advertise here

Search

ಮಹಿಳಾ ದಿನಾಚರಣೆಯಂದು ಮಹಿಳಾ ಸಮುದಾಯಕ್ಕೆ ಗಿಪ್ಟ್.. ರಾಜ್ಯಸಭೆಗೆ ಸುಧಾಮೂರ್ತಿ ನೇಮಕ

ಬೆಂಗಳೂರು: ಮಹಿಳಾ ದಿನಾಚರಣೆಯಂದೇ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಮಹಿಳಾ ಸಮುದಾಯಕ್ಕೆ ಹೊಸ ಗಿಫ್ಟ್ ನೀಡಿದ್ದಾರೆ.ಕರ್ನಾಟಕದ ಮಹಿಳಾ ಸಮುದಾಯದ ಐಕಾನ್ ( ಮಾದರಿ,ಆದರ್ಶ) ಎನಿಸಿಕೊಂಡಿರುವ ಇನ್ಫೋಸಿಸ್ ಪ್ರತಿಷ್ಟಾನದ ಅಧ್ಯಕ್ಷೆ ಹಾಗೂ ಲೇಖಕಿ,ಸಮಾಜಸುಧಾರಕಿ ಸುಧಾಮೂರ್ತಿ ಅವರನ್ನು  ರಾಷ್ಟ್ರಪ್ರತಿ ದ್ರೌಪತಿ ಮುರ್ಮು ನಾಮನಿರ್ದೆಶಕ ಮಾಡಿದ್ದಾರೆ.ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು    ತಮ್ಮ ಎಕ್ಸ್ ಅಕೌಂಟ್ ನಲ್ಲಿ ಪ್ರಕಟಿಸಿದ್ದಾರೆ. ರಾ್ಜ್ಯದ ಜನತೆ ಮಟ್ಟಿಗೆ ತೀವ್ರ ಅಶ್ಚರ್ಯಕರ ಹಾಗೂ ಸಂತೋಷದಾಯಕ ಬೆಳವಣಿಗೆ ಎಂದೇ ಕರೆಯಿಸಿಕೊಂಡಿರುವ ಸುಧಾಮೂರ್ತಿ ಅವರ ರಾಜ್ಯಸಭೆಗೆ ನಾಮನಿರ್ದೇಶನ … Read more

“ಪ್ರಯಾಣಿಕ”ನ ಸಾವಿಗೆ ಆ ಇಬ್ರು “ಡ್ರೈವರ್ಸ್” ಗಳು ಮಾತ್ರ “ಕಾರಣ”ನಾ.?! ಇದ್ರಲ್ಲಿ “ಅಧಿಕಾರಿ”ಗಳ “ಹೊಣೆ”ನೇ ಇಲ್ವಾ..!?

ಅಪಘಾತದಲ್ಲಿ ಕೈ ಕಳೆದುಕೊಂಡು, ತೀವ್ರರಕ್ತಸ್ರಾವದಿಂದ ಮೃತಪಟ್ಟವನ ಸಾವಿಗೆ, ಶಿವಮೊಗ್ಗ ವಿಭಾಗದ ವಿಜಯ್ ಕುಮಾರ್ , ದಿನೇಶ್ ಕುಮಾರ್  “ನಿರ್ಲಕ್ಷ್ಯ”ವೂ ಕಾರಣವಲ್ವೇ..?! ಬೆಂಗಳೂರು/ಶಿವಮೊಗ್ಗ:ಇದಕ್ಕಿಂತ ದೊಡ್ಡ ದುರಂತ ಹಾಗೂ ವಿಪರ್ಯಾಸ ಇನ್ನೊಂದಿರಲಾರದೇನೋ..? ಅಪಘಾತದಲ್ಲಿ ಪ್ರಯಾಣಿಕನೊಬ್ಬ ಕೈ ಕಳೆದುಕೊಂಡು ಚಿಕಿತ್ಸೆ ಕೊರತೆಯಿಂದ ಪ್ರಾಣಬಿಟ್ಟ ಕಾರಣಕ್ಕೆ ಚಾಲಕರಿಬ್ಬರು ಅಮಾನತ್ತಾಗಿದ್ದಾರೆ.ಆದರೆ ಪ್ರಯಾಣಿಕನ ಜೀವ ಹೋಗ್ಲಿಕ್ಕೆ ನೈತಿಕವಾಗಿ ಕಾರಣಕರ್ತರಾದ ಅಧಿಕಾರಿಗಳು ಮಾತ್ರ ಆರಾಮಾಗಿ ಅಡ್ಡಾಡಿಕೊಂಡಿದ್ದಾರೆ.ದುರಂತ ಸಂಭವಿಸಿದಾಗ ಸಂತ್ರಸ್ಥರ ಕ್ಷೇಮ-ಕಲ್ಯಾಣಗಳೆರೆ ಡೂ ಅಧಿಕಾರಿಗಳ ಹೊಣೆಯಾಗಿರುತ್ತೆಂದು ಗೊತ್ತಿದ್ರೂ ಸಾರಿಗೆ ಆಡಳಿತ ಮಾತ್ರ, ಅಧಿಕಾರಿಗಳು ಮಾಡಿದ್ದೇ ಸರಿ ಎನ್ನುವಂತೆ ಸುಮ್ಮನಿರುವುದು … Read more

“ಪ್ರಾಣ ಬಿಟ್ಟೇವು…ಮುಷ್ಕರ ಕೈ ಬಿಡೆವು” ಇಂದಿನಿಂದ ಸಾರಿಗೆ ಸಿಬ್ಬಂದಿಯಿಂದ “ಅಮರಣಾಂತ ಉಪವಾಸ ಸತ್ಯಾಗ್ರಹ”…

ಬೆಂಗಳೂರು: ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದೆರೆಡು ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಸಾರಿಗೆ ಸಿಬ್ಬಂದಿಗೆ ನಿನ್ನೆ ಆದ ಕಹಿ ಅನುಭವ ಅಕ್ಷರಶಃ ರೊಚ್ಚಿಗೆಬ್ಬಿಸಿದೆ.ಈ ಹಿನ್ನಲೆಯಲ್ಲಿ ಇಂದಿನಿಂದ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗುವಂತೆ ಮಾಡಿದೆ.ಸಾರಿಗೆ ಕೂಟ ಸೇರಿದಂತೆ ಸಮಾನಮನಸ್ಕ ಸಂಘಟನೆಗಳು ಹೋರಾಟಕ್ಕೆ ಕೈ ಜೋಡಿಸಿವೆ.ಇದರಿಂದ ಹೋರಾಟ ಮತ್ತಷ್ಟು ಉಗ್ರಸ್ವರೂಪ ಪಡೆಯುವ ಸಾಧ್ಯತೆಗಳಿವೆ. ಫ್ರೀಡಂ ಪಾರ್ಕ್‌ ನಲ್ಲಿ ಕಳೆದೆರೆಡು ದಿನಗಳಿಂದ ಸಾರಿಗೆ ಸಿಬ್ಬಂದಿ ತಮ್ಮ ಅನೇಕ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿತ್ತು.ನಿನ್ನೆ ಇದ್ದಕ್ಕಿದ್ದಂತೆ ಆಗಮಿಸಿದ ಉಪ್ಪಾರ ಪೇಟೆ ಪೊಲೀಸರು … Read more

BBMP ಅಕ್ರಮ ಖಾತಾ ಹಗರಣಕ್ಕೆ ಮೆಗಾ ಟ್ವಿಸ್ಟ್…!! ಸಸ್ಪೆಂಡ್..ಇಬ್ಬರ ಅರೆಸ್ಟ್..?!

ಬೆಂಗಳೂರು: ಅಕ್ರಮ ಖಾತಾ ಪ್ರಕರಣದಲ್ಲಿ ಬಿಬಿಎಂಪಿಯ ಇಬ್ಬರು ಅಧಿಕಾರಿಗಳನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ್ನ್ನುವ ಸ್ಪೋಟಕ ಸುದ್ದಿ ಕೇಳಿಬರುತ್ತಿದೆ. ಕೆಂಗೇರಿ ಉಪವಿಭಾಗದ ಕಂದಾಯ ವಿಭಾಗದ ಇಬ್ಬರು ಅಧಿಕಾರಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾ ರೆನ್ನುವ ಪ್ರಾಥಮಿಕ ಮಾಹಿತಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ  ಲಭ್ಯವಾಗಿದೆ. ಅಕ್ರಮ ಖಾತೆ ಹಗರಣ ನಡೆಯುತ್ತಿರುವು ದನ್ನು ಬಯಲಿಗೆಳೆದು ಅದರ ದಾಖಲೆಗಳು ಸಾರ್ವಜನಿಕವಾಗುವಂತೆ ಮಾಡಿದರೆನ್ನುವ ಆಪಾದನೆ ಹಿನ್ನಲೆಯ ಲ್ಲಿ ಕೆಂಗಣ್ಣಿಗೆ ಗುರಿಯಾಗಿದ್ದ ಸಿಬ್ಬಂದಿ ಮಧು ಎನ್ನುವವರು ನೀಡಿದ ದೂರಿನ ಮೇರೆಗೆ ಇಬ್ಬರು ಅಧಿಕಾರಿಗಳನ್ನು … Read more

ಯಶವಂತಪುರ ಬೈ ಎಲೆಕ್ಷನ್‌ ಕನ್ಫರ್ಮ್….? S.T.ಸೋಮಶೇಖರ್‌ ಪಕ್ಕಾ..ಆದ್ರೆ ಎದುರಾಳಿ ಮೈತ್ರಿ ಅಭ್ಯರ್ಥಿ ಯಾರು…? ಜವರಾಯಿಗೌಡ/ನಿಖಿಲ್‌ ಕುಮಾರಸ್ವಾಮಿನಾ..?!

*3 ಬಾರಿ ಸೋತರೂ ಮತ್ತೊಂದು ಗೆಲುವಿನ ಅವಕಾಶದ ನಿರೀಕ್ಷೆಯಲ್ಲಿ ಜವರಾಯಿಗೌಡ.. *ಜವರಾಯಿಗೌಡರನ್ನೇ ಅಭ್ಯರ್ಥಿಯನ್ನಾಗಿಸಿ ದಳಪತಿಗಳು ಕೊಟ್ಟ ಮಾತನ್ನು ಉಳಿಸಿಕೊಳ್ತಾರಾ..? *ಜವರಾಯಿಗೌಡರಿಗಿಂತ ಸಮರ್ಥ ಅಭ್ಯರ್ಥಿ ಹುಡುಕಾಟದಲ್ಲಿದ್ದೇವೆ ಎಂದು ಶಾಕ್‌ ಕೊಡ್ತಾರಾ..? *ಬಿಜೆಪಿ ಜವರಾಯಿಗೌಡ ಅವರನ್ನೇ ತಮ್ಮ ಮೈತ್ರಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳುತ್ತಾ..? *ದಳಪತಿಗಳು ಕೈ ಕೊಟ್ರ ಜವರಾಯಿಗೌಡ ನಿಲುವೇನು..? ಬೇರೆ ಅಭ್ಯರ್ಥಿಯನ್ನು ಒಪ್ಪಿಕೊಳ್ತಾರಾ..? ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ಶಾಸಕರು ಪಕ್ಷದ ಸಿದ್ದಾಂತಕ್ಕೆ ವಿರುದ್ಧವಾಗಿ ಮತ ಚಲಾಯಿಸುತ್ತಿದ್ದಂತೆ ಆಯಾ ಕ್ಷೇತ್ರ ಗಳಲ್ಲಿ ಬೈ ಎಲೆಕ್ಷನ್ ಆಗೋದು ಪಕ್ಕಾ … Read more

ದಿ-ಫೈಲ್ ಮಹಾಂತೇಶ್ ವಿರುದ್ದ ಬೇಹುಗಾರಿಕೆ…!?

ದಿಕ್ಕಾರವಿರಲಿ, ಸತ್ಯದ ಉಸಿರು ನಿಲ್ಲಿಸುವ ಆಳುವವರ  ದುಸ್ಸಾಹಸಕ್ಕೆ..! ಕುಲಗೆಟ್ಟು ಹೋಗಿರುವ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಪತ್ರಿಕೋದ್ಯಮವೂ ಬಹುತೇಕ ಕಲುಷಿತಗೊಂಡಿದೆ.ಸಿದ್ದಾಂತ-ಆದರ್ಶ-ವೃತ್ತಿನಿಷ್ಟೆ-ರಾಜಿಯಾಗದ ಮನಸ್ಥಿತಿ-ನಿಷ್ಟವಾದುದನ್ನ ನಿಷ್ಟೂರವಾಗಿ ಹೇಳುವ ಜಾಯಮಾನವನ್ನು ಶೇಕಡಾ 99 ರಷ್ಟು ಮಾದ್ಯಮಗಳು ಕಳಕೊಂಡುಬಿಟ್ಟಿವೆ ಎನ್ನುವುದು ದುರಂತವಾದ್ರೂ ಒಪ್ಪಿಕೊಳ್ಳಲೇಬೇಕಾದ ಸಂಗತಿ.ಇದರ ನಡುವೆಯೂ ಒಂದಷ್ಟು ವೃತ್ತಿಪಾವಿತ್ರ್ಯತೆಯನ್ನು ಮಾದ್ಯಮ ಉಳಿಸಿಕೊಂಡಿದೆ ಎನ್ನುವುದಾದ್ರೆ ಬೆರಳೆಣಿಕೆಯ ವಸ್ತುನಿಷ್ಟ ಪತ್ರಕರ್ತರೇ ಕಾರಣ..ಅಂಥಾ ಕೆಲವೇ ಕೆಲವು ಪತ್ರಕರ್ತರಲ್ಲಿ ಜಿ.ಮಹಾಂತೇಶ್ ಒಬ್ಬರು. ಅವರಲ್ಲಿ ಯಾವ ತರಹದ ವೃತ್ತಿನಿಷ್ಟೆಸತ್ಯಸಂದತೆಯಿನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಸ್ಪೋಟಕ ಸುದ್ದಿಗಳನ್ನೇ ಪ್ರಧಾನವಾಗಿಟ್ಟುಕೊಂಡು ಕೆಲಸ ಮಾಡುತ್ತಿರುವ ದಿ ಫೈಲ್ … Read more

EXCLUSIVE… BBMP ಯಿಂದ “ಬೀದಿ ನಾಯಿ ಕಲ್ಯಾಣ” ವೋ..!! “ಲೂಟಿ”ಯೋ..?! 1 ಮೈಕ್ರೋಚಿಪ್-195 ರೂ: 1,84,671 ಬೀದಿನಾಯಿ: 3 ಕೋಟಿ 81 ಲಕ್ಷ ವೆಚ್ಚ.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಂಗಳದಲ್ಲಿ ಹಗರಣದ ಸ್ವರೂಪ ಪಡೆಯುವ ಶಂಕೆ ಮೂಡಿಸಿರುವ  ಮತ್ತೊಂದು ಸುದ್ದಿ ಸದ್ದು ಮಾಡಿದೆ. ಬೀದಿನಾಯಿಗಳಿಗೆ ಅಳವಡಿಸಲು ಹೊರಟಿರುವ ಮೈಕ್ರೋಚಿಪ್ ಈಗ ಹಗರಣದ ಸ್ವರೂಪ ಪಡೆದುಕೊಳ್ಳುತ್ತಿದೆ.ಅನಗತ್ಯ ಹಾಗೂ ಅಪಾಯಕಾರಿಯಾಗಿರುವ ಮೈಕ್ರೋಚಿಪ್ ಅಳವಡಿಕೆ ನಿಯಮಬಾಹಿರ ಕೃತ್ಯ ಎಂದು ಪ್ರಾಣಿಪ್ರಿಯರು ಈಗ ವರಾತ ತೆಗೆದಿದ್ದಾರೆ. ನಾಯಿಗಳ ಸೆನ್ಸಸ್ ನಲ್ಲಿ ನಡೆಯಿತೆನ್ನಲಾದ ಹಗರಣದ ನಂತರ ಪಶುಪಾಲನಾ ಇಲಾಖೆಯಲ್ಲಿ ನಡೆಯೊಕ್ಕೆ ಹೊರಟಿರುವ ಹಗರಣ ಇದೆನ್ನಲಾಗಿದೆ. ಬೃಹತ್ತಾಗಿ ಬೆಳೆದಿರುವ ಬೆಂಗಳೂರಿನಲ್ಲಿ  ಬೀದಿನಾಯಿಗಳು ಎಷ್ಟಿವೆ ಎಂದು ಕೇಳಿದ್ರೆ ಕರಾರುವಕ್ಕಾಗಿ ಹೇಳೊಕ್ಕೆ … Read more

ಸಿಂ ಅಂಕಲ್, ನಮ್ಗೆ ಶಾಲೆಗೆ ಹೋಗ್ಲಿಕ್ಕೆ ಬಸ್ ಬಿಡಿಸಿ.ಶಾಲಾ ಬಾಲಕಿಯಿಂದ ಮುಖ್ಯಮಂತ್ರಿಗೆ ಭಾವನಾತ್ಮಕ ಮನವಿ

 ಬೆಂಗಳೂರಿನ ಹೊರವಲಯದಿಂದ ಅದೆಷ್ಟೋ ಪ್ರದೇಶಗಳಿಗೆ ಇನ್ನೂ BMTC ಬಸ್ ಇಲ್ಲವಂತೆ..? ಬೆಂಗಳೂರು: ಇದು ನಿಜಕ್ಕೂ ಮನಕಲಕುವ ಸುದ್ದಿ.ಓದುವ ಹಂಬಲ ಬೆಟ್ಟದಷ್ಟಿದ್ದರೂ ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲದೆ ಪರಿತಪಿಸುತ್ತಿರುವ ವಿದ್ಯಾರ್ಥಿನಿಯೋರ್ವಳು ತನ್ನಂತದ್ದೇ ಸಮಸ್ಯೆ ಎದುರಿಸುತ್ತಿರುವ ಹತ್ತಾರು ಮಕ್ಕಳ ಸಮಸ್ಯೆ ಬಗೆಹರಿಸಿಕೊಡಿ ಎಂದು ಮಾನ್ಯ ಮುಖ್ಯಮಂತ್ರಿ, ಬಿಎಂಟಿಸಿ ಎಂಡಿಗೆ ಬರೆದಿರುವ ವಿದ್ಯಾರ್ಥಿ ಕಾಳಜಿಯ ಪತ್ರ ಬರೆದಿರುವ ಸ್ಟೋರಿ. ಇದು ಏಕೆ ಬಹುಮುಖ್ಯ ಎನಿಸುತ್ತೆ ಎಂದ್ರೆ ಬಿಎಂಟಿಸಿ ಬಸ್ ಸೌಕರ್ಯ ಇದ್ದ ಹೊರತಾಗ್ಯೂ ಈ ಭಾಗಕ್ಕೆ ಮಾತ್ರ ಬಸ್ ಸೌಕರ್ಯ ಕಲ್ಪಿಸಲಾಗಿಲ್ಲ. ವಿದ್ಯಾರ್ಥಿಗಳಿಗೆ … Read more

ಈ ಕನ್ನಡ ವಿರೋಧಿ IFS ರಮೇಶ್ ಕುಮಾರ್ ಬಗ್ಗೆ ಸರ್ಕಾರಕ್ಕೇಕೆ “ಮಮಕಾರ”..! “ಭ್ರಷ್ಟಾಚಾರ” ಆರೋಪವಿದ್ದಾಗ್ಯೂ ರಕ್ಷಿಸುತ್ತಿರೋದು ಯಾರು “ಸಚಿವ”ರೇ..?

ಬೆಂಗಳೂರು:ಅರಣ್ಯ ಇಲಾಖೆ ಇನ್ನೂ ಈ ಅಧಿಕಾರಿಯನ್ನು ಅದ್ಹೇಕೆ ಉಳಿಸಿಕೊಂಡಿದೆಯೋ ಅರ್ಥವಾಗುತ್ತಿಲ್ಲ.ಇಷ್ಟೊಂದು ಆರೋಪಗಳು ಬಂದ ಮೇಲೂ ಮುಜುಗರದಿಂದ ತಪ್ಪಿಸಿಕೊಳ್ಳಲಿಕ್ಕಾದ್ರೂ ಈ ಅಧಿಕಾರಿಯ ವಿರುದ್ಧ ಕ್ರಮಕ್ಕೋ..ತನಿಖೆಗೋ ಆದೇಶ ಕೊಡಬೇಕಿತ್ತು.ಆದರೆ ಅದ್ಯಾವುದನ್ನೂ ಮಾಡದೆ ದುಂಡಾವರ್ತನೆ ಮೆರೆಯೊಕ್ಕೆ ಅವಕಾಶ ಮಾಡಿಕೊಟ್ಟಿರುವುದು ಅನೇಕ ಗುಮಾನಿ ಸೃಷ್ಟಿಸಿದೆ. ಅಂದ್ಹಾಗೆ ರಮೇಶ್ ಕುಮಾರ್ ಐಎಫ್ ಎಸ್..ಬಂಡಿಪುರ ಅರಣ್ಯ ವಲಯದ ಮುಖ್ಯ ಅರಣ್ಯಾಧಿಕಾರಿ…ಈ ಅಧಿಕಾರಿ ವಿರುದ್ಧ ಕೇಳಿಬಂದ ಆರೋಪ ಒಂದಾ ಎರಡಾ..? ಅಧಿಕಾರ ದುರ್ಬಳಕೆ,ವ್ಯಾಪಕ  ಭ್ರಷ್ಟಾಚಾರ, ಅನುದಾನ ದುರ್ವಿನಿಯೋಗ ,ಕರ್ತವ್ಯಲೋಪ…ಎಲ್ಲಕ್ಕಿಂತ ಹೆಚ್ಚಾಗಿ ಸಿಎಟಿಯಿಂದ ವರ್ಗಾವಣೆಗೆ ಆದೇಶ ಬಂದಾಗ್ಯೂ ಲಾಭಿ … Read more

ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ “ಗೌಡ್ತಿ”ಯರು ಗರಂ: ಮಹಿಳಾ ಆಯೋಗಕ್ಕೆ ದೂರು

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಚಾಲೆಂಜ್ ಮೇಲೆ ಚಾಲೆಂಜ್ ಎದುರಾಗುತ್ತಿದೆ.ಒಂದ್ ಮುಗೀತು ಎನ್ನುವಷ್ಟರಲ್ಲಿ ಮತ್ತೊಂದು ಟೆನ್ಷನ್ ಶುರುವಾಗ್ತಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಅವರಿಗೆ ತಗಡು ಎಂದು ಸಂಬೋಧಿಸಿದ್ದಕ್ಕೆ ಒಕ್ಕಲಿಗ ಸಮುದಾಯ ತಿರುಗಿಬಿದ್ದ ಘಟನೆ ಬೆನ್ನಲ್ಲೇ  ಇದೀಗ ಗೌಡ್ತಿಯರು ಮಹಿಳೆಯರ ಬಗ್ಗೆ ದರ್ಶನ್ ತೀರಾ ಲಘುವಾಗಿ ಮಾತನಾಡಿದ್ದಾರೆ ಎಂದು ಆಪಾದಿಸಿದ್ದಾರೆ.ದರ್ಶನ್ ವಿರುದ್ಧ ಕಠಿಣ ಕ್ರಮ ಜಾರಿಯಾಗಬೇಕು ಎಂದು ಒತ್ತಾಯಿಸಿ  ಮಹಿಳಾ ಆಯೋಗಕ್ಕೆ  ದೂರು ಸಲ್ಲಿಕೆಯಾಗಿದೆ. ನಟ ದರ್ಶನ್ ಗೆ ಮತ್ತೆ ಹೊಸ ಸಂಕಷ್ಟ ಎದುರಾಗಿದೆ.ಸುಮ್ಮನಿರದೆ ಇರುವೆ … Read more