ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕಸರತ್ತು ಹೈಕಮಾಂಡ್ ಗೆ  ಪಕ್ಷದ ಇತಿಹಾಸದಲ್ಲೇ ಹಿಂದೆಂದು ಇಷ್ಟೊಂದು ಕಷ್ಟಕರವಾಗಿರಲಿಲ್ಲವೇನೋ ಅನ್ನಿಸುತ್ತೆ.ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಗೊಂದಲಕ್ಕೆ ಸಿಲುಕಿಕೊಂಡಿದೆ.ಯತ್ನಾಳ್ ಬಣದ ಬೇಡಿಕೆಯಂತೆ ಬಸವರಾಜ್ ಬೊಮ್ಮಾಯಿ ಅವರನ್ನು ನೇಮಿಸಬೇಕೋ, ಬಿವೈ ವಿಜಯೇಂದ್ರ ಅವರನ್ನೇ ಮುಂದುವರೆಸಬೇಕೋ ಎನ್ನುವ ಪ್ರಶ್ನೆ ತೀವ್ರವಾಗಿ ಕಾಡಲಾರಂಭಿಸಿದೆ.ಇದೆಲ್ಲದರ ನಡುವೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಎಲ್ಲವನ್ನು ಸರಿದೂಗಿಸಬಲ್ಲ ಕೆಪಾಸಿಟಿ ಇರುವ ಲೀಡರ್ಸ್ ಗಳು ಯಾರೆನ್ನುವ ಪ್ರಶ್ನೆಗೆ ಹೈಕಮಾಂಡ್ ಬಳಿ ಇರುವ ಕೆಲವೇ ಕೆಲವು ಹೆಸರುಗಳಲ್ಲಿ ಸಿ.ಟಿ ರವಿ,ಅರವಿಂದ ಬೆಲ್ಲದ್ ಮುಂಚೂಣಿಯಲ್ಲಿವೆ … Read more

EXCLUSIVE..ಹಿರಿಯ “ಪತ್ರಕರ್ತ ದಿಗ್ಗಜ”ರೊಬ್ಬರಿಗೆ ಬಿಜೆಪಿ ಗಾಳ..!- ಆಯಕಟ್ಟಿನ ಹುದ್ದೆಗೆ ಡಿಮ್ಯಾಂಡ್..!

ಬೆಂಗಳೂರು: ಇದು ಎಷ್ಟರ ಮಟ್ಟಿಗೆ ಸತ್ಯವೋ..ಸುಳ್ಳೋ ಗೊತ್ತಿಲ್ಲ.ಆದರೆ ರಾಜಕೀಯ ಪಡ ಸಾಲೆಯಲ್ಲಿ ಇಂತದ್ದೊಂದು ಮಾತು ತುಂಬಾ ಗಂಭೀರವಾಗಿ ಕೇಳಿಬರುತ್ತಿದೆ. ಬಣಜಗಳ ದಿಂದ ದಿಕ್ಕೆಟ್ಟು ಹೋಗಿರುವ ಬಿಜೆಪಿ ಪಕ್ಷವನ್ನು ಹಳಿಗೆ ತರೊಕ್ಕೆ ಪಕ್ಷದಲ್ಲಿ ಸಮರ್ಥ ನಾಯಕರೇ ಇಲ್ಲ ಎನ್ನುವ ಪರಿಸ್ತಿತಿ ನಿಜಕ್ಕೂ ಇದೆಯೇ..? ಆ ಪತ್ರಿಕಾ ದಿಗ್ಗಜರನ್ನೇ ಕರೆತಂದು ಸರಿ ಮಾಡ ಬೇಕೆನಿಸುವ ವಿಚಾರ ಏಕೆ ಬಂದಿದೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡಲಾರಂಭಿಸಿವೆ. ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಎನ್ನುವುದಕ್ಕಿಂತ ಏನೂ ಸರಿಯಿಲ್ಲ ಎನ್ನುವಂಥ ಪರಿಸ್ತಿತಿಯಿದೆ.ಬಣ ಜಗಳ ಸರಿ … Read more

EXCLUSIVE…ಅಧಿಕಾರ ವಹಿಸಿಕೊಂಡ ದಿನವೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿಗೆ ಬಿಗ್ ಶಾಕ್..!

*****ಆಯಕಟ್ಟಿನ ಹುದ್ದೆ  ಭರವಸೆ ಈಡೇರಿಸುವ ಭರಾಟೆಯಲ್ಲಿ  ನಿಯಮ ಗಾಳಿಗೆ ತೂರಿತಾ ಸಿದ್ದರಾಮಯ್ಯ ಸರ್ಕಾರ.. *****ಅಧ್ಯಕ್ಷರಾಗಲು ಬೇಕಿರುವುದು ಬಿಇ( ಪರಿಸರ ವಿಜ್ನಾನ)-ನರೇಂದ್ರಸ್ವಾಮಿ ಓದಿರುವುದು ಬಿ.ಇ( ಸಿವಿಲ್) ಅಂತೆ.. ಬೆಂಗಳೂರು: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷಗಾದಿಯ ವಾಸ್ತುವೇ ಸರಿ ಇಲ್ಲ ಎನಿಸುತ್ತದೆ.ಯಾರೇ ಹೊಸದಾಗಿ ಅಧ್ಯಕ್ಷರಾಗಿ ಬಂದರೂ ಅವರ ಸುತ್ತ ವಿವಾದ ಸುತ್ತಿಕೊಳ್ಳುತ್ತಲೇ ಇರುತ್ತದೆ.ಹೊಸ ಅಧ್ಯಕ್ಷರಾಗಿ ಮಂಡ್ಯ ಜಿಲ್ಲೆ ಮಳವಳ್ಳಿ ಶಾಸಕ ಎಂ.ನರೇಂದ್ರಸ್ವಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದ ಬೆನ್ನಲ್ಲೇ ಎದುರಾಗಿರುವ ಗೊಂದದ  ಹಿನ್ನಲೆಯಲ್ಲಿ ಇಂತದ್ದೊಂದು ಪ್ರಶ್ನೆ ಕಾಡುವುದು ಸಹಜ..ಆದರೆ ಇದು … Read more

“ಕ್ಯಾಮೆರಾ”ದಿಂದ ಶಾಶ್ವತಕ್ಕೂ “ಔಟ್ ಆಫ್ ಫೋಕಸ್” ಆದ ಪತ್ರಿಕಾ ಛಾಯಾಗ್ರಾಹಕ “ಶಿವಮೊಗ್ಗ ನಂದನ್”

“ದೇಹದಿಂದ ಆತ್ಮ ಹೊರ ಹೋಗುವುದೆಂದರೆ ಫ್ರೇಮಿನಿಂದ ಫೋಟೋ ಹೊರ ಹೋದಂತೆ..” ಶಿವಮೊಗ್ಗ ನಂದನ್ ಅವರ ಸಾವನ್ನು ನೆನೆದು ಹಿರಿಯ ಮಾದ್ಯಮ ಮಿತ್ರರಾದ ಶಿವಮೊಗ್ಗದ ಶಿ.ಜು ಪಾಷಾ ಬರೆದಿರುವ  ಈ ಕವಿಸಾಲು ನಂದನ್ ಅವರ ಸಂಪೂರ್ಣ ಬದುಕು-ವ್ಯಕ್ತಿತ್ವ-ವೃತ್ತಿಯನ್ನೇ ಬಿಂಬಿಸುತ್ತದೆ. ಹೌದು…ಶಿವಮೊಗ್ಗ ಕಂಡ ಅತ್ಯದ್ಭುತ ಹಾಗೂ ಅಗಾಧ ಪ್ರತಿಭಾಶಾಲಿ ಛಾಯಾಗ್ರಾಹಕ ದೈಹಿಕವಾಗಿ ಫ್ರೇಮ್ ನಿಂದ ಔಟ್ ಆಫ್ ಫೋಕಸ್ ಆಗಿದ್ದಾರೆ.ಮತ್ತೆಂದೂ ಕ್ಯಾಮೆರಾ ಹಿಡಿಯಲಾರರು. ಕ್ಯಾಮೆರಾ ಧೂಳು ಹಿಡಿಯಬಹದು.ಆದರೆ ಅವರು ತೆಗೆದ ಲಕ್ಷಾಂತರು ಫೋಟೋಗಳು ನಂದನ್ ಅವರ ಇರುವಿಕೆಯನ್ನು ಜೀವಂತವಾಗಿಡಲಿವೆ.. ಶಿವಮೊಗ್ಗದಲ್ಲಿ … Read more

ಮಾದ್ಯಮ ಲೋಕದ “ದಿಗಂತ”ದಲ್ಲಿ ಶಾಶ್ವತಕ್ಕೂ “ಅಸ್ತಂಗತ”ನಾದ “ಶಶಿ”ಧರ್

ಪಬ್ಲಿಕ್ ಟಿವಿ ಶಿವಮೊಗ್ಗ ವರದಿಗಾರ ಶಶಿಧರ್ ಇನ್ನು ಕೇವಲ ನೆನಪು-ಗೆಳೆಯನ ಅಗಲಿಕೆಗೆ ಮಾದ್ಯಮ ಸ್ನೇಹಿತರ ಕಂಬನಿ ಶಿವಮೊಗ್ಗ: ಕೆಲವರ ಸಾವುಗಳು ಅತೀವವಾಗಿ ಕಾಡುತ್ತವೆ. ನಮ್ಮಲ್ಲೇ ನಮ್ಮವರಾಗಿದ್ದ, ಹೃದಯಕ್ಕೆ ತೀರಾ ಹತ್ತಿರವಾಗಿದ್ದ ಜೀವವೊಂದು ದೂರವಾದಂತ ನೋವನ್ನು ಕೊಡುತ್ತವೆ. ಪಬ್ಲಿಕ್ ಟಿವಿಯ ಶಿವಮೊಗ್ಗ ಜಿಲ್ಲಾ ವರದಿಗಾರ ಶಶಿಧರ್ ಸಾವು ಕೂಡ ಪತ್ರಕರ್ತರಾದಿಯಾಗಿ ಅವರೊಂದಿಗೆ ಒಡನಾಟ ವಿಟ್ಟುಕೊಂಡಿದ್ದವರನ್ನು ಶೋಕದ ಸಾಗರದಲ್ಲಿ ಮುಳುಗಿಸಿದೆ. ಕೆಲವೇ ವರ್ಷಗಳಲ್ಲಿ ಶಿವಮೊಗ್ಗದವರೇ ಆಗೋಗಿದ್ದ ಸ್ನೇಹಿತ-ಆತ್ಮೀಯ ಶಶಿಧರ್ ಗೆ ಕಣ್ಣೀರಾಕದವರೇ ಇಲ್ಲ. ಶಿವಮೊಗ್ಗ ಮಾದ್ಯಮ ಲೋಕದಲ್ಲಿ ಅತ್ಯಂತ ಸ್ನೇಹಪರ … Read more

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ 830 ವಾಣಿಜ್ಯ ಕಟ್ಟಡಗಳು ಸೀಜ್..

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ 830 ವಸತಿಯೇತರ ಕಟ್ಟಡಗಳಿಗೆ ಬೀಗ ಮುದ್ರೆ ಹಾಕಲಾಗಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತರಾದ  ಮುನೀಶ್ ಮೌದ್ಗಿಲ್ ರವರು ತಿಳಿಸಿದ್ದಾರೆ. ಪಾಲಿಕೆಯ 8 ವಲಯಗಳಲ್ಲಿ ಅತಿ ಹೆಚ್ಚು ಬಾಕಿ ಆಸ್ತಿ ತೆರಿಗೆ ಪಾವತಿಸದ ಸುಸ್ತಿದಾರರಿಂದ ತ್ವರಿತಗತಿಯಲ್ಲಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಬೇಕು. ಈ ಪೈಕಿ ಆಯಾ ವಲಯಗಳಲ್ಲಿ ಹೆಚ್ಚು ಬಾಕಿ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗ ಮುದ್ರೆ ಹಾಕಿ ತ್ವರಿತಗತಿಯಲ್ಲಿ ಬಾಕಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಲು … Read more

ಕ್ರೈಸ್ತ ಧರ್ಮದ ಸಾರವೇ ಶಾಂತಿ,ಶಿಕ್ಷಣಕ್ಕೆ ಕ್ರೈಸ್ತರ ಕೊಡುಗೆ ಅಪಾರ: ಮಹಾಧರ್ಮಾಧ್ಯಕ್ಷ ಡಾ||ಪೀಟರ್ ಮಚಾಡೊ,

ಬೆಂಗಳೂರು:ಕ್ರೈಸ್ತ ಸಮುದಾಯ ವಿಶ್ವಕ್ಕೆ ಶಾಂತಿ ಸಾರುವ ಧರ್ಮವಾಗಿದೆ. ಎಲ್ಲ ಧರ್ಮ ಮತ್ತು ವರ್ಗದವರಿಗೆ ಮಕ್ಕಳ ಶಿಕ್ಷಣಕ್ಕೆ ಶಿಕ್ಷಣ ಸಂಸ್ಥೆಗಳನ್ನು ತೆರದು ವಿದ್ಯಾವಂತ ಸಮಾಜ ನಿರ್ಮಾಣಕ್ಕೆ ಕ್ರೈಸ್ತ ಸಮುದಾಯ ಅಪಾರ ಕೊಡುಗೆ ನೀಡಿದೆ.ಕ್ರೈಸ್ತರನ್ನು ಗುರುತಿಸುವ ಕೆಲಸವಾಗಬೇಕು ಎಂದು  ಬೆಂಗಳೂರು ಕ್ರೈಸ್ತ ಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಡಾ||ಪೀಟರ್ ಮಚಾಡೊ ಆಶಯ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಕರ್ನಾಟಕ ಕ್ರೈಸ್ತ ಅಲ್ಪಸಂಖ್ಯಾತ ಜಾಗೃತಿ ವೇದಿಕೆ ವತಿಯಿಂದ ಡಾಕ್ಟರೇಟ್ ಪಡೆದ 72 ಕ್ರೈಸ್ತ  ಪದವೀಧರನ್ನು ಸನ್ಮಾನಿಸುವ  ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಕರ್ನಾಟಕ ಕ್ರೈಸ್ತ ಅಲ್ಪಸಂಖ್ಯಾತ … Read more

ಅಕ್ರಮ ಖಾತಾ ವರ್ಗಾವಣೆ ಆರೋಪಕ್ಕೆ ತುತ್ತಾದ AC ದುರ್ಗಶ್ರೀ,ತಹಸೀಲ್ದಾರ್ ವಿಭಾ ರಾಠೋಡ್ ವಿರುದ್ಧ ಮತ್ತೆರೆಡು ದೂರು…ಸಾಕ್ಷ್ಯವಿದ್ರೂ ಕ್ರಮ ಕೈಗೊಳ್ಳದೆ ಸಚಿವ ಕೃಷ್ಣ ಭೈರೇಗೌಡ ಮೌನ..?!

ಬೆಂಗಳೂರು(ದೊಡ್ಡಬಳ್ಳಾಪುರ): ಕ್ರಮ ಕೈಗೊಳ್ಳಲು ಸಾಕ್ಷ್ಯಗಳನ್ನು ಕೇಳುತ್ತಿದ್ದ ಕಂದಾಯ ಸಚಿವ ಕೃಷ್ಣಭೈರೇಗೌಡರ ಮುಂದೆ ಈಗ  ಎಲ್ಲಾ ಸಾಕ್ಷ್ಯಗಳಿವೆ..ಆದರೆ ನಿರ್ದಾಕ್ಷಿಣ್ಯ  ಕ್ರಮ ಕೈಗೊಳ್ಳುವ ಧೈರ್ಯ ನಿಮಗಿದೆಯೇ..? ಇದು ಕನ್ನಡ ಫ್ಲ್ಯಾಶ್ ನ್ಯೂಸ್ ಸಚಿವರಿಗೆ ಹಾಕುತ್ತಿರುವ ನೇರ ಪ್ರಶ್ನೆ.. ಏಕಂದ್ರೆ ದೊಡ್ಡ ಬಳ್ಳಾಪುರದ  ದೊಡ್ಡಬೆಳವಂಗಲ ಗ್ರಾಮದ ಹುಲಿಕುಂಟೆಯ ಸರ್ವೆ ನಂಬರ್ 150ರಲ್ಲಿ ಖಾಸಗಿ ಬಿಲ್ಡರ್ಸ್ ಗಳ ಲಾಭಿಗೆ ಒಳಗಾಗಿ ಖಾತೆ ವರ್ಗಾವಣೆ ಮಾಡಿದ ಆರೋಪಕ್ಕೆ ತುತ್ತಾಗಿರುವ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಎನ್.ದುರ್ಗಶ್ರೀ ಹಾಗೂ ತಹಸಿಲ್ದಾರ್ ವಿಭಾ ರಾಠೋಡ್  ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳು … Read more

ಬಾಲಿವುಡ್ ನ ಖ್ಯಾತ ಹಾಸ್ಯನಟ  ಟಿಕು ತಲ್ಸಾನಿಯಾಗೆ ಹೃದಯಸ್ಥಂಭನ-ಸ್ಥಿತಿ ಗಂಭೀರ…

ನವದೆಹಲಿ: ಅಂದಾಜ್ ಅಪ್ನಾ ಅಪ್ನಾ..ದಿಲ್ ಹೈ ಕೆ ಮಂತಾ ನಹೀ, ಉಮರ್ 55 ಕಿ ದಿಲ್ ಬಚ್ಪನ್ ಕಾ, ಬೋಲ್ ರಾಧಾ ಬೋಲ್, ಅಂದಾಜ್ ಅಪ್ನಾ ಅಪ್ನಾ ಮತ್ತು ಮಿಸ್ಟರ್ ಬೆಚರಾ ,ವಕ್ತ್ ಹಮಾರಾ ಹೈ,ಇಷ್ಕ್, ಜೋಡಿ ನಂ.1 ಪಾರ್ಟ್ನರ್ ,ದೇವದಾಸ್ ನಂತ ಸೂಪರ್ ಹಿಟ್ ಚಿತ್ರಗಳಲ್ಲಿ ಕಾಮಿಡಿ ಪಾತ್ರದಿಂದ ಹಿಡಿದು ಗಂಭೀರ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ  70ರ ವಯಸ್ಸಿನ ಖ್ಯಾತ ನಟ  ಟಿಕು ತಲ್ಸಾನಿಯಾಗೆ ಭಾರಿ ಹೃದಯಾಘಾತವಾಗಿದೆ. ಜನವರಿ 10 ರ ಶುಕ್ರವಾರ ಹೃದಯ … Read more

“ವಿಸ್ತಾರ” ಪುನರಾಂಭಕ್ಕೆ ದೊಡ್ಡ ಹಿನ್ನಡೆ..!! “ಚಾನೆಲ್” ಮಾಲೀಕತ್ವದ ಕಂಪೆನಿಯ ಸ್ವತ್ತುಗಳು ಜಪ್ತಿ..!?

ಬೆಂಗಳೂರು: ಹಿರಿಯ ಪತ್ರಕರ್ತ ಹಾಗೂ ವಿಸ್ತಾರ ನ್ಯೂಸ್ ಚಾನೆಲ್ ನ ನಿರ್ದೇಶಕರಲ್ಲಿ ಒಬ್ಬರೆನ್ನಲಾಗಿದ್ದ ಹರಿಪ್ರಕಾಶ್ ಕೋಣೆಮನೆ ವಿರುದ್ಧ ಮಾಹಿತಿ ಮತ್ತು  ಪ್ರಸಾರ ಸಚಿವಾಲಯಕ್ಕೆ ದೂರು ಸಲ್ಲಿಕೆಯಾಗಿದೆ ಎಂದು ಮಾದ್ಯಮಗಳು ವರದಿ ಮಾಡಿವೆ.ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ಪಾಲುದಾರರೂ ಆಗಿರುವ ಮೈಸೂರು ಮರ್ಕಂಟೈಲ್  ಕಂಪೆನಿಯ  ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಡಾ.ಎಚ್.ಎಸ್ ಶೆಟ್ಟಿ ಅವರು ದೂರು ನೀಡಿದ್ದಾರೆನ್ನಲಾಗಿದ್ದು,ಅನುಮತಿ ಇಲ್ಲದೆ ಕಂಪೆನಿಯ ಷೇರುಗಳನ್ನು ಹಸ್ತಾಂತರಿಸಿದ್ದಾರೆನ್ನುವುದು ಕೋಣೆಮನೆ ಮೇಲೆ ಕೇಳಿಬಂದಿರುವ ಆಪಾದನೆ. ಅನುಮತಿ ಇಲ್ಲದೆ ಷೇರುಗಳನ್ನು ಇನ್ನೊಬ್ಬರಿಗೆ ಮಾರಬಾರದೆನ್ನುವುದು ಕಂಪೆನಿ ರೂಲ್ಸ್.ಆದರೆ … Read more