” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಪಿಓಪಿ ಗಣಪತಿಗಳ ಮಾರಾಟ ರಾಜಧಾನಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವುದನ್ನು ಗಮನಿಸಿದಾಗ  ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಂದೆನ ಎನ್ನುವ ಗಾಧೆ ನೆನಪಾಗುತ್ತದೆ.

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…

ಸಾರಿಗೆ ಹೋರಾಟಗಳ ಇತಿಹಾಸದಲ್ಲಿ ಕರಾಳ ಅಧ್ಯಾಯ- ವೇತನ ಪರಿಷ್ಕರಣೆಯೂ ಇಲ್ಲ:ಬೇಡಿಕೆ ಡಿಕೆಗಳ ಈಡೇರಿಕೆನೂ ಇಲ್ಲ..ಪರಸ್ಪರರ ಮೇಲೆ ದೂರು-ಸಂಘಟನೆಗಳಲ್ಲಿನ ಒಡಕಿಗೆ ಸಿಎಂ ಅಚ್ಚರಿ..ಮಾತುಕತೆ ವೈಫಲ್ಯಕ್ಕೆ ಸಂಘಟನೆಗಳ ನಡುವಿನ ಬಿರುಕು-ಭಿನ್ನಾಭಿಪ್ರಾಯ-ಸಂಘರ್ಷವೇ ಕಾರಣವಾಗಿದ್ದು ದುರಂತ-ದೌರ್ಭಾಗ್ಯಪೂರ್ಣ. ಬೆಂಗಳೂರು: ಸಾರಿಗೆ ಮುಷ್ಕರ ನಡೆಯೋದಾಗ್ಲಿ, ನಡೆದರೂ ಹೆಚ್ಚಿನ ಸಂಖ್ಯೆಯ ಸಾರಿಗೆ ಸಿಬ್ಬಂದಿ ಅದರಲ್ಲಿ ಪಾಲ್ಗೊಳ್ಳುವುದಾಗಲಿ ಬಹುತೇಕ ಡೌಟ್‌ ಎನಿಸ್ತದೆ.ಮುರಿದುಬಿದ್ದ ಮಾತುಕತೆ, ಹೈಕೋರ್ಟ್ ನ ಕಟ್ಟಪ್ಪಣೆ ಕೂಡ ಇದಕ್ಕೆ ಪ್ರಮುಖ.ಅದೆಲ್ಲವನ್ನು ಮೀರಿ  ಮಾತುಕತೆಯ ವೈಫಲ್ಯಕ್ಕೆ ಕಾರಣವಾಯಿತೆನ್ನಲಾದ ಸಂಗತಿಗಳು  ಸಾರಿಗೆ ಹೋರಾಟದ ಇತಿಹಾಸದಲ್ಲಿ ಅತ್ಯಂತ ಕೆಟ್ಟದಾಗಿ ನೆನಪಿಸಿಕೊಳ್ಳಬೇಕಾದ ಕ್ಷಣಗಳಾಗಿ … Read more

ನಾಳೆ ಸಾರಿಗೆ ಮುಷ್ಕರ ಇಲ್ಲ, ಒಂದು ದಿನ ಮುಂದೂಡಿಕೆ :ಹೈಕೋರ್ಟ್ ಆದೇಶ

ಬೆಂಗಳೂರು:ನಾಳೆ ಮುಷ್ಕರ ನಡೆಸದಂತೆ ಹೈಕೋರ್ಟ್ ಆದೇಶಿಸಿದೆ. ಸಾರಿಗೆ ಮುಷ್ಕರ ಸಂಬಂಧ  ಇಂದು ನಡೆದ ವಿಚಾರಣೆ ವೇಳೆ  ಕೋರ್ಟ್ ಈ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಕೆ ಎಸ್ ಮುದಗಲ್ ಮತ್ತು ಎಂಜಿಎಸ್ ಕಮಲ್ ರ ದ್ವಿಸದಸ್ಯ ಪೀಠ ಈ ತೀರ್ಪು ನೀಡಿದೆ. ಅರ್ಜಿದಾರರ ಪರ ವಕೀಲೆ ದೀಕ್ಷಾ ಅಮೃತೇಶ್ ವಾದ  ಮಂಡಿಸಿದ್ರೆ.  ಸರ್ಕಾರದ ಪರ ನಿಲೋಫರ್ ಅಕ್ಬರ್ ವಾದ ಮಂಡಿಸಿದರು. ಕೊರೊನಾ‌ ಸಂಧರ್ಭದಲ್ಲಿ ಸರ್ಕಾರ ಹಲವು ಸಿಬ್ಬಂದಿಯನ್ನ ವಜಾಗೊಳಿಸಿದೆ..ಬಹುತೇಕರನ್ನ ಪುನಃ ಸೇವೆಗೆ ಮರು ನೇಮಕ ಮಾಡಿಲ್ಲ.. ಹೀಗಾಗಿ ಬಾಕಿ … Read more

“ಅವರಿಬ್ಬರು” ಒಂದಾದ್ರೆ ಆಗಸ್ಟ್ 5 ರ ಸಾರಿಗೆ ಮುಷ್ಕರ “ಯಶಸ್ವಿ”ನಾ.?!

***ಆ “ಸುನಾಮಿ- ಸುಂಟರಗಾಳಿ” ಒಂದಾದ್ರೆ ಆಗಸ್ಟ್ 5 ರ ಸಾರಿಗೆ ಮುಷ್ಕರ ಸಕ್ಸೆಸ್   ಪಕ್ಕಾ  ಅಂತೆ..!?*** ***ಮುನಿಸು ಮರೆತು, ಸ್ವಪ್ರತಿಷ್ಟೆ ಬದಿಗಿಟ್ಟು ಅನಂತ ಸುಬ್ಬರಾವ್- ಚಂದ್ರಶೇಖರ್ ಒಂದಾದ್ರೆ ಗೆಲುವು ಗ್ಯಾರಂಟಿ ಅಂತೆ..!***  ***ಮುಷ್ಕರದ  ಯಶಸ್ಸು-ವೈಫಲ್ಯ ಅವಲಂಭಿಸಿರೋದೇ ಸಾರಿಗೆ “ಕೂಟ-ಜಂಟಿಕ್ರಿಯಾಸಮಿತಿ” ಮೇಲೆ ಒಂದಾದ್ರಂತೆ..!***   ಬೆಂಗಳೂರು:ತಮ್ಮ ನ್ಯಾಯಯುತ ಬೇಡಿಕೆ ಹಾಗೂ ಹಕ್ಕೊತ್ತಾಯಕ್ಕಾಗಿ ಆಗಸ್ಟ್ 5 ರಿಂದ ರಾಜ್ಯಾದ್ಯಂತ ಸಾರಿಗೆ ವ್ಯವಸ್ಥೆಯನ್ನು ಅನಿವಾರ್ಯವಾಗಿ ಬಾಧಿತಗೊಳಿ ಸುವಂತ ನಿರ್ದಾರಕ್ಕೆ ಬಂದಿದ್ದಾರೆ ಸಾರಿಗೆ ಸಿಬ್ಬಂದಿ.ಇದರ ಝಲಕ್ ಎನ್ನುವಂತೆ ನಿನ್ನೆ ಅಂದರೆ ಬುಧವಾರ( 30-07-2025) … Read more

ಬಿಗ್ ಇಂಪ್ಯಾಕ್ಟ್..kSRTC ಎಂಡಿ ಸಹಿ ನಕಲು ಮಾಡಿದ್ದಾತ ಸಸ್ಪೆಂಡ್…

ಬೆಂಗಳೂರು: ಇದು ಕನ್ನಡ ಫ್ಲ್ಯಾಶ್ ನ್ಯೂಸ್ ವರದಿಯ ಫಲಶ್ರತಿ.. ಕೆಎಸ್ ಆರ್ ಟಿಸಿಯ ನಿಕಟಪೂರ್ವ ಎಂಡಿ ಅನ್ಬುಕುಮಾರ್ ಅವರ ಸಹಿಯನ್ನು ನಕಲು ಮಾಡಿ ಸಾರಿಗೆ ಸಿಬ್ಬಂದಿಯೋರ್ವರಿಗೆ 1,35,000 ರೂ ವಂಚಿಸಿದ್ದ ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿಯ ಸಿಬ್ಬಂದಿ ರಿಚರ್ಡ್ ಎಂಬಾತನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಇಲಾಖೆಯಿಂದ ಕೆಲಸ ಕಳೆದುಕೊಂಡು 7 ವರ್ಷ ವಾಗಿದ್ದ ಶಿವಮೊಗ್ಗ ವಿಭಾಗದ ಸಾಗರ ಡಿಪೋದ ನಾಗರಾಜ್ ಕುಗ್ವೆ ಎನ್ನುವವರಿಗೆ ಮರುನಿಯೋಜನೆ ಮಾಡಿಸಿಕೊಡುತ್ತೇನೆ.ಎಂಡಿ ಅನ್ಬುಕುಮಾರ್ ನನಗೆ ತುಂಬಾ ಕ್ಲೋಸ್..ಅವರಿಂದ ಹೇಳಿಸಿ ಕೆಲಸ ಮಾಡಿಸಿಕೊಡುತ್ತೇನೆ … Read more

“ಅಧಿಕಾರಿ”ಗಳು ಕೆಲಸ ಬಿಟ್ಟು ರಸ್ತೆಗಿಳಿದ್ರೆ ಮಾತ್ರ “ಇವ್ರು” ಬಸ್ ಓಡಿಸೊಲ್ಲವಂತೆ!

****ಸಾರಿಗೆ ಮುಷ್ಕರದ ನಿರ್ದಾರಕ್ಕೆ ಹೊಸ ಟ್ವಿಸ್ಟ್: ಅಧಿಕಾರಿಗಳಿಗೆ ಸವಾಲೆಸೆದ ಸಾರಿಗೆ ಸಿಬ್ಬಂದಿ ****ಸಾರಿಗೆ ಸಿಬ್ಬಂದಿ ಜತೆ ಅಧಿಕಾರಿ ವರ್ಗ ಕೈ ಜೋಡಿಸಿದ್ರೆ ಇತಿಹಾಸ ನಿರ್ಮಾಣ ಪಕ್ಕಾ ****ಪ್ರತಿ ಮುಷ್ಕರಕ್ಕು ಪ್ರಚೋದನೆ ಕೊಟ್ಟು, ಒಳಗೆ ಕುಳಿತುಕೊಳ್ಳುವ ಅಧಿಕಾರಿ ವರ್ಗಕ್ಕೆ ಸಿಬ್ಬಂದಿ ಠಕ್ಕರ್ ****ಒಳ್ಳೇದಾದ್ರೆ ಇಬ್ಬರಿಗೂ ಆಗಲಿ..ಕೆಟ್ಟದಾದ್ರೂ ಇಬ್ಬರಿಗೂ ಆಗಲಿ..ಪ್ರತಿಫಲ ನಿಮ್ಗೆ-ಶಿಕ್ಷೆ ಭಾಗ್ಯ ನಮಗೆ ಮಾತ್ರ ಏಕೆ..? ಬೆಂಗಳೂರು:ಪ್ರತಿ ಬಾರಿ  ಮುಷ್ಕರ ಮಾಡಿ ಸಂಕಷ್ಟಕ್ಕೆ ಸಿಲುಕಿಕೊಳ್ಳೋದು ನಾವು..ಸೇಫ್ ಆಗೋದು ಅಧಿಕಾರಿಗಳಾ..? ಇದ್ಯಾವ ಸೀಮೆಯ ನ್ಯಾಯ.ಇನ್ಮುಂದೆ ಹಾಗೆ ನಡೆಯೊಕ್ಕೆ ನಾವು ಬಿಡೊಲ್ಲ..ನಮಗೆ … Read more

“ವರ್ಗಾವಣೆ” ಲೀಸ್ಟ್ ನಿಂದಲೇ ಹೆಸ್ರು ಡಿಲೀಟ್ ಮಾಡಿಸಿಕೊಂಡ್ ಬಿಟ್ರಾ ddpu ಮನೋಹರ್ ಕೊಳ್ಳಾ..?!

ಮಿನಿಸ್ಟರ್ಸ್ ಪ್ರಿಯಾಂಕ್ ಖರ್ಗೆ-ಮಧು ಬಂಗಾರಪ್ಪ ಹೆಸ್ರಲ್ಲೇ “ಅಬೇಧ್ಯ ಕೋಟೆ” ನಿರ್ಮಿಸಿಕೊಂಡಿದ್ದಾರಾ.. ಮನೋಹರ್ ಕೊಳ್ಳಾ..!? ಬೆಂಗಳೂರು: ಮಾತೆತ್ತಿದ್ರೆ ನನಗೆ ಅವ್ರು ಗೊತ್ತು..ಇವ್ರು ಗೊತ್ತು… ಪ್ರಿಯಾಂಕ ಖರ್ಗೆ ನನ್ನ ಗಾಡ್ ಫಾದರ್..ಮಿನಿಸ್ಟರ್ ಮಧು ಬಂಗಾರಪ್ಪ ನನ್ ಜೇಬಲ್ಲಿದ್ದಾರೆ.,ಎಂದೆಲ್ಲಾ ಬಿಲ್ಡಪ್ ಕೊಟ್ಟಿಕೊಂಡು ಅಡ್ಡಾಡುತ್ತಿರುವ ಆಪಾದನೆ ಪದವಿಪೂರ್ವ ಇಲಾಖೆಯ ಬೆಂಗಳೂರು ದಕ್ಷಿಣ ಜಿಲ್ಲೆಯ ಉಪನಿರ್ದೇಶಕ ಮನೋಹರ್ ಕೊಳ್ಳಾ ಅವರ ಮೇಲಿದೆ.ತಾನು ಹೇಳಿದ ಕೆಲಸವನ್ನು ಮಾಡುವ, ಝೀ ಹುಜೂರ್ ಎಂದ್ಹೇಳುವ ಬಕೆಟ್ ಗಿರಾಕಿಗಳನ್ನಷ್ಟೇ ಅಕ್ಕಪಕ್ಕ ಇಟ್ಟುಕೊಂಡಿರುವ ಬಗ್ಗೆ ಇಲಾಖೆ ತುಂಬಾ ಮಾತಿದೆ.ಇಂಥಾ ಮನೋಹರ್ ಕೊಳ್ಳಾ … Read more

ರಾಷ್ಟ್ರವಾದಿ ಚಿಂತಕ ಚಕ್ರವರ್ತಿ ಸೂಲಿಬೆಲೆಗೆ ಕ್ಯಾನ್ಸರ್..!?

ಸಾಮಾಜಿಕ ಜಾಲತಾಣಗಳಲ್ಲಿ ಸೂಲಿಬೆಲೆ ಆರೋಗ್ಯದ ಬಗ್ಗೆ ಊಹಾಪೋಹ-ಸ್ಪಷ್ಟನೆ ನೀಡದ ಸೂಲಿಬೆಲೆ ಬೆಂಗಳೂರು: ತಾತ್ವಿಕ ಭಿನ್ನಾಭಿಪ್ರಾಯ, ಸೈದ್ದಾಂತಿಕ ವೈರುದ್ಧ್ಯಗಳಾಚೆಗೆ ಕರ್ನಾಟಕ ಕಂಡ ಒಬ್ಬ  ಉತ್ತಮ ವಾಗ್ಮಿ ,ಚಿಂತಕ, ರಾಷ್ಟ್ರವಾದಿ ಹೋರಾಟಗಾರ ಎಂದೇ ಬಿಂಬಿಸಿಕೊಂಡಿರುವ  ಚಕ್ರವರ್ತಿ ಸೂಲಿಬೆಲೆ ಆರೋಗ್ಯಕ್ಕೆ ಸಂಬಂಧಪಟ್ಟಂತೆ ದೊಡ್ಡ ಶಾಕಿಂಗ್ ಎನ್ನುವಂತ ಸುದ್ದಿಯೊಂದು ಹರಿದಾಡುತ್ತಿದೆ. ಚಕ್ರವರ್ತಿ ಸೂಲಿಬೆಲೆ ಆರೋಗ್ಯವನ್ನು ಮಾರಕವಾದ ಮಾರಿ ಆವರಿಸಿಕೊಂಡಿದೆ ಎನ್ನಲಾಗ್ತಿದೆ.ಈ ಮಹಾಮಾರಿಯನ್ನು ಗಂಟಲು ಕ್ಯಾನ್ಸರ್ ಎನ್ನಲಾಗ್ತಿದೆ.ಸಾಮಾಜಿಕ ಕಾರ್ಯಕರ್ತ ಹಾಗೂ ಕನ್ನಡಪರ ಹೋರಾಟಗಾರರಾದ ಭೈರಪ್ಪ ಹರೀಶ್ ಕುಮಾರ್ ಎನ್ನುವವರು ಇದನ್ನು ತಮ್ಮ ಫೇಸ್ ಬುಕ್ … Read more

ಎಲೆನ್ (allen) ಅಕ್ರಮದ ಸಕ್ರಮಕ್ಕೆ ಮುಂದಾಯ್ತಾ ಶಿಕ್ಷಣ ಇಲಾಖೆ..? ಕ್ರಮಕ್ಕೆ ಶಿಫಾರಸ್ಸು ಮಾಡಿದ್ದ  ಡಿಡಿಪಿಯು(ddpu) ಮನೋಹರ್  ಕೊಳ್ಳಾ “ಯೂ ಟರ್ನ್” ಹಿಂದಿದ್ಯಾ “ಮೆಗಾ ಪ್ಲ್ಯಾನ್”-“ಬಿಗ್ ಡೀಲ್”..!?

ಬೆಂಗಳೂರು : ಹೀಗೆ ಖಂಡಿತಾ ಆಗದಿರಲಿ..ಒಂದೊಮ್ಮೆ ಆದರೆ ಇದಕ್ಕಿಂತ ದೊಡ್ಡ ಶೈಕ್ಷಣಿಕ ದುರಂತ ಮತ್ತೊಂದಿರಲಾರದೇನೋ..? ಏಕಂದ್ರೆ ಅಂತಹದೊಂದು ಅಕ್ರಮವನ್ನು ಸಕ್ರಮಗೊಳಿಸುವ ಕೆಲಸ ಮಲ್ಲೇಶ್ವರಂ ನಲ್ಲಿರುವ ಪದವಿಪೂರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲಿ ನಡೆಯುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.ದೊಡ್ಡ ಮೊತ್ತದ ಹಣದ ವ್ಯವಹಾರವೊಂದು ಸಕ್ಸೆಸ್ ಆಗುವ ಲಕ್ಷಣ ಗೋಚರಿಸುತ್ತಿದೆ ಹಾಗೇನಾದ್ರೂ ಹಾಗಿಬಿಟ್ಟರೆ ಶಿಕ್ಷಣ ಇಲಾಖೆಯೇ ತಲೆತಗ್ಗಿಸುವ ಸನ್ನಿವೇಶವೊಂದು ಸೃಷ್ಟಿಯಾದಂತಾಗಿಬಿಡುತ್ತದೆ. ಯೆಸ್…ಶೈಕ್ಷಣಿಕ ಅಕ್ರಮವೊಂದನ್ನು ಸಕ್ರಮಗೊಳಿಸುವ ಮೆಗಾ ಪ್ಲ್ಯಾನ್, ಪಿಯು ಮಂಡಳಿ ಕಾರಿಡಾರ್ ನಲ್ಲಿ ನಡೆಯುತ್ತಿದೆ ಎನ್ನುವ ಆಪಾದನೆ ಕೇಳಿಬಂದಿದೆ.ಅದು ಅಂತಿಂಥ  ಅಕ್ರಮವಲ್ಲ ಶಿಕ್ಷಣ … Read more

EXCLUSIVE….. ಯಾವ ಕ್ಷಣದಲ್ಲೂ ಎಲೆನ್‌ (ALLEN) ಟ್ಯೂಷನ್‌ ಸೆಂಟರ್ಸ್‌ ಗಳಿಗೆ ಬೀಗ..?!

ಅಲೆನ್‌ ಕೆರಿಯರ್‌ ಇನ್ಸಿಟ್ಯೂಟ್‌  ನ ಬ್ರಹ್ಮಾಂಡ ಶೈಕ್ಷಣಿಕ ಅಕ್ರಮ ಬಯಲು- ಎಲ್ಲಾ ಸೆಂಟರ್ಸ್‌ ಮುಚ್ಚುವಂತೆ ಶಿಕ್ಷಣ ಇಲಾಖೆಯಿಂದ ಖಡಕ್‌ ಆದೇಶ- ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಸರ್ಕಾರದ ಮಟ್ಟದಲ್ಲಿ ತೀವ್ರ ಲಾಭಿ..!.. ಎಲೆನ್ ಕೆರಿಯರ್ ಇನ್ಸಿಟ್ಯೂಟ್ … ಈ ಹೆಸರು ಕೇಳದಿರೋರೇ ಕಡಿಮೆ  ಬಿಡಿ..ನಿಮ್ಮ ಮಕ್ಕಳನ್ನು ಡಾಕ್ಟರ್ಸ್.ಎಂಜಿನಿಯರ್ಸ್‌ ಮಾಡಿಸುತ್ತೇವೆ ಎಂದು ಪತ್ರಿಕೆಗಳಲ್ಲಿ ಪುಟಗಟ್ಟಲೇ ಜಾಹೀರಾತು ಕೊಟ್ಟು ಪೋಷಕರು-ವಿದ್ಯಾರ್ಥಿಗಳಲ್ಲಿ ಸಾಮೂಹಿಕ ಸನ್ನಿ ಸೃಷ್ಟಿಸಿದ ಸಂಸ್ಥೆ.ಮಕ್ಕಳ ಭವಿಷ್ಯದ ಬಗ್ಗೆ  ಬಣ್ಣ ಬಣ್ಣದ ಕನಸುಗಳನ್ನು ಬಿತ್ತಿ, ಪ್ರತಿ ವಿದ್ಯಾರ್ಥಿಯಿಂದಲೂ ಲಕ್ಷಾಂತರ … Read more