉತ್ಸಾಹಿ ಅಧ್ಯಕ್ಷ ನಿಕೇತ್ ಮೌರ್ಯ, ಹತ್ತರ ಸಾಲಿನಲ್ಲಿ ಹನ್ನೊಂದನೆಯ ಅಧ್ಯಕ್ಷ ರಾಗುಳಿಯದಿದ್ರೆ ಸಾಕು..! ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿ ಕಾಂಗ್ರೆಸ್ ನ ಯುವ ನಾಯಕ,ಪ್ರಖರ ವಾಗ್ಮಿ,ಅತ್ಯುತ್ತಮ ಸಂಘಟನೆಕಾರ ನಿಕೇತ್ ರಾಜ್ ಮೌರ್ಯ ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.ಬಿಎಂಟಿಸಿ ಅತ್ಯಂತ ಸಂಕಷ್ಟದಲ್ಲಿರುವ ಸನ್ನಿವೇಶದಲ್ಲೇ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.ಅವರಿಗೆ ಶುಭಾಷಯ ಕೋರುತ್ತಾ ನೂತನ ಅಧ್ಯಕ್ಷ ನಿಕೇತ್ ಅವರ ಮುಂದೆ ಇರುವ ದಂಡಿ ಸವಾಲುಗಳ ಮೇಲೆ ಕನ್ನಡ ಫ್ಲ್ಯಾಶ್ ನ್ಯೂಸ್ ಬೆಳಕು ಚೆಲ್ಲುತ್ತದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿಯೋಜನೆಯಿಂದ ನಿಗಮಕ್ಕೆ … Read more

ಹೇಳ್ರಿ.. ಮಾರ್ವಾಡಿಗಳೇ..!  “ಪೂಜೆ-ವೃತ-ದಾನ-ಪ್ರಾಣಿಪಕ್ಷಗಳಿಗೆ ಆಹಾರ” ಯಾವ ಪುರುಷಾರ್ಥಕ್ಕೆ..!

ಬೆಂಗಳೂರಲ್ಲಿ ಹೆಚ್ಚಾಯ್ತು ಕೆಲವು ಮಾರ್ವಾಡಿಗಳ ರೌಡಿಯಿಸಂ- ಆಟಾಟೋಪ: ಅಟ್ಟಹಾಸಕ್ಕೆ ಕಡಿವಾಣ ಬೀಳದಿದ್ರೆ ಕನ್ನಡಿಗರಿಗೇನೆ ಅಪಾಯ..? ಬೆಂಗಳೂರಲ್ಲಿ ಕೆಲವು ಮಾರ್ವಾಡಿಗಳ ಆಟಾಟೋಪ-ಅಟ್ಟಹಾಸ ಅದೇಕೋ ಹೆಚ್ಚಾದಂತಿದೆ.(ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಕೂಡ ಒಳ್ಳೆಯದಲ್ಲ..ಇವತ್ತು ಅನೇಕರು ಮಹಾವೀರ ಬೋಧಿಸಿದ ತತ್ವಕ್ಕೆ ನಿಷ್ಟರಾಗಿ ಬದುಕುತ್ತಿದ್ದಾರೆ..ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ..) ವಾಸದ ಜತೆಗೆ ವ್ಯಾಪಾರ ಮಾಡಿಕೊಂಡು ಹೋಗ್ಲಿಕ್ಕೆ ಸ್ಥಳಾವಕಾಶ ಕೊಟ್ಟಿದ್ದು ವಿಶಾಲ ಹೃದಯಿಗಳಾದ ನಮ್ಮ ಕನ್ನಡಿಗರ ತಪ್ಪು ಎನ್ನಿಸ್ಲಿಕ್ಕೆ ಶುರುವಾಗಿದೆ.ಈಗಾಗಲೇ ಬೆಂಗಳೂರನ್ನು ಬಹುತೇಕ ಅತಿಕ್ರಮಿಸಿಕೊಂಡಿರುವ ಮಾರ್ವಾಡಿಗಳು ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡೊಕ್ಕೆ ಶುರುಮಾಡಿದ್ದಾರೆ. ಅವರ ಅಟ್ಟಹಾಸದ ಅತಿರೇಕಕ್ಕೆ … Read more

PU ಬೋರ್ಡ್”ನ   ಭ್ರಷ್ಟರು-ಮೈಗಳ್ಳರಿಗೆ ಸಿಂಹಸ್ವಪ್ನವಾದ“ಮಿಸ್ಟರ್ ಕ್ಲೀನ್”

ಪದವಿಪೂರ್ವ ಶಿಕ್ಷಣ ಮಂಡಳಿ( ಪಿಯು ಬೋರ್ಡ್)ಗೆ ಮಿಸ್ಟರ್ ಕ್ಲೀನ್ ಎಂದೇ ಖ್ಯಾತಿ ಪಡೆದಿರುವ ಕಿರಿಯ ಐಎಎಸ್ ಅಧಿಕಾರಿ ಭರತ್ ಎಂಟ್ರಿ ಕೊಟ್ಟ ಮೇಲೆ ಭ್ರಷ್ಟರು-ಮೈಗಳ್ಳರು-ಇಲಾಖೆ ಕೊಡುವ ಸಂಬಳಕ್ಕೆ ನೀಯತ್ತಿಲ್ಲದೆ ಅಕ್ರಮಗಳಲ್ಲಿ ಭಾಗಿಯಾದವರ ಎದೆಯಲ್ಲಿ ನಡುಕ ಸೃಷ್ಟಿಯಾಗಿದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಿರುವ ಖಡಕ್ ಐಎಎಸ್ ಅಧಿಕಾರಿ ರಶ್ಮಿ ಮಹೇಶ್ ಅವರ ಕಾರ್ಯನಿರ್ವಹಣೆಗೆ ವೇಗ ದೊರೆತಿದೆ.ಯಾವೊಬ್ಬ ಅಧಿಕಾರಿಯ ನಿರೀಕ್ಷೆಯಲ್ಲಿ ಅವರಿದ್ದರೋ ಅಂತದ್ದೇ ಅಧಿಕಾರಿಯ ಸ್ವರೂಪದಲ್ಲಿ ಭರತ್ ಸಿಕ್ಕಿದ್ದಾರೆ ಎಂದೇ ಶಿಕ್ಷಣ ಇಲಾಖೆ ವಲಯದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ. ಕಿರಿಯ ಐಎಎಸ್ … Read more

“ನ್ಯೂಸ್‌ ಫಸ್ಟ್‌” 5 ನೇ ಹುಟ್ಟುಹಬ್ಬದಂದೇ   ಮತ್ತೊಂದು “ಚಾನೆಲ್‌” ಘೋಷಣೆ..

ಸರಳ ಸಮಾರಂಭದಲ್ಲಿ ಸಿಬ್ಬಂದಿ ಮುಂದೆ ರವಿಕುಮಾರ್-ಮಾರುತಿ ಜೋಡಿಯಿಂದ ಮಹತ್ವದ ಘೋಷಣೆ.. ಕನ್ನಡದ ಜನಪ್ರಿಯ ನ್ಯೂಸ್‌ ಚಾನೆಲ್‌ ಗಳಲ್ಲಿ ಒಂದಾದ ನ್ಯೂಸ್‌ ಫಸ್ಟ್‌ ಮೊನ್ನೆ 5ನೇ ಹುಟ್ಟುಹಬ್ಬ ಆಚರಿಸಿಕೊಂಡಿದೆ. ಚಾನೆಲ್‌ ನಿರ್ವಹಣೆಯೇ ಕಷ್ಟಸಾಧ್ಯವಾಗಿರುವ ಪ್ರಸ್ತುತ ಸನ್ನಿವೇಶದಲ್ಲಿ ಒಂದು ಚಾನೆಲ್‌ 5 ವರ್ಷ ಪೂರೈಸುವುದು ಸಾಧನೆಯೇ ಸರಿ..ಈ ಹಿನ್ನಲೆಯಲ್ಲಿ ಕನ್ನಡ ಪತ್ರಿಕೋದ್ಯಮದ ಜೋಡೆತ್ತುಗಳಾದ ಮಾರುತಿ-ರವಿಕುಮಾರ್‌ ಬಳಗಕ್ಕೆ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಬಳಗದಿಂದ ಅಭಿನಂದನೆ ಹಾಗೂ ಶುಭಾಷಯ ( ನಮ್ಮ ಬರವಣಿಗೆಯ ನೈತಿಕತೆ ಮತ್ತು ವಿಶ್ವಾಸಾರ್ಹತೆ ಪ್ರಶ್ನಿಸಿ ಮಾತನಾಡುವವರಿಗೆ ನಮ್ಮದೊಂದು  ಸ್ಪಷ್ಟನೆ … Read more

ಹುಡುಕಿಕೊಡಿ.! ಪರಿಶಿಷ್ಟರ “ಅಭ್ಯುದಯ”ಕ್ಕೆ ನಿರ್ಮಿಸಬೇಕಿದ್ದ “ಸಮುದಾಯ ಭವನ”ವೇ ಮಿಸ್…!

ಬೆಂಗಳೂರು:ಇದು ನಿಜಕ್ಕೂ ಅನ್ಯಾಯದ ಹಾಗೂ ಅಮಾನವೀಯತೆಯ ಕೆಲಸವೇ ಸರಿ..ಯಾವ ಒಂದು ಯೋಜನೆ ನಿರ್ದಿಷ್ಟ ಸಮುದಾಯಕ್ಕೆ, ಅದರ ಬಳಕೆಗೆ , ಕಲ್ಯಾಣಕ್ಕೆ ಒದಗಿಬರ ಬೇಕಿತ್ತೋ… ಅದನ್ನೇ ಕಾಣೆಯಾಗುವಂತೆ ಮಾಡಲಾಗುತ್ತದೆ ಎಂದ್ರೆ ಅದು ಹಣದ ದುರುಪಯೋಗವಲ್ಲದೇ,ಯೋಜನೆಯೊಂದರ ಲಾಭ-ಪ್ರಯೋಜನದಿಂದ ಆ ಸಮುದಾಯವನ್ನು ವಂಚಿಸಿದಂತೆ ಅಲ್ಲವೇ..? ಅಂತದ್ದೊಂದು ಕೆಲಸ ಹಿಂದಿನ ಬಿಬಿಎಂಪಿ ಹಾಗೂ ಈಗಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳಿಂದ ನಡೆದಿದೆ..ಬೆಂಗಳೂರು ಪಶ್ಚಿಮ ಮಹಾನಗರ ಪಾಲಿಕೆಯ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡು ಇಡೀ ವ್ಯವಸ್ಥೆಯನ್ನು ಸರಿ ಮಾಡಲು ಹೊರಟಂತಿರುವ ಐಎಎಸ್ ಅಧಿಕಾರಿ ಕೆ.ವಿ ರಾಜೇಂದ್ರನ್ … Read more

ವಿದ್ಯಾ ಮಲ್ನಾಡ್‌ ಎನ್ನುವ “ಮಾನವಮುಖಿ-ಜೀವಪರ ಕಾಳಜಿ”ಯ “ಗ್ಯಾರಂಟಿ ” ಆಂಕರ್..  

ಡೋಂಟ್‌ ಮಿಸ್‌ ಇಟ್…‌ ಅರಚೋದು..ಅಬ್ಬರಿಸೋದು-ವಿಷಯವನ್ನು ವಿಕೃತಗೊಳಿಸುವುದೇ  ಆಂಕರಿಂಗ್ ಎನ್ನುವ ಲೆಕ್ಕಾಚಾರಕ್ಕೆ ಅಪವಾದದಂತಿದ್ದ  ವಿದ್ಯಾ ಮಲ್ನಾಡ್‌ ನಿರೂಪಣೆ.. ಬೆಂಗಳೂರು:ಇನ್ನೊಬ್ಬರ ಮನೆ-ಸಂಸಾರ, ವೈಯುಕ್ತಿಕ ವಿಷಯವನ್ನೇ ಟಿಆರ್‌ ಪಿ ಗೋಸ್ಕರ ಬಂಡವಾಳವಾ ಗಿಸಿಕೊಂಡು ಬೇಳೆ ಬೇಯಿಸಿಕೊಳ್ಳುವುದೇ ಬಹುತೇಕ  ಮಾದ್ಯಮಗಳ ಕಸುಬಾಗಿ ಹೋಗಿದೆ.ಇದು ಸಾರ್ವಜನಿಕ ವಲಯದಲ್ಲಿ ಮಾದ್ಯಮಗಳ ಬಗ್ಗೆ ಛೀ..ಥೂ ಎಂದು ಉಗಿಯುವ  ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿರುವುದು ದುರಂತ.( ನ್ಯೂಸ್‌ ಚಾನೆಲ್‌ ಗಳಲ್ಲಿ ಬಹುತೇಕ ಇಂಥದ್ದೇ ಮನೆಹಾಳು ಮಾಡುವ ಸುದ್ದಿಗಳೇ ಬರುತ್ತಿರುವುದರಿಂದ ಪಾಪ…ಇದನ್ನು ಬಿಟ್ಟು ಬೇರೆ ನೋಡಬೇಕಾದ ಪರ್ಯಾಯ ಆಯ್ಕೆಯೇ ವೀಕ್ಷಕರಿಗೆ ಸಿಗುತ್ತಿಲ್ಲ). … Read more

80 ಸಾವುಗಳಿಗೆ ಕಾರಣವೇ bMTC ಎಂಡಿ…!ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಖ್ಯಮಂತ್ರಿಗೆ ದೂರು..

ಬೆಂಗಳೂರು: ಬಹುಷಃ ಬೆಂಗಳೂರು ಮಹಾನಗರ ಸಾರಿಗೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಂತದ್ದೊಂದು ಘಟನೆ ನಡೆದಿದೆ ಎನ್ನಿಸುತ್ತದೆ.ಏಕೆಂದರೆ ನಿಗಮದ ವ್ಯಾಪ್ತಿಯಲ್ಲಿನ ಬೆಳವಣಿಗೆಗಳ ಇತಿಹಾಸದ ಬಗ್ಗೆ ನಮಗಿರುವ ಮಾಹಿತಿ ಪ್ರಕಾರ ಈವರೆಗೂ ನಿಗಮದ ವ್ಯವಸ್ಥಾಪಕ ನಿರ್ದೇಶಕರೆನಿಸಿಕೊಂಡ ಯಾರ ಬಗ್ಗೆಯೂ ಮುಖ್ಯಮಂತ್ರಿಗಳ ಮಟ್ಟದಲ್ಲಿ ದೂರು ನೀಡಿದ್ದ ನಿದರ್ಶನಗಳೇ ಇಲ್ಲ.ಆದರೆ ಇದೇ ಮೊದಲ ಬಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ವಿರುದ್ಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ ದೂರನ್ನು ಕೊಟ್ಟಿದೆ.ಅಷ್ಟೇ ಅಲ್ಲ. ಬಿಎಂಟಿಸಿ ಎಂಡಿ ವಿರುದ್ಧ ಕ್ರಮ … Read more

“ಸಾರಿಗೆ ಕೂಟ”ದ ಚಂದ್ರು ಅಕ್ಷರಶಃ ಒಂಟಿಯಾದ್ರಾ ..!ಜತೆಗಿದ್ದವರೆಲ್ಲಾ ದೂರ..ದೂರವಾದ್ರಾ..?

-ಬೆಲ್ಲಕ್ಕೆ ನೊಣಗಳಂತೆ ಚಂದ್ರುವನ್ನು ಮುತ್ತಿಕೊಳ್ಳುತ್ತಿದ್ದ ಆ ಸಾರಿಗೆ ಸಿಬ್ಬಂದಿ ಎಲ್ಲೋದರು.? -ಅತಿಯಾದ ಆತ್ಮವಿಶ್ವಾಸಕ್ಕೆ ಬೆಲೆ ತೆತ್ತರಾ ಚಂದ್ರು-ಕಚೇರಿ ಬಾಡಿಗೆ ಕಟ್ಟಲಿಕ್ಕೂ ಪರದಾಡುತ್ತಿದ್ದಾರಾ..? -ನಾಯಕತ್ವದ ಗುಣಗಳಿಗೆ ತಿಲಾಂಜಲಿ ಇಟ್ಟು,ಸಾಮೂಹಿಕ ನಾಯಕತ್ವ ಮರೆತು ಸರ್ವಾಧಿಕಾರಿಯಂತಾಗಿದ್ದಕ್ಕೆ ಆಪ್ತರೇ ಕೊಟ್ಟ ಶಿಕ್ಷೆನಾ ಇದು..?! ಇಂಥಾ ಸ್ಥಿತಿ ಯಾವೊಬ್ಬ ವ್ಯಕ್ತಿಗೂ ಬರಬಾರದು..ಅದರಲ್ಲೂ ಅತೀ ಕಡಿಮೆ ಅವಧಿಯಲ್ಲಿ ರಾತ್ರೋ ರಾತ್ರಿ ದೊಡ್ಡ ಲೀಡರ್‌ ಆಗಿ ಬೆಳೆದು ಹೆಸರು ಮಾಡಿ, ಶ್ರಮಿಕ ಸಮುದಾಯದ ಪ್ರೀತಿಗೆ ಪಾತ್ರವಾಗಿ, ತನ್ನ ಮಾತಿಗೆ ತಲೆ ಬಾಗುವ ಮಟ್ಟದಲ್ಲಿ ಅವರ ಮನಸಿನಲ್ಲಿ ಉಳಿದುಕೊಂಡಿದ್ದ … Read more

EXCLUSIVE… 8 ತಿಂಗಳಲ್ಲಿ BMTC ಡ್ರೈವರ್ಸ್-ಕಂಡಕ್ಟರ್ಸ್‌   ವಿರುದ್ಧ 11412  ದೂರು..!

ಪ್ರಯಾಣಿಕರ ಜತೆಗೆ  ಅಸಭ್ಯ-ದುರ್ವರ್ತನೆ.-ವೇಗ-ಅಜಾಗರೂಕತೆ ಚಾಲನೆ- ಹಣ ಪಡೆದು ಟಿಕೆಟ್‌ ನೀಡದೆ ವಂಚನೆ ಬಗ್ಗೆಯೇ  ವ್ಯಾಪಕ ದೂರುಗಳು..    ಇದು ಸ್ವತಃ ಸಚಿವ ರಾಮಲಿಂಗಾರೆಡ್ಡಿ ಅವರೇ ಶಾಕ್‌ ಆಗುವಂಥ ಅಘಾತಕಾರಿ ಸುದ್ದಿ.ಇಲಾಖೆ ಸುಧಾರಣೆ ಮಾಡೊಕ್ಕಿಂತ ಮುನ್ನ ನಿಜವಾಗಿ ಸುಧಾರಣೆ ಆಗಬೇಕಿರುವುದು ಏನು ಎನ್ನುವುದು ಈ ಸ್ಟೋರಿ ಓದಿದ ಮೇಲೆ ಗೊತ್ತಾಗಬಹುದೇನೋ..? ತಾನು ನಿರ್ವಹಿಸುತ್ತಿರುವ ಖಾತೆಗೆ ಇಂತದ್ದೊಂದು ಕಳಂಕ ತಟ್ಟಿದೆಯೆಲ್ಲಾ ಎಂದು ಅವರಿಗೇ ಬೇಸರವಾಗಬಹುದು..ನನಗೆ ಇಂಥಾ ಖಾತೆ ನಿಜಕ್ಕೂ ಬೇಕಾ ಎಂದು ಅವರು ಒಂದ್‌ ಕ್ಷಣ ಆಲೋಚಿಸಿದ್ರೂ ತಪ್ಪೇನಿಲ್ಲ..ಏಕೆಂದರೆ ಅಂತಹದೊಂದು … Read more