EXCLUSIVE…ಜನರ ದುಡ್ಡು…ಕಾಂಗ್ರೆಸ್ ಸರ್ಕಾರದ ಜಾತ್ರೆ…ಗ್ಯಾರಂಟಿ ಅನುಷ್ಟಾನ ಸಮಿತಿಯ ತಿಂಗಳ ಖರ್ಚು 17, 30,800 ರೂ..

ಬೆಂಗಳೂರು:ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು. ರಾಜ್ಯದ ಬೊಕ್ಕಸವನ್ನು ಬರಿದು ಮಾಡಿರುವುದಷ್ಟೇ ಅಲ್ಲ ಆರ್ಥಿಕತೆಯನ್ನು ದಿವಾಳಿ ಮಾಡಿವೆ ಎನ್ನುವ ಆಪಾದನೆ ವಿಪಕ್ಷಗಳಿಂದಷ್ಟೇ ಅಲ್ಲ, ಅದಕ್ಕಾಗಿ ತಮ್ಮ ಜೇಬಿನಿಂದ ಹಣ ಪಾವತಿಸುತ್ತಿರುವ ತೆರಿಗೆದಾರನಿಂದಲೂ ಕೇಳಿಬಂದಿದೆ.ಗ್ಯಾರಂಟಿಗೇ ಜನರ ತೆರಿಗೆ ಹಣದ ರೂಪದಲ್ಲಿ ನೂರಾರು ಕೋಟಿ ಖರ್ಚಾಗುತ್ತಿರುವ ವೇಳೆಯೇ ಮತ್ತೊಂದು ಸ್ಪೋಟಕ ಎನ್ನುವಂತ ಸುದ್ದಿ ಹೊರಬಿದ್ದಿದೆ.ಇದನ್ನು ಕೇಳಿ ತೆರಿಗೆದಾರರು ಮತ್ತಷ್ಟು ಶಾಕ್ ಆದರೂ ಆಶ್ವರ್ಯವಿಲ್ಲ.ಏಕೆಂದರೆ ಇದು ಗ್ಯಾರಂಟಿ ಯೊಜನೆ ಅನುಷ್ಟಾನಕ್ಕೇನೆ ಒಂದು ಕಮಿಟಿ..ಅದಕ್ಕೊಬ್ಬ ಅಧ್ಯಕ್ಷ..ಅದಕ್ಕೆ ಒಂದಷ್ಟು ಉಪಾಧ್ಯಕ್ಷರು,ಅವರ ಕೆಳಗೆ ಇನ್ನೊಂದಷ್ಟು ಜನ,….ಹೀಗೆ ಹನುಮನ … Read more

ಇದು ಇಡೀ ರಾಜ್ಯವೇ ಖುಷಿ ಪಡುವ ವಿಚಾರ…ದಿವ್ಯಾ ವಸಂತ ಈಗ “ಸಾಮ್ರಾಟ್‌” ಚಾನೆಲ್‌ “ಚೀಫ್‌-ಎಡಿಟರ್‌”..

ಬೆಂಗಳೂರು: ಇದು,ಇಡೀ ರಾಜ್ಯವೇ ಖುಷಿ ಪಡುವ ವಿಷಯ ಎಂದ್ಹೇಳಿ ರಾತ್ರೋರಾತ್ರಿ ಸುದ್ದಿಯಾದ ಹೆಣ್ಣುಮಗಳು ದಿವ್ಯಾವಸಂತ.ಆದ್ರೆ ನಂತರ ಮಾಡಿಕೊಂಡ ಯಡವಟ್ಟುಗಳು ಆಕೆಯನ್ನು ಯಾವ ಸ್ಥಿತಿಗೆ ತಂದುನಿಲ್ಲಿಸಿತು ಎನ್ನುವುದನ್ನು ತಿಳಿಸಿ ಹೇಳಬೇಕಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ನೆಗೆಟಿವ್‌ ಆಗಿ ಟ್ರೋಲ್‌ ಆಗಿ ಅದಕ್ಕೆ ಸ್ಪಷ್ಟನೆ ಕೊಡಲು ಕಣ್ಣೀರು ಹಾಕಿದ್ರೂ ಆಕೆಯನ್ನು ಒಪ್ಪಿಕೊಳ್ಳಲು ನಿರಾಕರಿಸುವಂಥ ಸ್ಥಿತಿ ನಿರ್ಮಾಣವಾಗಿದ್ದು ಕೂಡ ಸುಳ್ಳಲ್ಲ.ಸಾಮಾಜಿಕ ಜಾಲತಾಣಗಳಲ್ಲಿ  ಸಿಕ್ಕಾಪಟ್ಟೆ ಆಕ್ಟೀವ್‌ ಆಗಿದ್ದ ಆಕೆ ದಿಡೀರ್‌ ನಾಪತ್ತೆ ಆಗಿಬಿಟ್ಟಿದ್ಲು..ಕಮ್‌ ಬ್ಯಾಕ್‌ ಮಾಡೊಕ್ಕೆ ಒದ್ದಾಡುವಂತಾಗಿತ್ತು.ಇದರ ನಡುವೆಯೇ ಸ್ತ್ರೀ ಎನ್ನುವ ಮಹಿಳಾ … Read more

“ಭ್ರಷ್ಟ” ಡಿಡಿಪಿಐ ನಿಂಗರಾಜಪ್ಪಗೆ ಟ್ರಾನ್ಸ್‌ ಫರ್‌ ಶಿಕ್ಷೆ.. ಡಾ.ಯತೀಂದ್ರ ಅತ್ಯಾಪ್ತ ವಿವೇಕಾನಂದ ಅವರಿಗೆ ಆಯಕಟ್ಟಿನ ಹುದ್ದೆ ಭಾಗ್ಯ.!

ದಶಕಗಳಿಂದಲೂ ಕದಲದೆ ಕೂತಿರುವವರ ವರ್ಗಾವಣೆ ಯಾವಾಗ..!? ಬೆಂಗಳೂರು:ಶಾಲಾ ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆ ಪರ್ವ ಶುರುವಾಗಿದೆ.ಇದರ ಮೊದಲ ಪ್ರಯತ್ನ ಎನ್ನುವಂತೆ ಮೂವರು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.ಈ ಪೈಕಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಡಿಡಿಪಿಐ ವಿವೇಕಾನಂದ ಅವರನ್ನು ಬೆಂಗಳೂರಿಗೆ ವರ್ಗ ಮಾಡಲಾಗಿದೆ. ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರೆನ್ನಲಾದ ಮತ್ತೋರ್ವ ಡಿಡಿಪಿಐ ನಿಂಗರಾಜಪ್ಪ ಅವರನ್ನು ಚಿಕ್ಕಬಳ್ಳಾಪುರಕ್ಕೆ ವರ್ಗ ಮಾಡಲಾಗಿದೆ.ಮೇಲ್ಕಂಡ ವರ್ಗಾವಣೆಯಲ್ಲಿ ಡಾ,ಯತೀಂದ್ರ ಅವರ ಪಾತ್ರವೇ ಹೆಚ್ಚಾಗಿರುವ ಮಾತು ಕೇಳಿಬರುತ್ತಿದೆ. ಹೊಸ ಶೈಕ್ಷಣಿಕ … Read more

ಇದೆಂಥಾ ನ್ಯಾಯ.? ಸಂಬಂಧಿಗೇ ಸಾಲ.. ?! ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ವಿರುದ್ಧ “ಸ್ವಜನ ಪಕ್ಷಪಾತ” ಆರೋಪ..?!

ಇದೆಂಥಾ ನ್ಯಾಯ.? ಸಂಬಂಧಿಗೇ ಸಾಲ.. ?! ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ವಿರುದ್ಧ ಸ್ವಜನ ಪಕ್ಷಪಾತ ಆರೋಪ..?! ಸೀರೆ ವ್ಯಾಪಾರಕ್ಕೆ ಸಾಲ ನೀಡುವಂತೆ ನಿಗಮದ ಉಪನಿರ್ದೇಶಕರಿಂದ ಬ್ಯಾಂಕ್ ಮ್ಯಾನೇಜರ್ ಗೆ ಪತ್ರ…    ಬೆಂಗಳೂರು: ಇದು ಸತ್ಯವೇ ಆಗಿದ್ದಲ್ಲಿ,..ಅಲ್ಲದೇ ಹೀಗೋಂದು ಅವಕಾಶ ಕಾನೂನಿನ ಚೌಕಟ್ಟಿನಲ್ಲಿ ಇಲ್ಲದಿದ್ದರೆ ನಿಜಕ್ಕೂ ಇದಕ್ಕಿಂತ ಮುಜುಗರಕಾರಿ ಹಾಗೂ ಅಪಮಾನಕಾರಿ ಸಂಗತಿ ಮತ್ತೊಂದಿರಲಾರದು.?  ಏಕೆಂದರೆ ಎಲ್ಲೆಡೆ ಹರಿದಾಡುತ್ತಿರುವ ಆ ಒಂದು ದಾಖಲೆಯಲ್ಲಿರುವ ಅಂಶವೇ ಅಷ್ಟೊಂದು ಸ್ಪೋಟಕವಾಗಿದೆ. ರಾಜ್ಯ ಮಹಿಳಾ ಅಭಿವೃದ್ದಿ ನಿಗಮಕ್ಕೆ ಅಧ್ಯಕ್ಷರಾಗಿರುವಂಥವರ ವಿರುದ್ಧ … Read more

“ವೈದೇಹಿ ಆಸ್ಪತ್ರೆ” ಆಸ್ತಿ ತೆರಿಗೆ ಕಡತ ಗೌಪ್ಯ ಪ್ರಕರಣ: ಕಂದಾಯಾಧಿಕಾರಿ ಬಸವಾಚಾರಿಗಿಂತ ಮುನ್ನ ಕಡತ ಮುಚ್ಚಿಟ್ಟಿದ್ರಂತೆ AC ಬಸವರಾಜ ಮಗಿ..!?

2024ರ ಅಂತ್ಯದಲ್ಲಿ ಕಂದಾಯಾಧಿಕಾರಿಯಾಗಿ ಬಸವಾಚಾರಿ ಚಾರ್ಜ್ …ಅದಕ್ಕೂ  ಮುನ್ನ ಆ ಹುದ್ದೆಯಲ್ಲಿದ್ದವರು ಬಸವರಾಜ ಮಗಿ ಅಂತೆ..ತನಿಖೆಯಲ್ಲಿ ದೃಢ.. ಬೆಂಗಳೂರು:50 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡತವನ್ನು ಬಚ್ಚಿಟ್ಟು ಕರ್ತವ್ಯಲೋಪ ಎಸಗಿದ ವೈಟ್ ಫೀಲ್ಡ್ ಕಂದಾಯಾಧಿಕಾರಿ ಬಸವಾಚಾರಿ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಮನಿಷ್ ಮೌದ್ಗಿಲ್ ಅವರು ಪತ್ತೆ ಮಾಡಿದ ಈ ಪ್ರಕರಣದಲ್ಲಿ ಕಡತವನ್ನು ಬಚ್ಚಿಟ್ಟಿದ್ದು ಬಸವಾಚಾರಿ ಮಾತ್ರವಲ್ಲ ಅವರ ಸ್ಥಾನದಲ್ಲಿ ಹಿಂದೆ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಅಧಿಕಾರಿಯು ಭಾಗಿಯಾಗಿರುವುದು ಗೊತ್ತಾಗಿದೆ.ಈ ಹಿನ್ನಲೆಯಲ್ಲಿ ಬಸವಾಚಾರಿ … Read more

EXCLUSIVE: IAS ಮನಿಷ್ ಮೌದ್ಗಿಲ್ ಬಲೆಗೆ ಬಿದ್ದ BBMP ಬೃಹತ್ ತಿಮಿಂಗಲ rOಬಸವಾಚಾರಿ..

50 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ವೈದೇಹಿ ಆಸ್ಪತ್ರೆ ಕಡತವನ್ನೇ 1 ವರ್ಷದಿಂದ ಬಚ್ಚಿಟ್ಟುಕೊಂಡಿದ್ದ ಖತರ್ನಾಕ್ ಕಂದಾಯಾಧಿಕಾರಿ ಬಸವಾಚಾರಿ..!! ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬೊಕ್ಕಸ ತುಂಬೊಕ್ಕೆ ಕಂದಾಯ ವಿಭಾಗದ ವಿಶೇಷ ಆಯುಕ್ತ ಮನಿಷ್ ಮೌದ್ಗಿಲ್ ಅಹಿರ್ನಿಷಿ ಪ್ರಯತ್ನ ಮಾಡ್ತಿದಾರೆ.ಇದರಿಂದ ಪಾಲಿಕೆ ಬೊಕ್ಕಸಕ್ಕೆ ಸಾವಿರಾರು ಕೋಟಿ ಸಂದಾಯವಾಯಿತು. ಮನಿಷ್ ಮೌದ್ಗಿಲ್ ಅವರ ಕಾರ್ಯಕ್ಷಮತೆಯಿಂದ ಪಾಲಿಕೆ ಇತಿಹಾಸದಲ್ಲೇ ಸಂಗ್ರಹವಾಗದಷ್ಟು ಆಸ್ತಿ ತೆರಿಗೆ   ಬೊಕ್ಕಸ ಸೇರಿತು.ದಶಕಗಳಿಂದಲೂ ಎಮ್ಮೆ ಚರ್ಮ ದಂತಾಗಿದ್ದ ಕಂದಾಯ ವಿಭಾಗದ ಅಧಿಕಾರಿಗಳು ಮೈ ಕೊಡವಿ ನಿಲ್ಲುವಂತೆ … Read more

BBMP ನೌಕರರ ಸಂಘಕ್ಕೆ ಮಹತ್ವದ ಗೆಲುವು:ಅಧ್ಯಕ್ಷ ಅಮೃತರಾಜ್ ಗೆ 10 ಲಕ್ಷ ಮಾನನಷ್ಟ ನೀಡುವಂತೆ ನೌಕರ ಮಾಯಣ್ಣಗೆ ಆದೇಶ..

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರು ಮತ್ತು ಅಧಿಕಾರಿಗಳ ಕಲ್ಯಾಣ ಸಂಘಕ್ಕೆ ಮಹತ್ವದ ಗೆಲುವು ಲಭಿಸಿದೆ.ಕಾನೂನಾತ್ಮಕ ಹೋರಾಟಕ್ಕೆ ಜಯ ದೊರೆತಿದೆ.ಸಂಘದ ಅಧ್ಯಕ್ಷ ಅಮೃತರಾಜ್ ಹಾಗೂ ಅವರ ಸಂಘ ಮತ್ತು ಅಮೃತರಾಜ್ ಕುಟುಂಬದ ಬಗ್ಗೆ ಮಾನಹಾನಿಕರ ಹೇಳಿಕೆಗಳನ್ನು ನೀಡುತ್ತಿದ್ದರೆನ್ನಲಾದ ಬಿಬಿಎಂಪಿ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಮಾಯಣ್ಣ ಮತ್ತು ಅವರ ಬೆಂಬಲಿಗರು ಮಾನನಷ್ಟ ಸ್ವರೂಪದಲ್ಲಿ 10 ಲಕ್ಷ ರೂ ಪಾವತಿಸುವಂತೆ ಕೋರ್ಟ್ ಎಚ್ಚರಿಕೆ ನೀಡಿದೆ.ಜತೆಗೆ ಅಧ್ಯಕ್ಷ ಬಗ್ಗೆಯಾಗಲಿ, ಅವರ ಕುಟುಂಬದವರ ಬಗ್ಗೆಯಾಗಲಿ ಮತ್ತು ಸಂಘದ ಬಗ್ಗೆಯಾಗಲಿ … Read more

ಈ ಸುದ್ದಿ ನಮ್ಮಲ್ಲಿ ಮಾತ್ರ…POLITICAL EXCLUSIVE… ಕಾಂಗ್ರೆಸ್ ಗೆ ಗುಡ್ ಬೈ..! ಬಿಜೆಪಿಗೆ ಜೈ..ಜೈ.. ! 60 ಶಾಸಕರಿಗೆ ಗಾಳ….! 42 ಶಾಸಕರ ಲೀಸ್ಟ್ ರೆಡಿ..! ನವೆಂಬರ್ ಗೆ “ಡಿಕೆಶಿ” ಜಂಪಿಂಗ್ ಪಕ್ಕಾ..!

ಬೆಂಗಳೂರು:ಎಲ್ಲವೂ  ಅಂದಾಜಿಸುತ್ತಿರುವ  ರೀತಿಯೇ ಆದಲ್ಲಿ….ಹಾಕಲಾಗುತ್ತಿರುವ ಲೆಕ್ಕಾಚಾರಗಳ ಪ್ರಕಾರವೆ ನಡೆದರೆ…ರಾಜ್ಯ ರಾಜಕೀಯ ಇತಿಹಾಸದಲ್ಲಿ ಇದೊಂದು ದೊಡ್ಡ ಸ್ಪೋಟಕ ಸುದ್ದಿಯಾಗೋದರಲ್ಲಿ ಅನುಮಾನವೇ ಇಲ್ಲ..ಏಕಂದ್ರೆ ಸುದ್ದಿಯ ಸ್ವರೂಪವೇ ಅಷ್ಟೊಂದು ಅಚ್ಚರಿ-ಗಾಬರಿ-ಸಂಶಯದ ಅಂಶಗಳನ್ನು ಒಳಗೊಂಡಿದೆ.ರಾಜಕೀಯದಲ್ಲಿ ಏನ್ ಬೇಕಾದ್ರೂ ಆಗಬಹುದು..ಆಗಿದೆ ಕೂಡ ಎನ್ನುವಂತ ಸನ್ನಿವೇಶದಲ್ಲಿ ಅಂದಾಜಿಸುತ್ತಿರುವ ರೀತಿಯಲ್ಲಿಯೇ ಎಲ್ಲಾ ನಡೆದರೂ ಅಚ್ಚರಿ ಪಡಬೇಕಿಲ್ಲವೇನೋ..?   ರಾಜಕೀಯವೇ ಹೀಗೆ…ಹಾಗೆ…ಯಾವ್ ಸನ್ನಿವೇಶದಲ್ಲಿ ಏನ್ ಆಗ್ತದೆನ್ನುವುದನ್ನು ಊಹಿಸಲಿಕ್ಕೆ ಆಗೊಲ್ಲ..ಹೀಗೆಯೇ ಆಗುತ್ತೆ ಎಂದು ಖಚಿತವಾಗಿ ಹೇಳಲಿಕ್ಕೂ ಬರೊಲ್ಲ..ಇಲ್ಲಿ ಎಲ್ಲವೂ ಆಕ್ಷಿಡೆಂಡಲ್.. ಅನಿರೀಕ್ಷಿತ..ಆದರೆ ಆಗೋದೆಲ್ಲದರ ಹಿಂದೆ ಪೂರ್ವಭಾವಿ ಸಿದ್ಧತೆ ಇದ್ದೇ ಇರುತ್ತದೆ.ಅದು … Read more

“ಡಾಲಿ” ಧನಂಜಯ್ ಮದುವೆಯಲ್ಲಿ ಅಂಡರ್ ವರ್ಲ್ಡ್ ಡಾನ್ “ಸೈಲೆಂಟ್ ಸುನೀಲ” ಪ್ರತ್ಯಕ್ಷ

ಬೆಂಗಳೂರು: ಸೈಲೆಂಟ್ ಆಗಿದ್ದ ಸುನೀಲ ಮತ್ತೆ ಪ್ರತ್ಯಕ್ಷನಾಗಿದ್ದಾನೆ.. ನೇಪಥ್ಯಕ್ಕೆ ಸರಿದೇ ಹೋದನೆಂದುಕೊಂಡಿದ್ದ ಆತ ಮುನ್ನಲೆಗೆ ಬಂದಿದ್ದೇನೆ. ಅಂದ್ಹಾಗೆ ಆತ ದಿಢೀರ್ ಪ್ರತ್ಯಕ್ಷನಾಗಿ ಅಚ್ಚರಿ ಮೂಡಿಸಿದ್ದು, ಜತೆಗೆ ಗಾಬರಿ ಸೃಷ್ಟಿಗೂ ಕಾರಣವಾಗಿದ್ದು ಕನ್ನಡದ ಸಿನೆಮಾ ಸ್ಟಾರ್ ಡಾಲಿ ಧನಂಜಯ್ ಅವರ ಮದುವೆಯಲ್ಲಿ.. ಯಾರೂ ಎಕ್ಸ್ ಪೆಕ್ಟ್ ಮಾಡದ ಹೊತ್ತಲ್ಲಿ ಮದುವೆ ಮನೆಯಲ್ಲಿ ಪ್ರತ್ತಕ್ಷನಾದ ಸುನೀಲ ಎಲ್ಲರನ್ನೂ ತಬ್ಬಿಬ್ಬುಗೊಳಿಸಿಬಿಟ್ಟಿದ್ದು ಮಾತ್ರ ಸುಳ್ಳಲ್ಲ. ಭೂಗತ ಪಾತಕಿ, ಬೆಂಗಳೂರು ಅಂಡರ್ ವರ್ಲ್ಡ್ ನ ಡಾನ್ ಸೈಲೆಂಟ್ ಸುನೀಲ ಸುಮ್ಮನಿದ್ರು ಸುದ್ದಿನೇ..ಸ್ವಲ್ಪ ಕೊಸರಾಡಿದ್ರೂ ಸುದ್ದಿನೇ..ಕಳೆದ … Read more

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ತಾಂತ್ರಿಕ ಸಲಹೆಗಾರರ ನೇಮಕವೇ ನಿಯಮಬಾಹಿರನಾ..?!

**ಡಾ.ಪಿ ನಿರಂಜನ್ ಅವರ ನೇಮಿಸಿಕೊಳ್ಳಲಿಕ್ಕೆ ಅಧ್ಯಕ್ಷ ನರೇಂದ್ರಸ್ವಾಮಿ  ನಿಯಮಗಳನ್ನೆಲ್ಲಾ ಗಾಳಿಗೆ ತೂರಿದ್ದೇಕೆ..?! **ಮಂಡಳಿಯಲ್ಲೇ ಅರ್ಹರಿರುವಾಗ ನಿವೃತ್ತರನ್ನೇ ನೇಮಿಸಿಕೊಳ್ಳುವ ಅಗತ್ಯವೇನಿದೆ..?! **ಮಂಡಳಿ ಸಭೆಯೇ ನಡೆದಿಲ್ಲ,ಅದ್ಹೇಗೆ ಡಾ.ಪಿ ನಿರಂಜನ್ ಅವರ ನೇಮಕಕ್ಕೆ ಅಂಕಿತ ಸಿಕ್ತು..!? **ಸರ್ಕಾರದ ಗಮನಕ್ಕೆ ತಾರದೆ ನೇಮಕ ನಡೆದಿದ್ದೇಗೆ..? ಸದಸ್ಯ ಕಾರ್ಯದರ್ಶಿ ಲಿಂಗರಾಜ್ ಸುಳ್ಳು ಹೇಳುತ್ತಿದ್ದಾರಾ..?! ಬೆಂಗಳೂರು:ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ(KARNATAKA POLLUTION CONTROLE BOARD) ಗೆ ನೂತನ ಸಾರಥಿಯಾಗಿರುವ ಮಳವಳ್ಳಿ ಶಾಸಕ ಎಂ.ನರೇಂದ್ರ ಸ್ವಾಮಿ(CHAIRMAN NARENDRASWAMY) ಅವಸರವಸರವಾಗಿ ತೆಗೆದುಕೊಳ್ಳುತ್ತಿರುವ ನಿರ್ದಾರಗಳು ಅವರಿಗೇನೆ ಮುಳುವಾಗುವ ಸಾಧ್ಯತೆಗಳಿವೆ ಎನ್ನಿಸುತ್ತೆ.ಈಗಾಗಲೇ … Read more