“ಅವಮಾನ”ದಿಂದಲೇ “ರಿಪಬ್ಲಿಕ್ ಕನ್ನಡ”ದಿಂದ ಸ್ಟಾರ್ ಆಂಕರ್ ಜಯಪ್ರಕಾಶ್ ಶೆಟ್ಟಿ ಹೊರನಡೆದ್ರಾ.?!

ಹಿರಿಯ ಹಾಗು ಅನುಭವಿ ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ಅವರನ್ನು ಇಷ್ಟೊಂದು ನಿಕೃಷ್ಟವಾಗಿ ನಡೆಸಿಕೊಂಡಿದ್ದು ಎಷ್ಟು ಸರಿ.?! ಓದುವ ಮುನ್ನ ಸ್ಷಪ್ಟನೆಗಾಗಿ : ಸುದ್ದಿಮನೆಯಲ್ಲಿ ನಡೆಯುವ ಘಟನೆಗಳ ಬಗ್ಗೆ ಇಲ್ಲದ ತಗಾದೆ ನಿಮಗೇಕೆ…ಹಾಗೆಯೇ ರಿಪಬ್ಲಿಕ್ ಕನ್ನಡದಲ್ಲಿ ನಡೆದಿದೆ ಎನ್ನಲಾದ ಈ ಘಟನೆಗೆ ಅಂತದ್ದ್ಯಾವ ಮಹತ್ವ ಕೊಡಬೇಕಿದೆ ಎಂದು ಅನೇಕರು ಪ್ರಶ್ನೆ ಮಾಡಬಹುದು.ಮುಖ್ಯವಾಗಿ ರಿಪಬ್ಲಿಕ್ ಕನ್ನಡದ ಮ್ಯಾನೇಜ್ಮೆಂಟ್ ಇದರ ಬಗ್ಗೆ ಆಕ್ಷೇಪ ಎತ್ತಬಹುದು.ಆದರೆ ಮಾದ್ಯಮ ಕ್ಷೇತ್ರದಲ್ಲಿ ಏನೇ ವ್ಯತ್ಯಾಸವಾದ್ರೂ ಯಾರಿಗೇನೇ ಅನ್ಯಾಯವಾದ್ರೂ ಅದನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಪ್ರಕಟಿಸುವುದಲ್ಲದೇ ಅದನ್ನು … Read more

ಬೆಂಗಳೂರು ವೀಡಿಯೋ ಜರ್ನಲಿಸ್ಟ್ ಗಳ ಫೋಟೋಗ್ರಫಿ ಜಾಕೆಟ್ ಅನಾವರಣ..

ಬೆಂಗಳೂರು: ಎಲ್ಲಾ ಹವಾಮಾನಗಳಲ್ಲೂ ಕ್ರಿಯಾಶೀಲವಾಗಿ ಕೆಲಸ ಮಾಡುವ ನಮ್ಮ ವೀಡಿಯೋ ಜರ್ನಲಿಸ್ಟ್ ( ಮುಂಚೆಯೆಲ್ಲಾ ಕ್ಯಾಮೆರಾಮನ್ ಗಳನ್ನು ಈ ರೀತಿ ಗೌರವಯುತವಾಗಿ ಕರೆಯುತ್ತಿರಲಿಲ್ಲ) ಗಳಿಗೆ ರಿಪೋರ್ಟರ್ ಗಳ ಹೋಲಿಕೆಯಲ್ಲಿ ಸೌಲಭ್ಯ-ಸವಲತ್ತು-ಸಹಕಾರ-ನೆರವು ಸಿಗೋದು ತೀರಾ ಕಡಿಮೆ.ಆದರೂ ಈ ಬೇಸರ-ಅಸಮಾಧಾನ-ನೋವನ್ನೆಲ್ಲಾ ಮರೆತು ಸಂಸ್ಥೆ ವಹಿಸಿದ ಕೆಲಸ ಹಾಗೂ ಫೀಲ್ಡ್ ನಲ್ಲಿ ರಿಪೋರ್ಟರ್ ಹೇಳಿದ ಅಸೈನ್ಮೆಂಟನ್ನು ಶೂಟ್ ಮಾಡಿಕೊಡುವ ಕೆಲಸ ಮಾಡುತ್ತಾ ಬಂದಿದ್ದಾರೆ.ರಿಪೋರ್ಟರ್ ಗಳಂತೆ ತಮಗೂ ಎಲ್ಲಾ ರೀತಿಯ ಸ್ಥಾನಮಾನ ಸಿಗಬೇಕೆನ್ನುವ ಮಹದಾಸೆ ಕ್ಯಾಮೆರಾಮನ್ ಗಳಿಗೆ ಇದ್ದರೂ ಅನೇಕ ಕಾರಣಗಳಿಂದ ಅದು … Read more

“ರಿಪಬ್ಲಿಕ್ ಕನ್ನಡ”ದ ಮುಖ್ಯಸ್ಥರ ಹುದ್ದೆಯನ್ನು  ಅಜಿತ್ ಹನುಮಕ್ಕನವರ್  ನಿರಾಕರಿಸಿದ್ದೇಕೆ..? “ಸುವರ್ಣ”ದಲ್ಲಿಯೇ “ಶೋಭಾ” ಉಳಿಯಲಿಲ್ಲ ಏಕೆ.?!

ರಿಪಬ್ಲಿಕ್ ಕನ್ನಡದ ಪ್ರಸ್ತಾವನೆಗೆ ಮೊದಲೆಲ್ಲಾ ಒಪ್ಪಿಗೆ ಸೂಚಿಸಿದ್ದ ಅಜಿತ್ ಕೊನೇ ಕ್ಷಣದಲ್ಲಿ ಉಲ್ಟಾ ಹೊಡೆದಿದ್ದೇಕೆ..?ಅಜಿತ್ ನಿರ್ಗಮನದಿಂದ ಮುನ್ನಲೆಗೆ ಬಂದಿದ್ದ ಶೋಭಾ ಹೆಸರನ್ನು ಸುವರ್ಣ ಮ್ಯಾನೇಜ್ಮೆಂಟ್ ಪರಿಗಣಿಸಲಿಲ್ಲವೇಕೆ..?.. ಬೆಂಗಳೂರು: ವಿಷಯದ ಬಗ್ಗೆ ವಿವರಣೆ ಕೊಡುವ ಮುನ್ನ ಎರಡು ಪ್ರಮುಖ ವಿಷಯಗಳನ್ನು ಮೊದಲೇ ಹೇಳಿ ಅವರನ್ನು ಅಭಿನಂದಿಸುತ್ತದೆ ಕನ್ನಡ ಫ್ಲ್ಯಾಶ್ ನ್ಯೂಸ್. ರಿಪಬ್ಲಿಕ್ ಕನ್ನಡ ನ್ಯೂಸ್ ಚಾನೆಲ್ ನ ಮುಖ್ಯಸ್ಥೆಯಾಗಿ ಹಿರಿಯ ಪತ್ರಕರ್ತೆ ಶೋಭಾ ಮಳವಳ್ಳಿ ನೇಮಕಗೊಂಡಿದ್ದಾರೆ.ಇನ್ನೊಂದೆಡೆ ಕನ್ನಡದ ಅತ್ಯಂತ ವಿಶ್ವಾಸಾರ್ಹ ದಿನಪತ್ರಿಕೆ ಪ್ರಜಾವಾಣಿಯ ಅಂಗಪತ್ರಿಕೆ ಸುಧಾ ವಾರಪತ್ರಿಕೆಯ ಮುಖ್ಯಸ್ಥರಾಗಿ … Read more

ground report.ಮತ್ತೆ ನೆನಪಾದ ಪುಲ್ವಾಮ: ಮಡುಗಟ್ಟಿದ್ದ ಆಕ್ರೋಶ ಅದುಮಿಟ್ಟು ಕೊಂಡೇ “ಪುಲ್ವಾಮ”ದಲ್ಲಿ ವರದಿ ಮಾಡಿದ್ದ ಕನ್ನಡದ ಏಕೈಕ ರಿಪೋರ್ಟರ್.

ಕಾಶ್ಮೀರ:ಪೆಹಲ್ಗಾಮ್(pehalgam) ನಲ್ಲಿ ಪಾಕಿ ಉಗ್ರರು(pakistan terrorist) ನಡೆಸಿದ ನರಮೇಧಕ್ಕೆ ಪ್ರತಿಕಾರವಾಗಿ ಆಪರೇಷನ್ ಸಿಂಧೂರ (operation sindhoora) ಕಾರ್ಯಾಚರಣೆ ಪಾಕಿಸ್ತಾನದ  ಅಸಲಿಯತ್ತನ್ನು ಬಟಾಬಯಲು ಮಾಡಿದೆ.ಯುದ್ಧ ತಯಾರಿಯ ಝಲಕ್ ಕೊಟ್ಟು, ಅದೇ ಮಂಪರಿನಲ್ಲಿ ನಿದ್ರೆಗೆ ಜಾರಿದ್ದ ಪಾಕಿಸ್ತಾನವನ್ನು ಅವರ ನೆಲಕ್ಕೆ ನುಗ್ಗಿ ಉಗ್ರರನ್ನು ಹೊಡೆದುರುಳಿಸಿದ ಸೈನಿಕರ ವಿರಾವೇಶ ಅವಿಸ್ಮರಣೀಯ ದಾಖಲಾರ್ಹ ಸನ್ನಿವೇಶವಾಗಿ ಇತಿಹಾಸದ ಪುಟ ಸೇರಿದೆ.ಕಾರ್ಯಾಚರಣೆ ಮುಗಿಸುವ ಸೂಚನೆ ನೀಡದಿರುವ ಭಾರತದ ವೀರಾವೇಶ ಗಮನಿಸಿದ್ರೆ ಪಾಕಿಸ್ತಾನವನ್ನು ನಾಮಾವಶೇಷಗೊಳಿಸುವ ಸಾಧ್ಯತೆಗಳು ದಟ್ಟವಾಗುತ್ತಿವೆ.ಕಾರ್ಯಾಚರಣೆಯಲ್ಲಿ ಸಂಭವಿಸಿರಬಹುದಾದ ನಿಷ್ಪಾಪಿ-ಅಮಾಯಕ ನಾಗರಿಕರ ಸಾವುನೋವುಗಳಿಗೆ ವಿಷಾದ-ಸಂತಾಪ ಸೂಚಿಸಿರುವ ಭಾರತ, … Read more

“ಯುದ್ಧಭೂಮಿ”ಯಲ್ಲಿ ಪ್ರಾಣದ ಹಂಗು ತೊರೆದ “ಮಾದ್ಯಮಯೋಧರು”

ಸಾವನ್ನು ಬೆನ್ನಿಗೆ ಕಟ್ಟಿಕೊಂಡು ವೃತ್ತಿ ನಿಷ್ಟೆಯಿಂದ ಸುದ್ದಿಮಾಡುತ್ತಿರುವ ಮಾದ್ಯಮಯೋಧರು ನಮ್ಮ ಹೆಮ್ಮೆ- ಪತ್ರಿಕಾಯೋಧರಿಗೆ ಹ್ಯಾಟ್ಸಾಫ್.. ಬೆಂಗಳೂರು-ಕಾಶ್ಮೀರ: ಸಧ್ಯ ದೇಶದಲ್ಲೆಲ್ಲಾ ಯುದ್ಧ(war)ದ್ದೇ ಮಾತು.ಸಾಂಪ್ರದಾಯಿಕ ಶತೃರಾಷ್ಟ್ರ ಪಾಕಿಸ್ತಾನ(pakistan)ವನ್ನು ಅದರ ನೆಲದಲ್ಲೇ ನುಗ್ಗಿ ಬಗ್ಗು ಬಡಿಯುತ್ತಿರುವ,ಅದರ ನಡ ಮುರಿ ಯುತ್ತಿರುವ ಭಾರತ(india)ದ ಹೆಮ್ಮೆಯ ಸೇನೆ(armed forces)ಯದ್ದೇ ಸುದ್ದಿ. ಪೆಹಲ್ಗಾಮ್‌ ನ ಭಯೋತ್ಪಾದಕ(terrorist) ದಾಳಿಗೆ ಪ್ರತೀಕಾರವಾಗಿ ಭಾರತ ,ಪಾಕಿಸ್ತಾನವನ್ನು ಆಪರೇಷನ್ ಸಿಂಧೂರ (operation sindhoora) ಹೆಸರಲ್ಲಿ ಸರ್ವನಾಶ ಮಾಡುತ್ತಿರುವಂತದ್ದು ಪ್ರತಿಯೊಬ್ಬ ಭಾರತೀಯ ಹೆಮ್ಮೆ-ಆತ್ಮಾಭಿಮಾನದಿಂದ ಬೀಗಬೇಕಿರುವ ಸಂಗತಿ. ಪಾಪಿ…ಪಾಕಿಸ್ತಾನವನ್ನು ಮಣ್ಣುಮುಕ್ಕಿಸುತ್ತಿರುವ ಈ ಬೆಳವಣಿಗೆಗಳ ಪ್ರತಿಯೊಂದು … Read more

BBMP ಶಾಲೆ ವಿದ್ಯಾರ್ಥಿನಿಯ ಹೆಮ್ಮೆಯ ಸಾಧನೆಯಿಂದ ವಿದ್ಯಾಇಲಾಖೆ ಕಲಿಯಬೇಕಾದ ಪಾಠ..?!

ಬೆಂಗಳೂರು: ಈ ವಿದ್ಯಾರ್ಥಿನಿಯ ಸಾಧನೆಯ ಕ್ರೆಡಿಟ್ ನ್ನು ಬಿಬಿಎಂಪಿ ವಿದ್ಯಾ ಇಲಾಖೆ ತೆಗೆದುಕೊಳ್ಳುವ ಮುನ್ನ ಒಂದು ಮಾತು..ಗೆದ್ದರೆ ಆಡಲು ಬಂದಿದ್ದೆ..ಸೋತರೆ ನೋಡಲಿಕ್ಕೆ ಬಂದಿದ್ದೇ ಎನ್ನುವ ಆಪಾದನೆ ಬಿಬಿಎಂಪಿ ವಿದ್ಯಾಇಲಾಖೆಯಲ್ಲಿರುವ ಕೆಲವರ ಮೇಲಿದೆ.ಈ ಆಪಾದನೆ ಹೊರತಾಗಿಯೂ ಬಿಬಿಎಂಪಿ ಶಾಲೆಗಳೆಂದ್ರೆ ಮೂಗು ಮುರಿಯುವ ಸನ್ನಿವೇಶ ದಲ್ಲಿಯೇ ಇಲ್ಲೋರ್ವ ವಿದ್ಯಾರ್ಥಿನಿ ಎಲ್ಲರ ಹುಬ್ಬೇರಿಸುವಂತ ಸಾಧನೆ ಮಾಡಿ ಪರಿಶ್ರಮ ಹಾಕಿದರೆ ಪ್ರತಿಫಲ ಕಟ್ಟಿಟ್ಟಬುತ್ತಿ..ಯಾವುದೂ ಅಸಾಧ್ಯವಲ್ಲ ಎನ್ನುವುದನ್ನು ಪ್ರೂವ್ ಮಾಡಿದ್ದಾಳೆ. ಆ ವಿದ್ಯಾರ್ಥಿನಿ ಸಾಧನೆಯಿಂದ ಇಡಿ ಬಿಬಿಎಂಪಿ ಆಡಳಿತ ಬೆನ್ನುತಟ್ಟಿಕೊಳ್ಳುವಂತಾಗಿದೆ. ಹೌದು..ಇವತ್ತು ಬಿಬಿಎಂಪಿ ಶಾಲಾ … Read more

ಭಾರತೀಯ ಬಾಹ್ಯಾಕಾಶದ ಮೇರುವ್ಯಕ್ತಿತ್ವಕ್ಕೆ ಕಾಂಗ್ರೆಸ್ ಸರ್ಕಾರದಿಂದ ಅವಮಾನ-ಅಗೌರವ ..!

ಮನಮೋಹನ್ ಸಿಂಗ್ ದೇಶದ ಪ್ರಧಾನಿಯಾಗಿದ್ದಾಗ ಯಾವ ಮಹಾನ್ ವ್ಯಕ್ತಿತ್ವ-ಮೇರು ಪ್ರತಿಭೆಯನ್ನು ಗುರುತಿಸಿ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ರೋ ಅಂಥವರನ್ನು ಬದುಕಿದ್ದಾಗ ಲಂತೂ ಅಲ್ಲ, ಅಟ್ಲೀಸ್ಟ್ ಸತ್ತ ಮೇಲಾದ್ರೂ ಗೌರವಯುತವಾಗಿ ನಡೆಸಿಕೊಳ್ಳಬೇಕಿತ್ತು. ಕನಿಷ್ಟ ಸೌಜನ್ಯಕ್ಕಾದ್ರೂ ಸರ್ಕಾರದಿಂದ ಸೂಕ್ತ ಗೌರವ-ವಿದಾಯ ಸಲ್ಲಿಸಬಹುದಿತ್ತೇನೋ..? ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಬೇರೆಯದೇ ರಾಜಕೀಯ ವಿಚಾರಗಳಲ್ಲಿ ಮುಳುಗೋಗಿಬಿಟ್ಟಿತ್ತು..ಇದು, ಇಸ್ರೋದ ದೀರ್ಘಕಾಲದ ಅಧ್ಯಕ್ಷರು,ಬಾಹ್ಯಾಕಾಶ ಕ್ಷೇತ್ರದ ಇತಿಹಾಸದಲ್ಲಿ ಭಾರತದ ಹೆಮ್ಮೆಯ ಸಾಕ್ಷಿಪ್ರಜ್ನೆ, ಹಲವು ಪ್ರಥಮಗಳ ರೂವಾರಿ… ಗರಿಷ್ಠ ಸಾಧನೆಗಳ ಪ್ರವರ್ತಕ ಡಾ.ಕಸ್ತೂರಿ ರಂಗನ್ ಅವರ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ … Read more

bBMP ಅಂಗಳದಲ್ಲಿ 24 ಕೋಟಿ ಹಗರಣದ ಸದ್ದು-ಅಕ್ರಮ ಸಾಬೀತಾದ್ರೆ ಜೈಲ್  ಫಿಕ್ಸ್..!

ಕೆಲಸ ಮಾಡದೆಯೇ 25 ಕೋಟಿ ಬಿಲ್ ಮಂಜೂರು: ದಾಸರಹಳ್ಳಿ ವಲಯ ಕಾರ್ಯಪಾಲಕ ಅಭಿಯಂತರ( EXECUTIVE ENGINEER) ಯದುಕೃಷ್ಣ,ಗುತ್ತಿಗೆದಾರರಾದ ( CONTRACTORS) ಅಭಿಜಿತ್, ತೇಜೇಗೌಡ ಮತ್ತು ನಾರಾಯಣ ಗೌಡ ಸಂಕಷ್ಟ..! ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಂಗಳದಲ್ಲಿ ಮತ್ತೊಂದು ಬೃಹತ್ ಹಗರಣ ಸುದ್ದಿ ಮಾಡಿದೆ.ಬಿಬಿಎಂಪಿ ದಾಸರಹಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ 25 ಕೋಟಿ ಮೊತ್ತದ  ಬೃಹತ್ ಹಗರಣದ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. ಕೆಲಸವನ್ನೇ ಮಾಡದೆ ಗುತ್ತಿಗೆದಾರರಿಗೆ ಬಿಲ್ ಪಾವತಿಸಿದ್ದ ಆಪಾದನೆ ದಾಸರಹಳ್ಳಿ ವಲಯದ ಎಕ್ಸಿಕ್ಯೂಟಿವ್ ಎಂಜಿನಿಯರ್ ಯದುಕೃಷ್ಣ … Read more

EXCLUSIVE:ಹೊಸ ರೂಪ-ವಿನ್ಯಾಸ ದ ಏಷ್ಯಾನೆಟ್‌ “ಸುವರ್ಣ”ಕ್ಕೆ ಇವರೇ ಆ ನೂತನ “ಸಾರ‍ಥಿ”..!

ಕರ್ನಾಟಕದ ನಂಬರ್‌ 1 ಚಾನೆಲ್‌ ತೊರೆದು ಶೀಘ್ರವೇ ಸುವರ್ಣ ಬಳಗ ಸೇರಲಿರುವ ಸಭ್ಯ-ಸಂಭಾವಿತ ಪತ್ರಕರ್ತ..   ಬೆಂಗಳೂರು: ಸುವರ್ಣ ಸುದ್ದಿವಾಹಿನಿ(suvarna news channel) ಬದಲಾಗುತ್ತಿದೆ..ತನ್ನ ಹಳೆಯ ಸ್ವರೂಪ ಮತ್ತು ವಿನ್ಯಾಸವನ್ನು ರೂಪಾಂತರಿಸಿಕೊಳ್ಳುತ್ತಿದೆ ಎನ್ನುವ ಮಾತು ಬಲವಾಗಿ ಕೇಳಿಬಂದಿದೆ. ಹಾಗೆಯೇ ಆಗಿದ್ದರೆ  ನಿಜಕ್ಕೂ ಸಂತೋಷದ ಬೆಳವಣಿಗೆ.( ಆದರೆ ಕರ್ನಾಟಕದಲ್ಲಿ ಏಷಿಯಾ ನೆಟ್  ಸುವರ್ಣ ಮಾಡಿದಷ್ಟು ಬದಲಾವಣೆಗಳನ್ನು ಇನ್ನೊಂದು ನ್ಯೂಸ್ ಚಾನೆಲ್ ಮಾಡಲಿರಲಿಕ್ಕಿಲ್ಲ.. ಆದರೆ ಆ ಪ್ರಯತ್ನಗಳು ನಿರೀಕ್ಷೆ ತಲುಪದೇ ಹೋದದ್ದು ಮಾತ್ರ ದುರಾದೃಷ್ಟಕರ).ಈ ಎಲ್ಲಾ ಬದಲಾವಣೆ ಬಳಿಕವೂ ಸುವರ್ಣ … Read more

ಸುವರ್ಣ ನ್ಯೂಸ್ ನಲ್ಲಿ ಬದಲಾವಣೆ ಪರ್ವ.?! ಬದಲಾಗುತ್ತಾ ಚಾನೆಲ್ ಹೆಸರು..! ಮೈಗಳ್ಳರಿಗೆಲ್ಲಾ ಗೇಟ್ ಪಾಸ್..!?

ವಿಶೇಷ ಸೂಚನೆ: ಸುವರ್ಣ ನ್ಯೂಸ್ ಚಾನೆಲ್ ನಲ್ಲಿ ಭಾರೀ ಬದಲಾವಣೆ..! ನಿರೀಕ್ಷಿಸಿ ಎಂದು ಬರೆದಾಗಲೇ ನೂರಾರು ಕರೆಗಳು ಕನ್ನಡ ಫ್ಲ್ಯಾಶ್ ನ್ಯೂಸ್ ಕಚೇರಿಗೆ ಬಂದವು.ಕೆಲವು ಮಾದ್ಯಮ ಮಿತ್ರರದ್ದಾದ್ರೆ, ಇನ್ನು ಕೆಲವರು ಅಜಿತ್ ಹನುಮಕ್ಕನವರ್ ಅಭಿಮಾನಿಗಳದ್ದು…ಆಶ್ಚರ್ಯ ಎಂದರೆ ಕರೆ ಮಾಡಿ ವಿಚಾರಿಸಿದವರಲ್ಲಿ ಅತಿ ಹೆಚ್ಚಿನವರು ಸುವರ್ಣ ನ್ಯೂಸ್ ಚಾನೆಲ್ ಸಿಬ್ಬಂದಿ.ಅವರ ಯಾರ ಹೆಸರನ್ನು ಇಲ್ಲಿ ಉಲ್ಲೇಖಿಸುವ ಕೆಲಸಕ್ಕೆ ನಾವು ಹೋಗದೆ, ನಮಗೆ ಲಭ್ಯವಿರುವ ಒಂದಷ್ಟು ಮಾಹಿತಿಗಳನ್ನಾಧರಿಸಿ ವರದಿ ಮಾಡಿರು ತ್ತೇವೆ.ಈ ಸುದ್ದಿಯ ಉದ್ದೇಶ ಸುವರ್ಣ ನ್ಯೂಸ್  ಉದ್ಯೋಗಿಗಳಲ್ಲಿ ಅಭದ್ರತೆಯ … Read more