EXCLUSIVE: ಸರ್ಕಾರಕ್ಕೆ ಬೇಡವಾದ್ರಾ ಖಡಕ್‌ IPS ಶಿವಪ್ರಕಾಶ್‌ ದೇವರಾಜ್‌.! ದಕ್ಷರಾಗಿದ್ದೇ ತಪ್ಪಾ..?

ಬೆಂಗಳೂರು: ಅಪ್ರಮಾಣಿಕತೆಯನ್ನೇ ಸಹಿಸೊಲ್ಲ..ಭ್ರಷ್ಟಾಚಾರವನ್ನು ಪ್ರೋತ್ಸಾಹಿಸೊಲ್ಲ ..ಇದು ಈ ರಾಜ್ಯದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ಹೇಳಿದ್ದ ಮಾತು.ಆದರೆ ಈಗ ನಾವು ಅವರನ್ನು ಪ್ರಶ್ನಿಸ ಬೇಕಾಗಿರೋದು ಏನಂದ್ರೆ, ನೀವು ಅಧಿಕಾರ ಸಿಕ್ಕ ಉತ್ಸಾಹದಲ್ಲಿ ಹೀಗೆಂದು ಹೇಳಿಕೆ ಕೊಟ್ಟಿದ್ರೋ ಅಥವಾ ಬಾಯ್ತಪ್ಪಿನಿಂದ ಅಂದ್ರೆ ಸ್ಲಿಪ್‌ ಆಫ್‌ ಟಂಗೋ ಗೊತ್ತಾಗ್ತಿಲ್ಲ..ಏಕಂದ್ರೆ ವಾಸ್ತವದಲ್ಲಿ ನೀವಂದ ಮಾತು ಈಡೇರಲೂ ಸಾ‍ಧ್ಯವಿಲ್ಲ ಎನ್ನುವ ಸತ್ಯ ನಿಮಗೇ ಗೊತ್ತು..ಅದಕ್ಕೆ ಅವಕಾಶವನ್ನು ಅಧಿಕಾರದಲ್ಲಿರೋರೇ ಮಾಡಿಕೊಡಲ್ಲ ಎನ್ನುವ ಸತ್ಯವೂ ನಿಮ್ಗೆ ತಿಳಿದಿದೆ.ಹೀಗಿರುವಾಗ ನೀವು ಹೇಳಿದ ಮಾತು … Read more

ಟಿವಿ9 ಕನ್ನಡದಲ್ಲಿ ಕೆಲ ಸುದ್ದಿಮಿತ್ರರಿಗೆ “ಗೇಟ್ ಪಾಸ್”..! ಪ್ರಾಮಾಣಿಕ ಸಿಬ್ಬಂದಿ “ಕೇರ್ ಆಫ್ ಪುಟ್ಪಾತ್..!”

ಟಿವಿ9 ಕೇಂದ್ರ ಮ್ಯಾನೇಜ್ಮೆಂಟ್‌ ನಿಗಧಿಪಡಿಸಿದ ಮಾನದಂಡವೇ ನಿರ್ಲಕ್ಷ್ಯ:..! ಬೆಂಗಳೂರು ಕಚೇರಿಯಲ್ಲಿ ದರ್ಬಾರ್‌ ನಡೆಸ್ತಿರುವವರಿಂದ ನಿಜಕ್ಕೂ ಅರ್ಹರಿಗೆ ಆಗೋಯ್ತಾ ಅನ್ಯಾಯ..? ಬೆಂಗಳೂರು:ಟಿವಿ9  ಕನ್ನಡ(TV9 KANNADA)ದ ಕಚೇರಿಯ ಇತಿಹಾಸದಲ್ಲೇ ಇಷ್ಟೊಂದು ಭೀತಿ-ಆತಂಕದ ವಾತಾವರಣ  ಹಿಂದೆಂದೂ ನಿರ್ಮಾಣವೇ ಆಗಿರಲಿಕ್ಕಿಲ್ಲವೇನೋ..? ಫಾರ್‌ ದಿ ಫಸ್ಟ್‌ ಟೈಮ್‌ ಚಾನೆಲ್‌ ನ ಕಚೇರಿಯಲ್ಲಿ ಭಯದ ದೊಡ್ಡ  ಸುನಾಮಿನೇ ಎದ್ದಿದೆ.ಯೆಸ್..ಈ ಸುನಾಮಿ ಸಾಕಷ್ಟು ಉದ್ಯೋಗಿಗಳ “ತುತ್ತ”ನ್ನೇ ಕಸಿದುಕೊಂಡಿದೆ.ಇದಕ್ಕೆಲ್ಲಾ ಕಾರಣ ಅನಗತ್ಯ ಅಥವಾ ಹೆಚ್ಚು”ವರಿ”ವೆಚ್ಚಗಳ ಕಡಿತ ಎನ್ನಲಾಗಿದೆ.ಈ ಪೈಕಿ ಕೆಲಸ ಕಳೆದುಕೊಂಡಿರುವವರಲ್ಲಿ ಹೆಚ್ಚಿನವರು ಬೆಂಗಳೂರು ಕೇಂದ್ರ ಕಚೇರಿ ಮತ್ತು … Read more

ಕ್ರೈಂ ವರದಿಗಾರನ ಸಸ್ಪೆನ್ಸ್-ಥ್ರಿಲ್ಲರ್ ಅನುಭವವೇ “ಕಪ್ಪುಹುಂಜ” ಕಾದಂಬರಿಯಾದಾಗ..?

ಕ್ರೈಂ ಸುದ್ದಿ (crime news)ಜಗತ್ತಿನಲ್ಲಿ ಅಪರಾಧವೊಂದರ ಬೆನ್ನತ್ತಿ ವರದಿಗಾರಿಕೆ(reporting) ಮಾಡುವುದು ಒಬ್ಬ ಕ್ರೈಂ ರಿಪೋರ್ಟರ್‌ ಗೆ, ತನಿಖಾಧಿಕಾರಿಯ ಇನ್ವೆಸ್ಟಿಗೇ಼ಷನ್‌(investigation) ನಷ್ಟೇ ಸವಾಲಿನದು ಹಾಗೆಯೇ ಕ್ಲಿಷ್ಟವಾದದ್ದು, ಎಲ್ಲ ಮೀರಿ ರೋಚಕವಾದದ್ದು. ಅದಕ್ಕೊಂದು ತಾರ್ಕಿಕ ಅಂತ್ಯ ಕೊಡೋದಿದೆಯೆಲ್ಲಾ ಅದು ನೀಡುವ ಸಮಾಧಾನ-ಆತ್ಮತೃಪ್ತಿ ತುಂಬಾ ದೊಡ್ಡದು.ನಮ್ಮ ಕ್ರೈಂ ಸುದ್ದಿಮಿತ್ರರ ದೈನಂದಿನ ವೃತ್ತಿ ಯಾವುದಾದರೊಂದು ಕ್ರೈಂನ ಸುತ್ತವೇ ಸುತ್ತುತ್ತಲಿರುತ್ತದೆ.ಅದರ ಫಾಲೋಅಪ್‌, ಟ್ವಿಸ್ಟ್‌, ಯೂಟರ್ನ್‌.. ಹೀಗೆಯೇ ನಡೆದಿರುತ್ತದೆ.ಅದನ್ನೆಲ್ಲಾ ಕ್ರೋಢೀಕರಿಸಿದ್ರೆ ಎಲ್ಲರೂ ಒಂದೊಂದು ಕಥೆ-ಕಾದಂಬರಿ ಬರೆಯಬಲ್ಲಷ್ಟು ಅಗಾಧ ಅನುಭವ ಪಡೆದಿರುತ್ತಾರೆ. ಯಾವುದಾದರೂ ಅನುಭವಿ ಕ್ರೈಂ ರಿಪೋರ್ಟರ್‌(crime … Read more

ನ್ಯೂಸ್‌ ಚಾನೆಲ್‌ ಗಳ ಸಾಲಿಗೆ ಮಹಿಳಾ ಸಾರಥ್ಯದ “”ಸಂಪೂರ್ಣನ್ಯೂಸ್‌”” ಸೇರ್ಪಡೆ.

ಕನ್ನಡ ಸುದ್ದಿ ಮಾದ್ಯಮ ಕ್ಷೇತ್ರ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳಬೇಕು.ಸುದ್ದಿ ಪ್ರಸಾರದಲ್ಲಿ ಪ್ರಖರತೆ-ತೀಕ್ಷ್ಣತೆ-ಸ್ಪರ್ದಾತ್ಮಕತೆ ಬೆಳೆಯಲು ಸಾಧ್ಯ.ಇದೆಲ್ಲಕ್ಕಿಂತ ಹೆಚ್ಚಾಗಿ ಉದ್ಯೋಗವಕಾಶಗಳು ಸೃಷ್ಟಿಯಾಗಲು ಸಾ‍ಧ್ಯ. ಇದನ್ನೆಲ್ಲಾ ಹೇಳೊಕ್ಕೆ ಕಾರಣವೂ ಇದೆ..ಅದೇ ಸಂಪೂರ್ಣ ನ್ಯೂಸ್..ಸಂಪೂರ್ಣ ಗೌಡ ಅವರ ಮಾಲೀಕತ್ವದಲ್ಲಿ ಇಷ್ಟು ದಿನ ಡಿಜಿಟಲ್‌ ಫ್ಲಾಟ್‌ ಫಾರ್ಮ್‌ ನಲ್ಲಿ ಮೂಡಿಬರುತ್ತಿದ್ದ ಸಂಪೂರ್ಣ ನ್ಯೂಸ್‌ ಈಗ‌ ಪೂರ್ಣ ಪ್ರಮಾಣದಲ್ಲಿ ನ್ಯೂಸ್‌ ಚಾನೆಲ್‌ ಆಗಿ ತನ್ನ ಸುದ್ದಿ ಪ್ರಸಾರ ಶುರುಮಾಡಿದೆ.ಅದಕ್ಕೆ ಮೊದಲು ಸಂಪೂರ್ಣ ಗೌಡ ಹಾಗೂ ಅವರ ತಂಡಕ್ಕೆ ಕನ್ನಡ ಫ್ಲ್ಯಾಶ್‌ ನ್ಯೂಸ್‌ ತಂಡ  ಶುಭಾಷಯಗಳನ್ನು … Read more

ಖ್ಯಾತ ವಿಜ್ಞಾನಿ,ಸಾಹಿತಿ ಪ್ರಸನ್ನ ಸಂತೆಕಡೂರು ಗೆ ವಿಶ್ವದ ಐವರು ಅಗ್ರಗಣ್ಯ ವಿಜ್ಞಾನಿಗಳಲ್ಲಿ ಸ್ಥಾನ

ಸಂಶೋ‍ಧಕನಾಗಷ್ಟೇ ಸೀಮಿತಗೊಳ್ಳದೆ ಸಾಹಿತ್ಯಕ್ಕೂ ತನ್ನನ್ನು ತೆರೆದುಕೊಂಡು ಯಶಸ್ವಿಯಾದ ಪ್ರಸನ್ನ ಸಂತೆಕಡೂರು ಶಿವಮೊಗ್ಗ ಜಿಲ್ಲೆಯ ಪ್ರತಿಭೆ ಖ್ಯಾತ ಸಂಶೋಧಕ..ವಿಜ್ಞಾನಿ…ಶಿವಮೊಗ್ಗ ಮೂಲದ ಪ್ರತಿಭಾನ್ವಿತ ಪ್ರಸನ್ನ ಸಂತೆಕಡೂರು ಅವರಿಗೆ ವಿಶ್ವದ ಅಗ್ರಗಣ್ಯ ಐವರು ವಿಜ್ಞಾನಿಗಳ ಪಟ್ಟಿಯಲ್ಲಿ ಒಬ್ಬರಾಗಿ ಗೌರವಾನ್ವಿತ ಸ್ಥಾನ ಪಡೆದಿದ್ದಾರೆ. ಆತ್ಮೀಯ ಸ್ನೇಹಿತ ಪ್ರಸನ್ನ ಸಂತೆಕಡೂರು ಅವರಿಗೆ ಅಭಿನಂದನೆಗಳು..ಅವರ ಸಾಧನೆ ಬಗ್ಗೆ ಬರೆಯಲೇಬೇಕಿದೆ. ನಾವೆಲ್ಲಾ ಒಂದಷ್ಟು ಸಾವಿರಗಳಷ್ಟು ಸಂಬಳದ ಉದ್ಯೋಗ ಸಿಕ್ಕರೆ ಸಾಕಪ್ಪಾ..ಲೈಫ್ ಸೆಟ್ಲಾದಂತೆ ಎಂದು ಕಂಫರ್ಟ್ ಝೋನ್ ಕಂಡುಕೊಳ್ಳುವ ಯತ್ನದಲ್ಲಿದ್ದಾಗ ಪ್ರಸನ್ನ ಪ್ರಯೋಗಾಲಯಗಳಲ್ಲಿ ಸೆಲ್ಸು….ಝೀನ್ಸ್…ಇವುಗಳ ಸುತ್ತಲೇ ಪ್ರಯೋಗಶೀಲನಾಗಿದ್ದ…ಆಗಲೇ ಅನ್ನಿಸಿತ್ತು..ಈತ … Read more

ಎಲ್ಲಿಯ “ವಿಜಯ್”…! ಎಲ್ಲಿಯ “ಉಪೇಂದ್ರ”..! ಇಬ್ಬರ  ಹೋಲಿಕೆ ಸರಿನಾ..?

ಪಕ್ಷ ಕಟ್ಟಿದ ದಿನದಿಂದಲೇ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತಂದ ವಿಜಯ್‌ ಜತೆ, ಮನೆಯಲ್ಲೇ ಕೂತು ಬದಲಾವಣೆ ಬಗ್ಗೆ ಕಂಠಶೋಷಣೆ ಮಾಡಿಕೊಳ್ಳುವ  ಉಪೇಂದ್ರ ಹೋಲಿಕೆ ಸರಿನಾ..! ತಮಿಳ್ನಾಡು(tamilnadu) ರಾಜಕೀಯದಲ್ಲಿ ಬಹುದೊಡ್ಡ ಕ್ರಾಂತಿ ನಡೆದು ಸಿನೆಮಾ ನಟ(cinema star) ವಿಜಯ್‌ (vijay)  ಸಿಎಂ ಆಗುತ್ತಿದ್ದಂತೆ ನಮ್ಮ ಕರ್ನಾಟಕದಲ್ಲಿ  ಮಾದ್ಯಮಗಳಿಗೆ (karnataka medais)ಅದ್ಹೇಕೆ, ರಿಯಲ್‌ ಸ್ಟಾರ್‌ ಹಾಗೂ ಬುದ್ದಿವಂತ ನಟ ಉಪೇಂದ್ರ (real star upendra) ಅವರ ಬೆನ್ನು ಹತ್ತಿ ಕಾಡುವ ಕೆಟ್ಟ ಛಟ-ಚಾಳಿ ಮೈ ಗಂಟಿದೆಯೋ ಗೊತ್ತಾಗ್ತಿಲ್ಲ … Read more

ತಿಂಗಳೆಲ್ಲಾ ದುಡಿದ್ರೂ ಸುದ್ದಿಮನೆ ಮಿತ್ರರಿಗೇಕಿಲ್ಲ “ಸಂಪೂರ್ಣ” ಸಂಬಳ..!?

ಇದು… ಕನ್ನಡ ಸುದ್ದಿ ಚಾನೆಲ್‌ ಗಳ ಸಾಲಿಗೆ ಮತ್ತೊಂದಾಗಿ ಸೇರ್ಪಡೆಯಾಗುವ ಸಾಧ್ಯತೆ ಸೃಷ್ಟಿಸಿದ್ದ ಡಿಜಿಟಲ್‌ ಚಾನೆಲ್‌ ವೊಂದರ ಬೆಳವಣಿಗೆ ದೃಷ್ಟಿಯಿಂದ  ನಿಜಕ್ಕೂ ಒಳ್ಳೆಯ  ಸುದ್ದಿಯಲ್ಲ.. ಏಕೆಂದರೆ ಕೆಲವು ವಿಶ್ವಸನೀಯ ಮೂಲಗಳ ಪ್ರಕಾರ, ಅಲ್ಲಿ ದುಡಿಯುತ್ತಿರುವ ಕೆಲವು ಮಾದ್ಯಮ ಸಿಬ್ಬಂದಿಗೆ ವೇತನವನ್ನೇ ನೀಡಿಲ್ಲ ಎನ್ನುವ ಮಾಹಿತಿ  ಸುದ್ದಿಜಗತ್ತಿನಲ್ಲಿ ಪಸರ್‌ ಆಗಿದೆ. ಆರ್ಥಿಕವಾಗಿ ಆ ಡಿಜಿಟಲ್‌ ಚಾನೆಲ್‌ ನ ಸ್ತಿತಿ ಚೆನ್ನಾಗಿದ್ದರೂ ಸಿಬ್ಬಂದಿಯನ್ನು ಮಾತ್ರ ಸಂಬಳ ಕೊಡದೆ ಸತಾಯಿಸಲಾಗುತ್ತಿದೆಯಂತೆ. ಒಂದಷ್ಟು ಜನರಿಗೆ ಸಂಬಳ ಕೊಟ್ಟು ಇನ್ನೊಂದಷ್ಟು ಸಿಬ್ಬಂದಿ ವೇತನವನ್ನು ತಡೆಹಿಡಿದಿಟ್ಟುಕೊಳ್ಳಲಾಗಿದೆಯಂತೆ. … Read more

ನಾಳೆ ಪತ್ರಕರ್ತ ಪುಟ್ಟಪ್ಪ ಸಾರಥ್ಯದ “ಪೊಲಿಟಿಕಲ್-360” ಲಾಂಚ್

ಮೈಸೂರಿನ ಪತ್ರಕರ್ತ ಮಿತ್ರ ಪುಟ್ಟಪ್ಪ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾನೆ.ಮೊದಲು ಆತನಿಗೊಂದು ಆಲ್ ದಿ ಬೆಸ್ಟ್…ಅಂದ್ಹಾಗೆ ಪೊಲಿಟಿಕಲ್ 360 ಎನ್ನುವ ಡಿಜಿಟಲ್ ಫ್ಲಾಟ್ ಫಾರ್ಮ್ ನ್ನೇ ಚಾನೆಲ್ ಮಾಡ್ಲಿಕ್ಕೆ ಹೋಗಿ ತನ್ನದಲ್ಲದ ತಪ್ಪಿಗೆ ವಿರೋಧ-ವಿವಾದ ಎಲ್ಲವನ್ನು ಮೈಮೇಲೆ ಎಳೆದುಕೊಂಡು, ಬೈಗುಳ-ಹಿಡಿಶಾಪ ಪಡೆದುಕೊಂಡು ಕೆಲಕಾಲ ಅಜ್ನಾತವಾಸಕ್ಕೆ ತೆರಳಿದ್ದ ಪುಟ್ಟಪ್ಪ ಅದು ಕಲಿಸಿಕೊಟ್ಟ ಜೀವನಾನುಭವದಿಂದ ಸಾಕಷ್ಟು ಮಾಗಿ ಇದೀಗ ಮೈ ಕೊಡವಿ ಎದ್ದುನಿಂತಿದ್ದಾನೆ.ಈ ಬಾರಿ ಗೆಲ್ಲಲೇಬೇಕೆನ್ನುವ ಮಹತ್ವಾಕಾಂಕ್ಷೆ-ಛಲ-ಆತ್ಮವಿಶ್ವಾಸ-ಉಮೇದು-ಇರಾದೆ-ಕನಸು ಎಲ್ಲವನ್ನು ಇಟ್ಟುಕೊಂಡು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾನೆ.ಅದು ನಾಳೆಯೇ( 08-05-2026) ಉಡ್ಡಯನಗೊಳ್ಳಲಿದೆ..ಅಂದ್ಹಾಗೆ ಆತನ … Read more

ಏಪ್ರಿಲ್,18ಕ್ಕೆ “ವಿಸ್ತಾರ” ರೀ ಲಾಂಚ್…ಶೀಘ್ರವೇ “ಫ್ರೀಡಂ” ಲೋಕಾರ್ಪಣೆ

ಭವಿಷ್ಯದ ಪರಿಣಾಮಗಳೇನೇ ಇರಲಿ,ಕನ್ನಡ ಮಾದ್ಯಮ ಲೋಕ ಎರಡು ಬೆಳವಣಿಗೆಗಳಿಗೆ ಸಾಕ್ಷಿ ಆಗುತ್ತಿದೆ.  ಒಂದು ಕೆಲ ವರ್ಷಗಳಿಂದೆ ಅಬ್ಬರದಲ್ಲಿ ಆರಂಭವಾದಷ್ಟೇ ವೇಗದಲ್ಲಿ ಬಾಗಿಲು ಮುಚ್ಚಿಕೊಂಡ ವಿಸ್ತಾರ ನ್ಯೂಸ್ ಚಾನೆಲ್ ಏಳು ಬೀಳುಗಳ ತರುವಾಯ ರೀ ಲಾಂಚ್ ಆಗುತ್ತಿರುವುದು ಮೊದಲ ಸಂಗತಿಯಾದರೆ ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲಿ ಮೂಡಿಬರುತ್ತಿದ್ದ ಫ್ರೀಡಂ ನ್ಯೂಸ್ ಚಾನೆಲ್ ಆಗಿ ಲೋಕಾರ್ಪಣೆಗೊಳ್ಳಲು ಅಣಿಯಾಗುತ್ತಿದೆ. ಕನ್ನಡ ಫ್ಲ್ಯಾಶ್ ನ್ಯೂಸೇ ,ವಿಸ್ತಾರ ನ್ಯೂಸ್ ಚಾನೆಲ್ ಬಗ್ಗೆ ಈ ಹಿಂದೆನೇ ಸಾಕಷ್ಟು ಬರೆದಿತ್ತು.ವಿಸ್ತಾರದ ಭವಿಷ್ಯ ಡೋಲಾಯಮಾನವಾದ ಸನ್ನಿವೇಶದಲ್ಲೇ ಎಚ್ಚರಿಸುವ ಕೆಲಸ … Read more

“ಅರ್ಹ”ರನ್ನು ಕಡೆಗಣಿಸ್ತಾ ಚಂದನವನ ಕ್ರಿಟಿಕ್‌ ಅವಾರ್ಡ್ಸ್‌?!

ಚಂದನವನದಲ್ಲಿ ನೀಡಲಾಗುವ ವಿಮರ್ಷಕರ ಪ್ರಶಸ್ತಿಗೆ ವಿವಾದದ ಕಳಂಕ ತಟ್ಟಿದಂತಿದೆ. ಚಿತ್ರರಂಗದ ವಿದ್ಯಾಮಾನಗಳನ್ನು ದಶಕಗಳಿಂದಲೂ ಗಮನಿಸುತ್ತಾ,ಅದರ ಒಳಹೊರಗನ್ನು ನೇರ-ನಿಷ್ಟೂರ-ತೀಕ್ಷ್ಣವಾಗಿ  ವರದಿ ಮಾಡುತ್ತಿದ್ದ ಬಹುತೇಕ ಹಿರಿಯ ಸಿನಿ ಪತ್ರಕರ್ತರನ್ನೇ ಪಕ್ಕ ಕ್ಕಿಟ್ಟು ಆಯ್ದ ಕೆಲವರೇ ಪ್ರಶಸ್ತಿ ಆಯ್ಕೆ- ಪ್ರಧಾನ ಮಾಡಿ ಮುಗಿಸಿದ್ದಾರೆನ್ನುವ ಅಸಮಾಧಾನ ಸ್ಯಾಂಡಲ್ವುಡ್‌ ನಲ್ಲಿ  ಹೊಗೆಯಾಡತೊಡಗಿದೆ. ಚಂದನವನದ ಸಿನಿ ಪತ್ರಕರ್ತರ ಒಳಗೆ ಇಷ್ಟು ದಿನ ಕುದಿಯುತ್ತಿದ್ದ ಬಂಡಾಯ-ಮುನಿಸು-ವ್ಯತ್ಯಾಸಗಳು ಅದ್ಹೇಕೋ ಸ್ಪೋಟಗೊಳ್ಳುವ ಲಕ್ಷಣ ಗೋಚರಿಸುವಂತಿದೆ. ಹೌದು..ಚಂದನವನದಲ್ಲಿ ಸಿನಿ ಪತ್ರಕರ್ತರೇ ಒಗ್ಗೂಡಿ,ಪ್ರತಿಭೆ-ಸಾಮ ರ್ಥ್ಯ ವುಳ್ಳ ಕಲಾವಿದರು-ತಂತ್ರಜ್ಞರಿಗೆ  ತೂಗಿ ಅಳೆದು ನೀಡುತ್ತಾ ಬಂದಿ … Read more