ಎಲ್ಲಿಯ “ವಿಜಯ್”…! ಎಲ್ಲಿಯ “ಉಪೇಂದ್ರ”..! ಇಬ್ಬರ  ಹೋಲಿಕೆ ಸರಿನಾ..?

ಪಕ್ಷ ಕಟ್ಟಿದ ದಿನದಿಂದಲೇ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತಂದ ವಿಜಯ್‌ ಜತೆ, ಮನೆಯಲ್ಲೇ ಕೂತು ಬದಲಾವಣೆ ಬಗ್ಗೆ ಕಂಠಶೋಷಣೆ ಮಾಡಿಕೊಳ್ಳುವ  ಉಪೇಂದ್ರ ಹೋಲಿಕೆ ಸರಿನಾ..! ತಮಿಳ್ನಾಡು(tamilnadu) ರಾಜಕೀಯದಲ್ಲಿ ಬಹುದೊಡ್ಡ ಕ್ರಾಂತಿ ನಡೆದು ಸಿನೆಮಾ ನಟ(cinema star) ವಿಜಯ್‌ (vijay)  ಸಿಎಂ ಆಗುತ್ತಿದ್ದಂತೆ ನಮ್ಮ ಕರ್ನಾಟಕದಲ್ಲಿ  ಮಾದ್ಯಮಗಳಿಗೆ (karnataka medais)ಅದ್ಹೇಕೆ, ರಿಯಲ್‌ ಸ್ಟಾರ್‌ ಹಾಗೂ ಬುದ್ದಿವಂತ ನಟ ಉಪೇಂದ್ರ (real star upendra) ಅವರ ಬೆನ್ನು ಹತ್ತಿ ಕಾಡುವ ಕೆಟ್ಟ ಛಟ-ಚಾಳಿ ಮೈ ಗಂಟಿದೆಯೋ ಗೊತ್ತಾಗ್ತಿಲ್ಲ … Read more

ತಿಂಗಳೆಲ್ಲಾ ದುಡಿದ್ರೂ ಸುದ್ದಿಮನೆ ಮಿತ್ರರಿಗೇಕಿಲ್ಲ “ಸಂಪೂರ್ಣ” ಸಂಬಳ..!?

ಇದು… ಕನ್ನಡ ಸುದ್ದಿ ಚಾನೆಲ್‌ ಗಳ ಸಾಲಿಗೆ ಮತ್ತೊಂದಾಗಿ ಸೇರ್ಪಡೆಯಾಗುವ ಸಾಧ್ಯತೆ ಸೃಷ್ಟಿಸಿದ್ದ ಡಿಜಿಟಲ್‌ ಚಾನೆಲ್‌ ವೊಂದರ ಬೆಳವಣಿಗೆ ದೃಷ್ಟಿಯಿಂದ  ನಿಜಕ್ಕೂ ಒಳ್ಳೆಯ  ಸುದ್ದಿಯಲ್ಲ.. ಏಕೆಂದರೆ ಕೆಲವು ವಿಶ್ವಸನೀಯ ಮೂಲಗಳ ಪ್ರಕಾರ, ಅಲ್ಲಿ ದುಡಿಯುತ್ತಿರುವ ಕೆಲವು ಮಾದ್ಯಮ ಸಿಬ್ಬಂದಿಗೆ ವೇತನವನ್ನೇ ನೀಡಿಲ್ಲ ಎನ್ನುವ ಮಾಹಿತಿ  ಸುದ್ದಿಜಗತ್ತಿನಲ್ಲಿ ಪಸರ್‌ ಆಗಿದೆ. ಆರ್ಥಿಕವಾಗಿ ಆ ಡಿಜಿಟಲ್‌ ಚಾನೆಲ್‌ ನ ಸ್ತಿತಿ ಚೆನ್ನಾಗಿದ್ದರೂ ಸಿಬ್ಬಂದಿಯನ್ನು ಮಾತ್ರ ಸಂಬಳ ಕೊಡದೆ ಸತಾಯಿಸಲಾಗುತ್ತಿದೆಯಂತೆ. ಒಂದಷ್ಟು ಜನರಿಗೆ ಸಂಬಳ ಕೊಟ್ಟು ಇನ್ನೊಂದಷ್ಟು ಸಿಬ್ಬಂದಿ ವೇತನವನ್ನು ತಡೆಹಿಡಿದಿಟ್ಟುಕೊಳ್ಳಲಾಗಿದೆಯಂತೆ. … Read more

ನಾಳೆ ಪತ್ರಕರ್ತ ಪುಟ್ಟಪ್ಪ ಸಾರಥ್ಯದ “ಪೊಲಿಟಿಕಲ್-360” ಲಾಂಚ್

ಮೈಸೂರಿನ ಪತ್ರಕರ್ತ ಮಿತ್ರ ಪುಟ್ಟಪ್ಪ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾನೆ.ಮೊದಲು ಆತನಿಗೊಂದು ಆಲ್ ದಿ ಬೆಸ್ಟ್…ಅಂದ್ಹಾಗೆ ಪೊಲಿಟಿಕಲ್ 360 ಎನ್ನುವ ಡಿಜಿಟಲ್ ಫ್ಲಾಟ್ ಫಾರ್ಮ್ ನ್ನೇ ಚಾನೆಲ್ ಮಾಡ್ಲಿಕ್ಕೆ ಹೋಗಿ ತನ್ನದಲ್ಲದ ತಪ್ಪಿಗೆ ವಿರೋಧ-ವಿವಾದ ಎಲ್ಲವನ್ನು ಮೈಮೇಲೆ ಎಳೆದುಕೊಂಡು, ಬೈಗುಳ-ಹಿಡಿಶಾಪ ಪಡೆದುಕೊಂಡು ಕೆಲಕಾಲ ಅಜ್ನಾತವಾಸಕ್ಕೆ ತೆರಳಿದ್ದ ಪುಟ್ಟಪ್ಪ ಅದು ಕಲಿಸಿಕೊಟ್ಟ ಜೀವನಾನುಭವದಿಂದ ಸಾಕಷ್ಟು ಮಾಗಿ ಇದೀಗ ಮೈ ಕೊಡವಿ ಎದ್ದುನಿಂತಿದ್ದಾನೆ.ಈ ಬಾರಿ ಗೆಲ್ಲಲೇಬೇಕೆನ್ನುವ ಮಹತ್ವಾಕಾಂಕ್ಷೆ-ಛಲ-ಆತ್ಮವಿಶ್ವಾಸ-ಉಮೇದು-ಇರಾದೆ-ಕನಸು ಎಲ್ಲವನ್ನು ಇಟ್ಟುಕೊಂಡು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾನೆ.ಅದು ನಾಳೆಯೇ( 08-05-2026) ಉಡ್ಡಯನಗೊಳ್ಳಲಿದೆ..ಅಂದ್ಹಾಗೆ ಆತನ … Read more

ಏಪ್ರಿಲ್,18ಕ್ಕೆ “ವಿಸ್ತಾರ” ರೀ ಲಾಂಚ್…ಶೀಘ್ರವೇ “ಫ್ರೀಡಂ” ಲೋಕಾರ್ಪಣೆ

ಭವಿಷ್ಯದ ಪರಿಣಾಮಗಳೇನೇ ಇರಲಿ,ಕನ್ನಡ ಮಾದ್ಯಮ ಲೋಕ ಎರಡು ಬೆಳವಣಿಗೆಗಳಿಗೆ ಸಾಕ್ಷಿ ಆಗುತ್ತಿದೆ.  ಒಂದು ಕೆಲ ವರ್ಷಗಳಿಂದೆ ಅಬ್ಬರದಲ್ಲಿ ಆರಂಭವಾದಷ್ಟೇ ವೇಗದಲ್ಲಿ ಬಾಗಿಲು ಮುಚ್ಚಿಕೊಂಡ ವಿಸ್ತಾರ ನ್ಯೂಸ್ ಚಾನೆಲ್ ಏಳು ಬೀಳುಗಳ ತರುವಾಯ ರೀ ಲಾಂಚ್ ಆಗುತ್ತಿರುವುದು ಮೊದಲ ಸಂಗತಿಯಾದರೆ ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲಿ ಮೂಡಿಬರುತ್ತಿದ್ದ ಫ್ರೀಡಂ ನ್ಯೂಸ್ ಚಾನೆಲ್ ಆಗಿ ಲೋಕಾರ್ಪಣೆಗೊಳ್ಳಲು ಅಣಿಯಾಗುತ್ತಿದೆ. ಕನ್ನಡ ಫ್ಲ್ಯಾಶ್ ನ್ಯೂಸೇ ,ವಿಸ್ತಾರ ನ್ಯೂಸ್ ಚಾನೆಲ್ ಬಗ್ಗೆ ಈ ಹಿಂದೆನೇ ಸಾಕಷ್ಟು ಬರೆದಿತ್ತು.ವಿಸ್ತಾರದ ಭವಿಷ್ಯ ಡೋಲಾಯಮಾನವಾದ ಸನ್ನಿವೇಶದಲ್ಲೇ ಎಚ್ಚರಿಸುವ ಕೆಲಸ … Read more

“ಅರ್ಹ”ರನ್ನು ಕಡೆಗಣಿಸ್ತಾ ಚಂದನವನ ಕ್ರಿಟಿಕ್‌ ಅವಾರ್ಡ್ಸ್‌?!

ಚಂದನವನದಲ್ಲಿ ನೀಡಲಾಗುವ ವಿಮರ್ಷಕರ ಪ್ರಶಸ್ತಿಗೆ ವಿವಾದದ ಕಳಂಕ ತಟ್ಟಿದಂತಿದೆ. ಚಿತ್ರರಂಗದ ವಿದ್ಯಾಮಾನಗಳನ್ನು ದಶಕಗಳಿಂದಲೂ ಗಮನಿಸುತ್ತಾ,ಅದರ ಒಳಹೊರಗನ್ನು ನೇರ-ನಿಷ್ಟೂರ-ತೀಕ್ಷ್ಣವಾಗಿ  ವರದಿ ಮಾಡುತ್ತಿದ್ದ ಬಹುತೇಕ ಹಿರಿಯ ಸಿನಿ ಪತ್ರಕರ್ತರನ್ನೇ ಪಕ್ಕ ಕ್ಕಿಟ್ಟು ಆಯ್ದ ಕೆಲವರೇ ಪ್ರಶಸ್ತಿ ಆಯ್ಕೆ- ಪ್ರಧಾನ ಮಾಡಿ ಮುಗಿಸಿದ್ದಾರೆನ್ನುವ ಅಸಮಾಧಾನ ಸ್ಯಾಂಡಲ್ವುಡ್‌ ನಲ್ಲಿ  ಹೊಗೆಯಾಡತೊಡಗಿದೆ. ಚಂದನವನದ ಸಿನಿ ಪತ್ರಕರ್ತರ ಒಳಗೆ ಇಷ್ಟು ದಿನ ಕುದಿಯುತ್ತಿದ್ದ ಬಂಡಾಯ-ಮುನಿಸು-ವ್ಯತ್ಯಾಸಗಳು ಅದ್ಹೇಕೋ ಸ್ಪೋಟಗೊಳ್ಳುವ ಲಕ್ಷಣ ಗೋಚರಿಸುವಂತಿದೆ. ಹೌದು..ಚಂದನವನದಲ್ಲಿ ಸಿನಿ ಪತ್ರಕರ್ತರೇ ಒಗ್ಗೂಡಿ,ಪ್ರತಿಭೆ-ಸಾಮ ರ್ಥ್ಯ ವುಳ್ಳ ಕಲಾವಿದರು-ತಂತ್ರಜ್ಞರಿಗೆ  ತೂಗಿ ಅಳೆದು ನೀಡುತ್ತಾ ಬಂದಿ … Read more

ಎಂತೆಂಥವರ ನಡುವೆ ಇಂಥವರು ನೆನಪಾಗೊಲ್ವಾ..!?

ಇವತ್ತು ಬೀದರ್‌ ನಲ್ಲಿ ನಡೆದ ಪತ್ರಿಕಾ ಸಮ್ಮೇಳನದಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಪ್ರಶಸ್ತಿಗೆ  ನಿಜವಾಗ್ಲೂ ಯೋಗ್ಯವಾದ-ಸಮರ್ಥವಾದವರಿಗೆ ನಮ್ಮದೊಂದು ಪ್ರಾಮಾಣಿಕವಾದ ಮನಸಿನ ಅಭಿನಂದನೆ..ಪ್ರಶಸ್ತಿಗೆ ಅರ್ಹರೇ ಅಲ್ಲದ ಒಂದಷ್ಟು ಜನರಿಗೂ ಪ್ರಶಸ್ತಿ ಪ್ರಧಾನ ಮಾಡಲಾಗಿದೆ ಎನ್ನುವ ಒಂದಷ್ಟು ಪತ್ರಕರ್ತರ ಆರೋಪಗಳ ಸನ್ನಿವೇಶದಲ್ಲೇ  ಯಾಕೋ ಆ ಇಬ್ಬರು ಪತ್ರಕರ್ತರು ತುಂಬಾ ನೆನಪಾದರು.ನಮ್ಮ ನಡುವೆ ಪ್ರಾಮಾಣಿಕ ಪತ್ರಿಕೋದ್ಯಮಕ್ಕೆ ಸಾಕ್ಷಿಪ್ರಜ್ಞೆಯಂತೆ ಇರುವ ಎಷ್ಟೋ ಪತ್ರಕರ್ತರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಯಾ ಎನ್ನುವ ನೋವು ಕೂಡ ಕಾಡಿತು.( ಸಧ್ಯದಲ್ಲಿ ಆ ಇಬ್ಬರು ಸಕ್ರೀಯ ಪತ್ರಿಕೋದ್ಯಮದಲ್ಲಿ ಇಲ್ಲವಾದರೂ … Read more

ಶಾಶ್ವತವಾಗಿ ಹಾಡು ನಿಲ್ಲಿಸಿದ ಆಶಾ ಬೋಸ್ಲೆ

ಪ್ರಣಯ ಗೀತೆಗಳು, ಪಾರ್ಟಿ ಸಾಂಗ್ಸ್ ಮತ್ತು ಐಟಂ ಸಾಂಗ್ಸ್, ಭಾವಪೂರ್ಣ ಗಜಲ್‌ಗಳು , ಭಕ್ತಿಗೀತೆಗಳು ,ಪಾಪ್ ಸಂಗೀತ..ಹೀಗೆ ಎಲ್ಲಾ ಗಾಯನ ಪ್ರಾಕಾರಗಳಲ್ಲಿ ತಮ್ಮ ಅತ್ಯದ್ಭುತ ಕಂಠಸಿರಿಯಿಂದ ಪ್ರಸಿದ್ದಿ ಪಡೆದಿದ್ದ ಭಾರತೀಯ ಚಿತ್ರರಂಗದ ಖ್ಯಾತ ಹಿನ್ನಲೆ ಗಾಯಕಿ ಆಶಾ ಬೋಸ್ಲೆ ಶಾಶ್ವತವಾಗಿ ಹಾಡು ನಿಲ್ಲಿಸಿದ್ದಾರೆ. ಆಶಾ ಬೋಸ್ಲೆ ಅವರಿಗೆ ೯೨ ವರ್ಷ ವಯಸ್ಸಾಗಿತ್ತು.ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರನ್ನು ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ನಿನ್ನೆ( ಶನಿವಾರ -೧೧-೦೪-೨೦೨೬) ರಂದು ದಾಖಲಿಸಲಾಗಿತ್ತು.ಅವರ ಆರೋಗ್ಯದಲ್ಲಿ ಇಂದು ಏರುಪೇರು ಕಂಡು ಬಂತು.ವೈದ್ಯರ … Read more

ಗ್ಯಾರೆಂಟಿ ಹೊರೆಗಳಿಂದ ಮತ್ತಷ್ಟು ಬಡವಾಯ್ತೇ ರಾಜ್ಯ ಸರ್ಕಾರ?

karnataka government financial crisis

ರಾಜ್ಯದ 32 ಇಲಾಖೆಗಳ 420 ಕಟ್ಟಡಗಳು ಅನುದಾನವಿಲ್ಲದೆ ಅರ್ಧಕ್ಕೆ ನಿಂತಿವೆ. ಗ್ಯಾರಂಟಿ ಹೊರೆಯಿಂದ ಅಭಿವೃದ್ಧಿ ಕಾಮಗಾರಿಗಳು ಶೂನ್ಯವಾಗುತ್ತಿವೆಯೇ? ಇಲ್ಲಿದೆ ಸಂಪೂರ್ಣ ವಿವರ.

ಶಿಕ್ಷಣ ಇಲಾಖೆಯ 3 “ದಕ್ಷ” ಅಧಿಕಾರಿಗಳ ದಿಢೀರ್‌ ವರ್ಗಾವಣೆ ..!.

sudden transfer

ದಕ್ಷರು,ಪ್ರಾಮಾಣಿಕರು.. ಶಿಕ್ಷಣ ಇಲಾಖೆಗೆ ಬೇಕಾಗಿಲ್ಲವೇ..? ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೇನೆ ಪ್ರಾಮಾಣಿಕರನ್ನು ಉಳಿಸಿಕೊಳ್ಳುವ ಮನಸ್ಸಿಲ್ಲವೇ..?

“ಕ್ಯಾಮೆರಾಮನ್‌” ಗಳ ಸಾವೆಂದರೆ ಅಷ್ಟೊಂದು “ನಿಕೃಷ್ಟ”ನಾ..?! ಕನಿಷ್ಟ ಸೌಜನ್ಯಕ್ಕೂ “ಸಂತಾಪ-ಸಹಾನುಭೂತಿ” ಬೇಡ್ವಾ..!?

the death of cameramen

ಕನ್ನಡದ ನ್ಯೂಸ್‌ ಚಾನೆಲ್‌ ಗಳಲ್ಲಿ ಕೆಲಸ ಮಾಡುವ ರಿಪೋರ್ಟರ್‌ ಗಳಿಗೆ ಇರೋ ಬೆಲೆಯಲ್ಲಿ ಅರ್ಧದಷ್ಟು ಬೇಡ..ಕಾಲು ಪರ್ಸೆಂಟ್‌ ನಷ್ಟು ಬೆಲೆಯೂ ಕ್ಯಾಮೆರಾಮನ್‌ ಗಳಿಗಿಲ್ಲ ಎನ್ನೋದು ಕಟು ವಾಸ್ತವ.