ರಾಜ್ ನ್ಯೂಸ್(RAJ NEWS KANNADA) ಕನ್ನಡಕ್ಕೆ ಹಿರಿಯ ಪತ್ರಕರ್ತ ಶ್ರೀಧರ್ ಸಾರಥಿ..

ಬೆಂಗಳೂರು:ಮಾದ್ಯಮ ಕ್ಷೇತ್ರದಲ್ಲಿ ಸಧ್ಯ ಚರ್ಚೆಯಲ್ಲಿರುವ ಅನೇಕ ವಿದ್ಯಾಮಾನಗಳಲ್ಲಿ ರಾಜ್ ಟಿವಿ ಪ್ರಮುಖವಾದುದು ರಾಜ್ ನ್ಯೂಸ್ ಕನ್ನಡದ್ದು.ಅನೇಕ ಕಾರಣಗಳಿಂದ ಹಿಂದಿದ್ದವರ ಕೈಲಿಂದ ಚಾನೆಲ್ ಮತ್ತೊಬ್ಬರ ಕೈ ಗೆ ಜಾರಿದೆ.ಅದರ ಸಾರಥಿ-ದಿಕ್ಸೂಚಿ ಎಲ್ಲವೂ ಕನ್ನಡದ ಹಿರಿಯ ಪತ್ರಕರ್ತ ಶ್ರೀಧರ್ ಎನ್ನಲಾಗ್ತಿದೆ. ತಮಿಳ್ನಾಡು ಮೂಲದ ರಾಜ್ ಟಿವಿ ಕರ್ನಾಟಕದಲ್ಲಿ ಚಾನೆಲ್ ಆರಂಭಿಸಿದಾಗಲೇ ಅದರ ಭವಿಷ್ಯ ನುಡಿಯಲಾಗಿತ್ತು.ಹಮೀದ್ ಪಾಳ್ಯ ಅವರಂಥವ್ರು ಚಾನೆಲ್ ಆರಂಭಿಸಿದರಾದ್ರೂ ಅದರ ಬಗ್ಗೆ ಅವರು ಗಮನ ಹರಿಸಿದ್ದು ಕಡಿಮೆ ಎನ್ನುವ ಮಾತುಗಳಿದ್ವು .ಹಾಗಾಗಿಯೇ ಕನ್ನಡದ ಚಾನೆಲ್ ಗಳಿಗೆ ಪೈಪೋಟಿ ನೀಡುವ … Read more

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಪಿಓಪಿ ಗಣಪತಿಗಳ ಮಾರಾಟ ರಾಜಧಾನಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವುದನ್ನು ಗಮನಿಸಿದಾಗ  ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಂದೆನ ಎನ್ನುವ ಗಾಧೆ ನೆನಪಾಗುತ್ತದೆ.

pU ಬೋರ್ಡ್‌ ನೂತನ ನಿರ್ದೇಶಕ ಭರತ್‌ ಎದುರು ದಂಡಿ ದಂಡಿ ಸವಾಲುಗಳು..!

ಹಾಳೆದ್ದು ಹೋಗಿರುವ ಪಿಯು ಬೋರ್ಡ್ ಗೆ  ಕಾಯಕಲ್ಪ-ಲಂಗುಲಗಾಮಿಲ್ಲದಂತಾಗಿರುವ ಇಲಾಖೆಯ ಕೆಲವು ಭ್ರಷ್ಟರ ಅಂದಾದರ್ಬಾರ್-ಅಟ್ಟಹಾಸಕ್ಕೆ  ಕಡಿವಾಣ ಹಾಕುವರಾ..? ಪಿಯು ಬೋರ್ಡ್‌ ಗೆ ನೂತನ ನಿರ್ದೇಶಕರಾಗಿ ಕಿರಿಯ ಐಎಎಸ್‌ ಅಧಿಕಾರಿ ಭರತ್‌ ನಿಯೋಜನೆಗೊಂಡಿದ್ದಾರೆ. ಅನೇಕ ಇಲಾಖೆಗಳಲ್ಲಿ ಆಯಕಟ್ಟಿನ ಹುದ್ದೆಯಲ್ಲಿ ಕೆಲಸ ಮಾಡಿರುವ ಯುವ ಹಾಗೂ ಉತ್ಸಾಹಿ ಐಎಎಸ್‌ ಅಧಿಕಾರಿ ಭರತ್‌ ಅವರನ್ನು ಕನ್ನಡ ಫ್ಲ್ಯಾಶ್‌ ನ್ಯೂಸ್‌ ಹೃತ್ಪೂರ್ವಕವಾಗಿ ಅಭಿನಂದಿಸಿ,ಸ್ವಾಗತಿಸುವುದಲ್ಲದೇ ಹೇಳೋರ್..ಕೇಳೋರ್‌ ಇಲ್ಲದೆ ತಬ್ಬಲಿಭಾವದಿಂದ ಬಳಲುತ್ತಿರುವ ಇಲಾಖೆಯ ಬಗ್ಗೆ ಕಾಳಜಿ ವಹಿಸಿ ಅಗಾಧ ಪ್ರಮಾಣದ ಸುಧಾರಣೆಗೆ ಶ್ರಮಿಸುವಂತೆ ಮನವಿ ಮಾಡುತ್ತದೆ. ಸರ್ಕಾರದಿಂದ … Read more

ಮಹಿಳಾ ಉದ್ಯೋಗಿಯ ಅಮ್ಮನನ್ನೇ ಬಲಿ ತೆಗೆದುಕೊಂಡುಬಿಡ್ತಾ ಆ ನ್ಯೂಸ್‌ ಚಾನೆಲ್..?!

*ನನ್ನ ಅಮ್ಮನೇ ಹೋದ್ಮೇಲೆ ನಿಮ್ಮ ಸ್ಯಾಲರಿ ತಗಂಡ್‌ ಏನ್‌ ಮಾಡೋಣ ಬಿಡಿ ಸಾರ್..‌* *ಅನ್ಯಾಯವಾಗಿ ನನ್ನ ಅಮ್ಮನನ್ನು  ಕೊಂದ್‌ ಬಿಟ್ರಲ್ಲಾ ಸಾರ್..!?* *ನ್ಯಾಯಯುತ ದ್ವನಿಯಲ್ಲಿ ಹಕ್ಕಿನ ವೇತನ ಕೇಳಿದ್ದಕ್ಕೆ ಗೇಟ್‌ ಪಾಸ್… ಸಂಬಳ ಕೊಡದೆ ಸತಾವಣೆ..* ಬೆಂಗಳೂರು: ಈ ಸುದ್ದಿ ನಿಜಕ್ಕೂ ಎಂಥಾ ಕಲ್ಲು ಮನಸನ್ನು ಕರೆಗಿಸುತ್ತದೆ…ಸುದ್ದಿ ಮನೆಗಳಲ್ಲಿ ಕೆಲಸ ಮಾಡುವವರನ್ನು ಇಷ್ಟೊಂದು ತಾತ್ಸಾರದಿಂದ ನಡೆಸಿಕೊಳ್ಳಲಾಗುತ್ತಾ..? ತಮಗೆ ಬರಬೇಕಿರೋ ಸಂಬಳಕ್ಕೆ ದ್ವನಿ ಎತ್ತಿದ್ರೆ ಸಂಸ್ಥೆಯಿಂದಲೇ ಗೇಟ್‌ ಪಾಸ್‌ ಕೊಡಲಾಗುತ್ತಾ..? ಕೊನೆಗೆ ಅವರ ಕುಟುಂಬದವರ ಸಾವಿಗೂ  ನೈತಿಕವಾಗಿ ಕಾರಣವಾಗುವಂತ … Read more

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…

ಸಾರಿಗೆ ಹೋರಾಟಗಳ ಇತಿಹಾಸದಲ್ಲಿ ಕರಾಳ ಅಧ್ಯಾಯ- ವೇತನ ಪರಿಷ್ಕರಣೆಯೂ ಇಲ್ಲ:ಬೇಡಿಕೆ ಡಿಕೆಗಳ ಈಡೇರಿಕೆನೂ ಇಲ್ಲ..ಪರಸ್ಪರರ ಮೇಲೆ ದೂರು-ಸಂಘಟನೆಗಳಲ್ಲಿನ ಒಡಕಿಗೆ ಸಿಎಂ ಅಚ್ಚರಿ..ಮಾತುಕತೆ ವೈಫಲ್ಯಕ್ಕೆ ಸಂಘಟನೆಗಳ ನಡುವಿನ ಬಿರುಕು-ಭಿನ್ನಾಭಿಪ್ರಾಯ-ಸಂಘರ್ಷವೇ ಕಾರಣವಾಗಿದ್ದು ದುರಂತ-ದೌರ್ಭಾಗ್ಯಪೂರ್ಣ. ಬೆಂಗಳೂರು: ಸಾರಿಗೆ ಮುಷ್ಕರ ನಡೆಯೋದಾಗ್ಲಿ, ನಡೆದರೂ ಹೆಚ್ಚಿನ ಸಂಖ್ಯೆಯ ಸಾರಿಗೆ ಸಿಬ್ಬಂದಿ ಅದರಲ್ಲಿ ಪಾಲ್ಗೊಳ್ಳುವುದಾಗಲಿ ಬಹುತೇಕ ಡೌಟ್‌ ಎನಿಸ್ತದೆ.ಮುರಿದುಬಿದ್ದ ಮಾತುಕತೆ, ಹೈಕೋರ್ಟ್ ನ ಕಟ್ಟಪ್ಪಣೆ ಕೂಡ ಇದಕ್ಕೆ ಪ್ರಮುಖ.ಅದೆಲ್ಲವನ್ನು ಮೀರಿ  ಮಾತುಕತೆಯ ವೈಫಲ್ಯಕ್ಕೆ ಕಾರಣವಾಯಿತೆನ್ನಲಾದ ಸಂಗತಿಗಳು  ಸಾರಿಗೆ ಹೋರಾಟದ ಇತಿಹಾಸದಲ್ಲಿ ಅತ್ಯಂತ ಕೆಟ್ಟದಾಗಿ ನೆನಪಿಸಿಕೊಳ್ಳಬೇಕಾದ ಕ್ಷಣಗಳಾಗಿ … Read more

ನಾಳೆ ಸಾರಿಗೆ ಮುಷ್ಕರ ಇಲ್ಲ, ಒಂದು ದಿನ ಮುಂದೂಡಿಕೆ :ಹೈಕೋರ್ಟ್ ಆದೇಶ

ಬೆಂಗಳೂರು:ನಾಳೆ ಮುಷ್ಕರ ನಡೆಸದಂತೆ ಹೈಕೋರ್ಟ್ ಆದೇಶಿಸಿದೆ. ಸಾರಿಗೆ ಮುಷ್ಕರ ಸಂಬಂಧ  ಇಂದು ನಡೆದ ವಿಚಾರಣೆ ವೇಳೆ  ಕೋರ್ಟ್ ಈ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಕೆ ಎಸ್ ಮುದಗಲ್ ಮತ್ತು ಎಂಜಿಎಸ್ ಕಮಲ್ ರ ದ್ವಿಸದಸ್ಯ ಪೀಠ ಈ ತೀರ್ಪು ನೀಡಿದೆ. ಅರ್ಜಿದಾರರ ಪರ ವಕೀಲೆ ದೀಕ್ಷಾ ಅಮೃತೇಶ್ ವಾದ  ಮಂಡಿಸಿದ್ರೆ.  ಸರ್ಕಾರದ ಪರ ನಿಲೋಫರ್ ಅಕ್ಬರ್ ವಾದ ಮಂಡಿಸಿದರು. ಕೊರೊನಾ‌ ಸಂಧರ್ಭದಲ್ಲಿ ಸರ್ಕಾರ ಹಲವು ಸಿಬ್ಬಂದಿಯನ್ನ ವಜಾಗೊಳಿಸಿದೆ..ಬಹುತೇಕರನ್ನ ಪುನಃ ಸೇವೆಗೆ ಮರು ನೇಮಕ ಮಾಡಿಲ್ಲ.. ಹೀಗಾಗಿ ಬಾಕಿ … Read more

ಶೇಕಡಾ 25 ಕೊಡ್ಲೇಬೇಕು…ಶೇಕಡಾ 8-10 ಕ್ಕೆ ನಾವ್ ರೆಡಿ…ಶೇಕಡಾ 12ಕ್ಕೆ ಫೈನಲ್ ಸಾಧ್ಯತೆಯಂತೆ..!?

ಬೆಂಗಳೂರು:ನಾಳೆಯಿಂದ ಸಾರಿಗೆ ಮುಷ್ಕರ ನಡೆಯುತ್ತಾ..? ಸಂಚಾರಿ ನಾಡಿ ಸಾರಿಗೆ ವ್ಯವಸ್ಥೆ ಸ್ಥಬ್ದವಾಗುತ್ತಾ..? 23 ಸಾವಿರ ಬಸ್ ಗಳು ರಸ್ತೆಗಿಳಿಯೊಲ್ವಾ..? 1.2 ಲಕ್ಷ ಸಿಬ್ಬಂದಿ ಕೆಲಸ ಮಾಡೊಲ್ವಾ… ಕೋಟ್ಯಾಂತರ ಗಳಿಕೆ ಖೋತವಾಗುತ್ತಾ..? ಇಷ್ಟೆಲ್ಲಾ ಪ್ರಶ್ನೆಗಳಿಗೆ ಇವತ್ತೆ ಸ್ಪಷ್ಟ ಚಿತ್ರಣ ದೊರೆಯಲಿದೆ.ಈ ನಡುವೆ ಶೇಕಡಾ 25 ರಷ್ಟು ವೇತನ ಪರಿಷ್ಕರಣೆ ಮಾಡಲೇಬೇಕೆನ್ನುವುದು ಸಾರಿಗೆ ಸಂಘಟನೆಗಳ ಬಿಗಿಪಟ್ಟಾಗಿದ್ರೆ ಶೇಕಡಾ 8 ರಿಂದ 10ಕ್ಕೆ ನಾವ್ ರೆಡಿ ಅನ್ತಿದೆಯಂತೆ ಸರ್ಕಾರ..ಇಂದು ಸಂಜೆ-ರಾತ್ರಿವರೆಗೆ ಜಗ್ಗಾಡಿ, ತೂಗಿ ಅಳೆದು ಶೇಕಡಾ 12-13 ಕ್ಕೆ ವೇತನ ಪರಿಷ್ಕರಣೆ … Read more

PG ಮಾಲೀಕನಿಂದಲೇ ಕಾಲೇಜ್ ಸ್ಟೂಡೆಂಟ್ ರೇ*ಪ್

ಬೆಂಗಳೂರು:ಓದಿಕೊಳ್ಳಲಿಕ್ಕೆಂದು ದೂರ ದೂರಿಂದ ಬೆಂಗಳೂರಿಗೆ ಬಂದು ಪಿಜಿ-ಹಾಸ್ಟೆಲ್ ಗಳಲ್ಲಿ ಉಳಿದುಕೊಳ್ಳುವ ವಿದ್ಯಾರ್ಥಿನಿಯರಿಗೆ ಪಿಜಿ-ಹಾಸ್ಟೆಲ್ ಗಳು ಸೇಫಲ್ವಾ..? ಇಂತದ್ದೊಂದು ಅನುಮಾನ ಕಾಡ್ಲಿಕ್ಕೆ ಕಾರಣವಾಗಿರೋದು ರಾಜಧಾನಿ ಹೊರವಲಯದಲ್ಲಿ ನಡೆದಿರುವ ಕಾಲೇಜ್ ಸ್ಟೂಡೆಂಟ್ ಒಬ್ಬಳ ರೇ *ಪ್.. ತನ್ನ ಪಿಜಿಯಲ್ಲಿ ಉಳಿದುಕೊಂಡಿದ್ದ ವಿದ್ಯಾರ್ಥಿನಿ ಮೇಲೆ ಕಣ್ಣಾಕಿದ್ದ ಕಾಮಾಂಧ ಆಕೆಯನ್ನು ಪುಸಲಾಯಿಸಿ,ಒಪ್ಪದಿದ್ದಕ್ಕೆ ಕಿಡ್ನ್ಯಾಪ್ ರೀತಿ ಎತ್ತಾಕಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಅಂದ್ಹಾಗೆ ಈ ಘಟನೆ ನಡೆದಿರುವುದು ಸೋಲದೆವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಹೆಸರಘಟ್ಟ ಮುಖ್ಯ ರಸ್ತೆಯಲ್ಲಿರುವ ಪ್ರತಿಷಿತ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಕಾಲೇಜ್ … Read more

IAS‌ ಸಿಂಧೂ ಬಿ ರೂಪೇಶ್ ಎತ್ತಂಗಡಿ..!-ಕೇಂದ್ರ ಸೇವೆಗೆ ನಿಯೋಜನೆ…!

ಬೆಂಗಳೂರು: ಪಿಯು ಬೋರ್ಡ್ ನ ನಿರ್ದೇಶಕರಾಗಿದ್ದ ಮಹಿಳಾ ಐಎಎಸ್‌ ಅಧಿಕಾರಿ ಸಿಂಧೂ ಬಿ ರೂಪೇಶ್‌ ಅವರನ್ನು ದಿಢೀರ್‌ ವರ್ಗ ಮಾಡಲಾಗಿದೆ.ಇಲಾಖೆ ಯಲ್ಲಿ ಸಾಕಷ್ಟು ಉತ್ತಮ ಕೆಲಸ ಮಾಡುವ ಅವಕಾಶವಿದ್ದಾಗ್ಯೂ ನಿಷ್ಕ್ರೀಯವಾಗಿದ್ದರೆನ್ನುವ ಆಪಾದನೆ ಹೊತ್ತಿದ್ದ ಐಎಎಸ್ ಅಧಿಕಾರಿ ಸಿಂದೂ ಬಿ ರೂಪೇಶ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ ಎನ್ನುವ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ.ಸಿಂಧೂ ಅವರನ್ನು ಕೇಂದ್ರ ಸೇವೆಗೆ ನಿಯೋಜನೆ ಮಾಡಲಾಗಿದೆ ಎನ್ನಲಾಗ್ತಿದೆ.ಅಲ್ಲಿ ಅವರು 5 ವರ್ಷಗಳ ಕಾಲ ಕೆಲಸ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. … Read more

“ಅವರಿಬ್ಬರು” ಒಂದಾದ್ರೆ ಆಗಸ್ಟ್ 5 ರ ಸಾರಿಗೆ ಮುಷ್ಕರ “ಯಶಸ್ವಿ”ನಾ.?!

***ಆ “ಸುನಾಮಿ- ಸುಂಟರಗಾಳಿ” ಒಂದಾದ್ರೆ ಆಗಸ್ಟ್ 5 ರ ಸಾರಿಗೆ ಮುಷ್ಕರ ಸಕ್ಸೆಸ್   ಪಕ್ಕಾ  ಅಂತೆ..!?*** ***ಮುನಿಸು ಮರೆತು, ಸ್ವಪ್ರತಿಷ್ಟೆ ಬದಿಗಿಟ್ಟು ಅನಂತ ಸುಬ್ಬರಾವ್- ಚಂದ್ರಶೇಖರ್ ಒಂದಾದ್ರೆ ಗೆಲುವು ಗ್ಯಾರಂಟಿ ಅಂತೆ..!***  ***ಮುಷ್ಕರದ  ಯಶಸ್ಸು-ವೈಫಲ್ಯ ಅವಲಂಭಿಸಿರೋದೇ ಸಾರಿಗೆ “ಕೂಟ-ಜಂಟಿಕ್ರಿಯಾಸಮಿತಿ” ಮೇಲೆ ಒಂದಾದ್ರಂತೆ..!***   ಬೆಂಗಳೂರು:ತಮ್ಮ ನ್ಯಾಯಯುತ ಬೇಡಿಕೆ ಹಾಗೂ ಹಕ್ಕೊತ್ತಾಯಕ್ಕಾಗಿ ಆಗಸ್ಟ್ 5 ರಿಂದ ರಾಜ್ಯಾದ್ಯಂತ ಸಾರಿಗೆ ವ್ಯವಸ್ಥೆಯನ್ನು ಅನಿವಾರ್ಯವಾಗಿ ಬಾಧಿತಗೊಳಿ ಸುವಂತ ನಿರ್ದಾರಕ್ಕೆ ಬಂದಿದ್ದಾರೆ ಸಾರಿಗೆ ಸಿಬ್ಬಂದಿ.ಇದರ ಝಲಕ್ ಎನ್ನುವಂತೆ ನಿನ್ನೆ ಅಂದರೆ ಬುಧವಾರ( 30-07-2025) … Read more