CHENNAPATNA BYELECTION, POLITICAL EXCLUSIVE..: ಚನ್ನಪಟ್ಟಣಕ್ಕೆ “ಹೃದಯವಂತ” ಸಂಸದ ಡಾ.ಮಂಜುನಾಥ್ ಪತ್ನಿ ಅನುಸೂಯ “ಮೈತ್ರಿ” ಅಭ್ಯರ್ಥಿ..?!

ಚನ್ನಪಟ್ಟಣ: ಬೊಂಬೆಗಳ ನಗರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮೂಡಿಸಿರುವಷ್ಟು ಕುತೂಹಲವನ್ನು ಬಹುಷಃ ಇನ್ನ್ಯಾವ ಕ್ಷೇತ್ರಗಳ ಉಪ ಚುನಾವಣೆ ಹಿಡಿದಿಟ್ಟುಕೊಂಡಿಲ್ಲ ಎಂದೆನಿಸುತ್ತದೆ. ಎರಡು ಕ್ಷೇತ್ರಗಳಲ್ಲಿನ  ಪ್ರತ್ಯೇಕ ಪಕ್ಷಗಳ  ಅಭ್ಯರ್ಥಿಗಳು ಯಾರೆನ್ನುವುದು ಬಹುತೇಕ ನಿಕ್ಕಿಯಾಗಿದ್ರೂ ಚನ್ನಪಟ್ಟಣ ವಿಚಾರದಲ್ಲಿ ಎದುರಾಳಿ ಪಕ್ಷಗಳು ತಮ್ಮ ಅಭ್ಯರ್ಥಿಗಳು ಯಾರೆನ್ನುವ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.. ಮೊದಲು ನೀವು ಘೋಷಣೆ ಮಾಡಿ ಎಂದು ಕಾಂಗ್ರೆಸ್ ಕುಳಿತಿದ್ರೆ ಜೆಡಿಎಸ್-ಬಿಜೆಪಿ ಮೈತ್ರಿ ಮೊದಲು ನೀವು ಮಾಡಿ ಎಂದು ಸವಾಲಾಕಿ ಕೂತಂತಿದೆ.ಇದೆಲ್ಲದರ ನಡುವೆ ಜೆಡಿಎಸ್ ತನ್ನ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರ … Read more

POLITICAL EXCLUSIVE..”ಡಿ.ಕೆ” ಗೆ “ಠಕ್ಕರ್” ಕೊಡಲು “ಸತೀಶ್ ಜಾರಕಿಹೊಳಿ” ಹೆಸ್ರು “ತೇಲಿ”ಬಿಟ್ಟವರು “ಇವರೇ”ನಾ..? ಏಕೆ..?

ಬೆಂಗಳೂರು:ರಾಜ್ಯ ರಾಜಕಾರಣ ದಿನಕ್ಕೊಂದು ತಿರುವು ಪಡೆಯುತ್ತಿದೆ..ಮಗ್ಗಲು ಬದಲಿಸುತ್ತಿದೆ.ದಸರಾ ಮುಗಿದ ಮೇಲೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆಯುತ್ತಿದೆ ಎಂಬ ಭವಿಷ್ಯವಾಣಿ ಬಗ್ಗೆನೇ ಎಲ್ಲರ ಕುತೂಹಲ ನೆಟ್ಟಿದೆ.ಆ ಕ್ಷಿಪ್ರ ರಾಜಕೀಯ ಬೆಳವಣಿಗೆ ಏನು ಎನ್ನುವ ಕುತೂಹಲದ ಬಗ್ಗೆ ಎಲ್ಲರೂ ತಲೆಕೆಡಿಸಿಕೊಂಡಿ ರುವಾಗಲೆ ಮತ್ತೊಂದು ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ದಸರಾ ಬಳಿಕ ರಾಜ್ಯ ರಾಜಕಾರಣ ಮತ್ತೊಂದು ಮಗ್ಗಲು ಬದಲಿಸಲಿದೆ ಎನ್ನುವ  ಭವಿಷ್ಯ ವಾಣಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ..? ಅಥವಾ ಬಲವಂತವಾಗಿ ಅವರಿಂದ ಕೊಡಿಸಲಾಗುತ್ತಾ ಎನ್ನುವುದರತ್ತಲೇ … Read more

ಮಾದ್ಯಮಗಳಿಗೆ ವಿಧಾನಸೌಧಕ್ಕೆ ನೋ ಎಂಟ್ರಿ..? ಮಂತ್ರಿಮಹೋದಯರ ಭದ್ರತೆಗೆ ಧಕ್ಕೆಯಾಗುವ ನೆವ..?!ಎಸಿಪಿ ಯಿಂದ ಆಡಳಿತ ಸುಧಾರಣಾ ಇಲಾಖೆಗೆ ಪತ್ರ..?!

ಕರೆದಾಗ ಬರಬೇಕಂತೆ…ಹೇಳಿದ್ದಲ್ಲಿ ಬೈಟ್ ತಗೋಬೇಕಂತೆ..ಹಿಂದೆಮುಂದೆ ಅಡ್ಡಾಡುವಂತಿಲ್ವಂತೆ..ಹೇಳಿದಷ್ಟನ್ನೇ ಕೇಳ್ಕೊಂಡು ಹೋಗ್ಬೇಕಂತೆ..ಏನಿದು ಇದೆಲ್ಲಾ..?! ಬೆಂಗಳೂರು: ಕುಣಿಯಲಿಕ್ಕಾಗದವಳು ನೆಲ ಡೊಂಕು ಎಂದಳಂತೆ ಎನ್ನುವಂತಾಗಿದೆ ರಾಜ್ಯ ಸರ್ಕಾರದ ಧೋರಣೆ. ತನ್ನಲ್ಲಿರುವ ಹುಳುಕುಗಳನ್ನು ಸರಿ ಮಾಡಲು ಸಾಧ್ಯವಾಗದೆ ಮಾದ್ಯಮಗಳ ಮೇಲೆ ನಿರ್ಬಂದ-ನಿಯಂತ್ರಣ ಹೇರೊಕ್ಕೆ ಮುಂದಾಗಿದೆ ಎನ್ನಿಸುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ದಮನ ಮಾಡುವ ರೀತಿಯಲ್ಲಿ ರಾಜ್ಯದ ಶಕ್ತಿಕೇಂದ್ರ ವಿಧಾನಸೌಧಕ್ಕೆ ಮಾದ್ಯಮಗಳ ಪ್ರವೇಶಕ್ಕೆ ನಿರ್ಬಂಧ ಹೇರುವ ಎಲ್ಲಾ ಸಾಧ್ಯತೆ ಕಂಡುಬಂದಿದೆ.ಮಾದ್ಯಮಗಳಿಂದ ಮಂತ್ರಿ ಮಹೋದಯರ ಸುರಕ್ಷತೆ-ಭದ್ರತೆಗೆ ಧಕ್ಕೆ ಆಗುತ್ತಿದೆ. ಸಚಿವಾಲಯದ ಕೆಲಸ ಕಾರ್ಯಗಳಿಗೆ ತೀವ್ರತರದ ತೊಂದರೆ ಆಗುತ್ತಿದೆ ಎನ್ನುವ … Read more

ಯಶವಂತಪುರ ಬೈ ಎಲೆಕ್ಷನ್‌ ಕನ್ಫರ್ಮ್….? S.T.ಸೋಮಶೇಖರ್‌ ಪಕ್ಕಾ..ಆದ್ರೆ ಎದುರಾಳಿ ಮೈತ್ರಿ ಅಭ್ಯರ್ಥಿ ಯಾರು…? ಜವರಾಯಿಗೌಡ/ನಿಖಿಲ್‌ ಕುಮಾರಸ್ವಾಮಿನಾ..?!

*3 ಬಾರಿ ಸೋತರೂ ಮತ್ತೊಂದು ಗೆಲುವಿನ ಅವಕಾಶದ ನಿರೀಕ್ಷೆಯಲ್ಲಿ ಜವರಾಯಿಗೌಡ.. *ಜವರಾಯಿಗೌಡರನ್ನೇ ಅಭ್ಯರ್ಥಿಯನ್ನಾಗಿಸಿ ದಳಪತಿಗಳು ಕೊಟ್ಟ ಮಾತನ್ನು ಉಳಿಸಿಕೊಳ್ತಾರಾ..? *ಜವರಾಯಿಗೌಡರಿಗಿಂತ ಸಮರ್ಥ ಅಭ್ಯರ್ಥಿ ಹುಡುಕಾಟದಲ್ಲಿದ್ದೇವೆ ಎಂದು ಶಾಕ್‌ ಕೊಡ್ತಾರಾ..? *ಬಿಜೆಪಿ ಜವರಾಯಿಗೌಡ ಅವರನ್ನೇ ತಮ್ಮ ಮೈತ್ರಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳುತ್ತಾ..? *ದಳಪತಿಗಳು ಕೈ ಕೊಟ್ರ ಜವರಾಯಿಗೌಡ ನಿಲುವೇನು..? ಬೇರೆ ಅಭ್ಯರ್ಥಿಯನ್ನು ಒಪ್ಪಿಕೊಳ್ತಾರಾ..? ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ಶಾಸಕರು ಪಕ್ಷದ ಸಿದ್ದಾಂತಕ್ಕೆ ವಿರುದ್ಧವಾಗಿ ಮತ ಚಲಾಯಿಸುತ್ತಿದ್ದಂತೆ ಆಯಾ ಕ್ಷೇತ್ರ ಗಳಲ್ಲಿ ಬೈ ಎಲೆಕ್ಷನ್ ಆಗೋದು ಪಕ್ಕಾ … Read more

“ಅಡ್ಡಮತದಾನ”ಕ್ಕೆ ಕೋಟ್ಯಾಂತರ ಆಮಿಷ: ಮೈತ್ರಿ ಅಭ್ಯರ್ಥಿ ಸೇರಿ ನಾಲ್ವರ ವಿರುದ್ಧ FIR

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಶಾಸಕರಿಗೆ ಆಮೀಷ ಒಡ್ಡಲಾಯಿತು ಎನ್ನುವ  ಆರೋಪದ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡರು ನೀಡಿದ್ದ ದೂರಿನ ಅನ್ವಯ ರಾಜ್ಯಸಭಾ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೇರಿ ನಾಲ್ವರ ವಿರುದ್ಧ FIR ದಾಖಲಾಗಿದೆ.ವಿಧಾನಸೌಧ ಪೊಲೀಸ್ ಠಾಣೆಯಲ್ಲಿ  ಕೇಸ್ ದಾಖಲಿಸಲಾಗಿದ್ದು ದೂರಿನ ಹಿನ್ನಲೆಯಲ್ಲಿ ಎಫ್ ಐ ಆರ್ ಲಾಡ್ಜ್ ಮಾಡಲಾಗಿದೆ. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ  ಪಕ್ಷೇತರ ಶಾಸಕರಿಗೆ ಬಿಜೆಪಿ ಮುಖಂಡರು ಅಡ್ಡಮತದಾನ ಮಾಡೊಕ್ಕೆ ಕೋಟ್ಯಾಂತರ ಆಮಿಷ ಒಡ್ಡಿದ್ದಾರೆ.ಆ ಪೈಕಿ  ಮಾಜಿ ಗೃಹ ಸಚಿವ ಎಂ.ಪಿ ಪ್ರಕಾಶ್ ಪುತ್ರಿ ಹಾಗೂ … Read more

ಅಂತೂ ಇಂತೂ ನಿಗಮ ಮಂಡಳಿಗಳ ಪಟ್ಟಿ ಪ್ರಕಟ: ಹ್ಯಾರೀಸ್ ಗೆ BDA, ಶ್ರೀನಿವಾಸ್ ಗೆ KSRTC, ಶಿವಣ್ಣಗೆ BMTC..ಸಂಗಮೇಶ್ ಗೆ ಲ್ಯಾಂಡ್ ಆರ್ಮಿ.

ಬೆಂಗಳೂರು: ಹಲವು ತಿಂಗಳ ಕಾತುರ ಹಾಗೂ ನಿರೀಕ್ಚೆಗೆ ಸರ್ಕಾರ ಕೊನೆಗೂ ತೆರೆ ಎಳೆದಿದೆ.32 ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಪ್ರಕಟಿಸಿದೆ.ಪ್ರಮುಖ ಆಯಕಟ್ಟಿನ ನಿಗಮಗಳ ಪಟ್ಟಿಯನ್ನು ಮೊದಲು ಪ್ರಕಟಿಸಿದ್ದು ಮಳವಳ್ಳಿ ಎಮ್ಮೆಲ್ಲೆ ನರೇಂದ್ರ ಸ್ವಾಮಿ,ಶಾಂತಿನಗರ ಎಮ್ಮೆಲ್ಲೆ ಎನ್ ಎ ಹ್ಯಾರೀಸ್, ತುಮಕೂರಿನ ಗುಬ್ಬಿ ವಿಧಾನಸಭಾ  ಕ್ಷೇತ್ರದ ಶಾಸಕ ಶ್ರೀನಿವಾಸ್ ಅವರಿಗೆ ಕೆಎಸ್ ಆರ್ ಟಿಸಿ, ಅರಸಿಕೆರೆ ಶಾಸಕ ಶಿವಲಿಂಗೆಗೌಡ ಅವರಿಗೆ ಗೃಹಮಂಡಳಿ, ಭದ್ರಾವತಿ ಎಮ್ಮೆಲ್ಲೆ ಸಂಗಮೇಶ್ ಅವರಿಗೆ ಕೆಆರ್ ಐಡಿಎಲ್ ನಿಗಮಗಳ ಅಧ್ಯಕ್ಷಸ್ಥಾನ ನೀಡಲಾಗಿದೆ. ಸರ್ಕಾರದ ಆದೇಶವನ್ನು … Read more

“POLITICAL 360” NEWS CHANNEL IN BIG CRISIS..!? “ಪುಟ್ಟಪ್ಪ”ನ ನಂಬಿ “ಕೇರ್‌ ಆಫ್‌ ಪುಟ್ಪಾತ್‌” ಆದ್ರಾ “ಪೊಲಿಟಿಕಲ್‌ 360” ಚಾನೆಲ್‌ ನ 250 ಸಿಬ್ಬಂದಿ..!?

ನಿರ್ದೇಶಕ ಸ್ಥಾನಕ್ಕೆ ಅಧೀಕೃತವಾಗಿ ರಾಜೀನಾಮೆ ಘೋಷಿಸಿದ “ಅರಮನೆ ಶಂಕರ್‌” ಬೆಂಗಳೂರು: ಇದು ನಿಜಕ್ಕೂ ಖಂಡನೀಯ…ಹಾಗೆಯೇ ಅಮಾನವೀಯ ಕೂಡ….ಯಾರೇ ಪತ್ರಕರ್ತರು ಕೆಲಸವಿಲ್ಲದೆ ಅತಂತ್ರರಾಗುವುದನ್ನು ನೋಡಿದಾಗ ಬೇಸರವಾಗುತ್ತದೆ.ಈ “ಫೀಲ್ಡ್‌” ಇಷ್ಟೊಂದು ಅಭದ್ರನಾ..? ಅಸುರಕ್ಷಿತನಾ..? ಅತಂತ್ರನಾ.? ಎಂಬ ನೋವುಂಟಾಗುತ್ತದೆ.ಪತ್ರಕರ್ತ ತನ್ನ ಸ್ವಯಂಕೃತಾಪರಾಧದಿಂದ ಅತಂತ್ರವಾಗೋದಕ್ಕೂ, ಅವರನ್ನು ನಂಬಿಸಿ ನಡು ದಾರೀಲಿ ಒಂಟಿಯಾಗಿಸೋದಕ್ಕೂ ಭಾರೀ ವ್ಯತ್ಯಾಸವಿದೆ.. .”ಪೊಲಿಟಿಕಲ್‌-360” ಎನ್ನುವ ಚಾನೆಲ್‌ನ ಕಥೆಯೂ ಸೇಮ್‌ ಟು ಸೇಮ್..ಕಣ್ಬಿಡುವ ಮುನ್ನವೇ ಅದರ ಕತ್ತುಹಿಸುಕುವ ಕೆಲಸ ಆ ಚಾನೆಲ್‌ ಮುನ್ನೆಡೆಸುತ್ತೇನೆ ಎಂದು ಹೇಳಿಕೊಂಡು, 250 ಕ್ಕೂ ಹೆಚ್ಚು ಸಿಬ್ಬಂದಿ … Read more